ಬುಧವಾರ, ಜುಲೈ 30, 2014

ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣವಿತ್ತೇ?


ಡಾ.ಲಕ್ಷ್ಮೀ ಜಿ. ಪ್ರಸಾದ.

ಲೈಂಗಿಕ ಶಿಕ್ಷಣ-ಚಿಂತನ ಮಂಥನ
"ಕಣ್ಣಾ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರುಳೇ ಹೋಯ್ತು, ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮಯ ಹಕ್ಕಿ ರಕ್ಷಿಸಿಕೊಳ್ಳಿ"
ಓಡಿಸಿಕೊಂಡು ಬರುವಾತ ಒಬ್ಬ, ಓಡಿ ತಪ್ಪಿಸಿಕೊಳ್ಳುವವರು ಹಲವರು. ಸಿಕ್ಕಿಹಾಕಿಕೊಳ್ಳುವಾತ ನಂತರ ಓಡಿಸಿ ಹಿಡಿಯುವಾತನಾಗುವ ಈ ಮಕ್ಕಳ ಜನಪದ ಆಟದಲ್ಲಿ ಹುಡುಗ ಹುಡುಗಿಯರ ಮಧ್ಯೆ ಬೇಧವಿಲ್ಲ. ಆದರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜಾಣತನವನ್ನು ಇದು ಹೇಳಿಕೊಡುತ್ತದೆ.

ಇಂದಿನ ದಿನಗಳಲ್ಲಿ ಸಾಕಷ್ಟು ಚರ್ಚಿತವಾಗುತ್ತಿರುವ ಲೈಂಗಿಕ ಶಿಕ್ಷಣ ಜನಪದರಲ್ಲಿ ಇತ್ತೇ? ಇದ್ದರೆ ಯಾವ ಮಾದರಿಯದು? ಅದನ್ನು ಇಂದಿನ ಆಧುನಿಕ ಜಗತ್ತಿನಲ್ಲಿ ಅಳವಡಿಸಲು ಸಾಧ್ಯವೇ, ಅತ್ಯಾಚಾರದಂತಹ ವಿಕೃತಿಗಳಿಗೆ ಕೂಡಾ ಜನಪದ ಸಾಹಿತ್ಯದಲ್ಲಿ ಪರಿಹಾರವಿದೆಯೇ ಎಂದು ಯೋಚಿಸಿದಾಗ ಮೊದಲಿಗೆ ನೆನಪಿಗೆ ಬರುವುದು ಛತ್ತೀಸ್‌ಗಢದ ಬಸ್ತರ್ ಜಿಲ್ಲೆಯಲ್ಲಿ ಪ್ರಚಲಿತವಿರುವ "ಘೋಟುಲ್‌" ಎಂಬ ಒಂದು ಅನೌಪಚಾರಿಕ ಜನಪದ ಶಿಕ್ಷಣ ವ್ಯವಸ್ಥೆ.

ಘೋಟುಲ್ ಎಂಬುದು ಬಸ್ತರ್‌ನಲ್ಲಿ ಪ್ರಚಲಿತವಿರುವ ಹಲ್ಬಿ ಭಾಷೆಯ ಪದವಾಗಿದ್ದು, ಇದರ ಶಬ್ದಶಃ ಅರ್ಥ ಎಲ್ಲೆಡೆ ಎಂದು. ಬಹುಶಃ ಎಲ್ಲೆಡೆ ಇರಲೇಬೇಕಾದ್ದು ಎಂಬರ್ಥದಲ್ಲಿ ಘೋಟುಲ್ ಶಬ್ದ ಬಳಕೆಗೆ ಬಂದಿರುವ ಸಾಧ್ಯತೆ ಇದೆ.

ಜನಪದ ಅಧ್ಯಯನ ಕ್ಷೇತ್ರದಲ್ಲಿ ಘೋಟುಲ್ ಒಂದು ವಿಶಿಷ್ಟ ಮಾದರಿ. ಇದೊಂದು ಬಸ್ತರ್ ಬುಡಕಟ್ಟು ಜನರ ಕಾಡಿನ ಯುವ ವಿಶ್ವ. ಪ್ರಸ್ತುತ ಛತ್ತೀಸ್‌ಗಢಕ್ಕೆ ಸೇರಿರುವ, ಮಧ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿನ ವಿಸ್ತಾರವಾದ ಒಂದು ಜಿಲ್ಲೆ ಬಸ್ತರ್. ಜಗದಲಪುರ ಅದರ ಆಡಳಿತ ಕೇಂದ್ರ. ಹಿಂದೆ ಇಲ್ಲಿ ಅರಸರ ಆಡಳಿತವಿತ್ತು. ಇಲ್ಲಿನ ನಾರಾಯಣಪುರ ತಹಸೀಲದಲ್ಲಿ ಹಳ್ಳಕೊಳ್ಳ, ಬೆಟ್ಟಗಳ ದುರ್ಗಮ ಪ್ರದೇಶವಾದ ಅಬುಜ್‌ಮಾಡ ಹರಡಿಕೊಂಡಿದ್ದು ಅಲ್ಲಿನ ಆದಿವಾಸಿಗಳು ಆಧುನಿಕತೆಯ ಸೋಂಕಿಗೆ ಒಳಗಾಗದೇ ತಮ್ಮ ಸಂಪ್ರದಾಯ, ಹಾಡು, ಹಸೆ, ಕಲೆ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಹಳ್ಳಿಗಳಲ್ಲಿ ಶೇ.72 ಬುಡ ಕಟ್ಟು ಆದಿವಾಸಿ ಜನರು ಬದುಕುತ್ತಿದ್ದಾರೆ.

ಘೋಟುಲ್ ಆದಿ ಮಾನವನ ಕಾಲದಿಂದಲೂ ಬೆಳೆದು ಬಂದ ಜೀವನ ಶಿಕ್ಷಣ ಸಂಸ್ಥೆ ಎಂದು ಮಾನವ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬಸ್ತರಿಗೆ ಅಧ್ಯಯನ ಪ್ರವಾಸ ಮಾಡಿರುವ ಡಾ. ಕೃಷ್ಣಾನಂದ ಕಾಮತ್ ಅವರು "ಇದೊಂದು ಜೀವಂತ ವಿದ್ಯಾಲಯ, ಇಲ್ಲಿ ಪುಸ್ತಕದ ಪಾಂಡಿತ್ಯ, ಔಪಚಾರಿಕ ಶಿಕ್ಷಣಕ್ಕೆ ಬೆಲೆ ಇಲ್ಲ. ದಿನವೂ ಬಾಳಿ ಬದುಕುವ ವಿದ್ಯೆ ಹೇಳಿ ಕೊಡಲಾಗುತ್ತದೆ. ಈ ಸಂಸ್ಥೆ ನಾಗರಿಕ ಪ್ರಪಂಚಕ್ಕೊಂದು ವಿಸ್ಮಯವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುರಿಯಾ ಆದಿ ವಾಸಿಗಳು ಪ್ರತಿ ಹಳ್ಳಿಗೆ ಒಂದರಂತೆ ಒಂದು ಘೋಟುಲ್ ಸಿದ್ಧ ಪಡಿಸಿಕೊಂಡಿರುತ್ತಾರೆ. ಹಳ್ಳಿ ದೊಡ್ಡದಿದ್ದರೆ ಎರಡು ಮೂರು ಘೋಟುಲ್‌ಗಳೂ ಇರುತ್ತವೆ. ಇದು ಅವರ ಕಿರಿಯ ವಿಶ್ವ. ಹಳ್ಳಿಯ ಹೊರಭಾಗದಲ್ಲಿರುವ ಘೋಟುಲ್ ಒಂದು ಗುಡಿಸಲಿನಂತೆ ಅಥವಾ ದೊಡ್ಡ ಬೈಠಕ್ ಖಾನೆಯಂತೆ ಇರುತ್ತದೆ."ಚಳಿಗಾಲಕ್ಕಾಗಿ ಬೆಳಕು ಗಾಳಿಯಾಡದ ಒಂದು ಕಟ್ಟಡ ಹಾಗೂ ಬೇಸಿಗೆಗಾಗಿ ಕೇವಲ ಒಂದು ಮಾಡು ಇರುವ ಪಡಸಾಲೆಯೊಂದಿರುತ್ತದೆ" ಎಂದು ಡಾ.ಕೃಷ್ಣಾನಂದ ಕಾಮತರು ಹೇಳಿದ್ದಾರೆ.

ಗೋಡೆಗಳ ಮೇಲೆ ಆನೆ ನವಿಲು ಮೊದಲಾದ ಉಬ್ಬು ಚಿತ್ರಗಳು, ಜೊತೆಗೆ ಸುಗ್ಗಿ ಸಮಯದಲ್ಲಿ ಅಕ್ಕಿ ಹಿಟ್ಟಿನಿಂದ ರಚಿಸಿದ ರಂಗೋಲಿ ಮಾದರಿಯ ಚಿತ್ರಗಳು (ಧಪ್ಪಾ ) ಇರುತ್ತವೆ. ಇದ್ದಿಲಿನಿಂದ ರಚಿಸಿದ ಹೆಣ್ಣಿನ ಹಲವು ಬಗೆ ಚಿತ್ರಗಳು ಇರುತ್ತವೆ. ಸ್ತನ, ಜನನೇಂದ್ರಿಯಗಳ ಚಿತ್ರಗಳನ್ನು ಬೃಹದಾಕಾರದಲ್ಲಿ ಬಿಡಿಸಿರುತ್ತಾರೆ.

ಇದು ಹಳ್ಳಿಯ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಿರುತ್ತದೆ. ಘೋಟುಲ್‌ಗಳಿಗಾಗಿ ಹೊಲದಲ್ಲಿ ಬತ್ತ  ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಜವಾಬ್ದಾರಿ ಘೋಟುಲ್ ಸದಸ್ಯರದ್ದು. ಇಲ್ಲಿ ಆರು ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಸದಸ್ಯರು. ವಿವಾಹಿತ ಪ್ರೌಢ ಗೃಹಸ್ಥರಿಗೆ ಇಲ್ಲಿ ಪ್ರವೇಶವಿಲ್ಲ!

ಮುರಿಯಾ ಬುಡಕಟ್ಟಿನ ಮಕ್ಕಳು, ಯುವಕ (ಚಿಲಕ್ ), ಯುವತಿ (ಮೋತಿಯಾರಿ )ಯರು ಘೋಟುಲ್ ಅನ್ನು ತುಂಬಾ ಇಷ್ಟಪಡುತ್ತಾರೆ. ವಾರಕ್ಕೊಮ್ಮೆ ಎರಡು ಬಾರಿ ಹದಿಹರೆಯದ ಕಿಶೋರ- ಕಿಶೋರಿಯರು, ಅವಿವಾಹಿತ ಯುವಕ-ಯುವತಿಯರು ಹಿರಿಯರ ಅನುಮತಿ ಪಡೆದು ಘೋಟುಲ್‌ನಲ್ಲಿ ಒಟ್ಟು ಸೇರುತ್ತಾರೆ.

ಕೃಷಿ, ಬೇಟೆ, ಮೃದಂಗ, ಕೊಳಲು, ಸಾಂಪ್ರದಾಯಿಕ ಹಾಡು, ಕಥೆ ಮೊದಲಾದವುಗಳೊಂದಿಗೆ ಇವರಿಗೆ ಇಲ್ಲಿ ಲೈಂಗಿಕ ಶಿಕ್ಷಣವೂ ದೊರೆಯುತ್ತದೆ. "ಸರಳತೆ, ಸಮಾನತೆ ಹಾಗೂ ಸ್ವಾತಂತ್ರ್ಯ" ಘೋಟುಲ್ ಜೀವನದ ಜೀವಾಳ. ಇಲ್ಲಿ ಗಂಡು ಹೆಣ್ಣು ಸಮಾನರು. ಇಂದಿನ ಆಧುನಿಕ ಶಿಕ್ಷಣದ ನಡುವೆಯೂ ಪರಿಹರಿಸಲಾಗದ ಯುವ ಜನರ ಸಮಸ್ಯೆಗಳನ್ನು ಬಸ್ತರ್‌ನ ಬುಡಕಟ್ಟು ಜನರಾದ ಮುರಿಯಾಗಳು ಶತಕಗಳ ಹಿಂದೆಯೇ ಸಹಜವಾಗಿಯೇ ಪರಿಹರಿಸಿಕೊಂಡಿದ್ದಾರೆ.
ಘೋಟುಲ್‌ನಲ್ಲಿ ಇವರೆಲ್ಲ ಗಂಡು ಹೆಣ್ಣು ಎಂಬ ಅಂತರವಿಲ್ಲದೆ ಉಂಡು ತಿಂದು ಮಲಗುತ್ತಾರೆ. ಯುವಕ ಯುವತಿಯರು ಜೊತೆಯಲ್ಲಿಯೇ ನದಿಯಲ್ಲಿ ನಗ್ನರಾಗಿ ಈಜಾಡುವಷ್ಟು ಸಮಾನತೆ, ಸಹಜತೆ ಅವರಲ್ಲಿದೆ.
ಘೋಟುಲ್‌ಗಳಲ್ಲಿ  ಹಿರಿಯ ಯುವತಿಯರು (ಮೋತಿಯಾರಿ) ಕಿರಿಯರಿಗೆ (ಚಿಲಕ್) ಲೈಂಗಿಕ ತಿಳಿವಳಿಕೆ ನೀಡುತ್ತಾರೆ. ಶರೀರವನ್ನು ನಿಸರ್ಗಕ್ಕೆ ಹೋಲಿಸಿ ಅಲ್ಲಿಯ ಎತ್ತರ ತಗ್ಗು, ಬೆಟ್ಟ ಕಣಿವೆಗಳಂತೆಯೇ ಶರೀರ. ಮಳೆ, ಗಾಳಿ, ಸಮುದ್ರದಲ್ಲಿ ಏರಿಳಿತ ಇರುವಂತೆಯೇ ಉತ್ತೇಜನ ಉಂಟಾದಾಗ ಮನುಷ್ಯನ ದೇಹ ಸ್ವಭಾವಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಸಂತ ಋತುವಿನಲ್ಲಿ ಪ್ರಕೃತಿಯಲ್ಲಿ ಹೂ ಹಣ್ಣು ಬೆಳೆಯುವಂತೆ ಪ್ರತಿ ಹುಡುಗ ಹುಡುಗಿಯರಲ್ಲೂ ವಸಂತ ಕಾಲ ಇರುತ್ತದೆ. ಇತ್ಯಾದಿಯಾಗಿ ದೇಹದ ಬಗ್ಗೆ ತಿಳಿವಳಿಕೆ ನೀಡುತ್ತಾರೆ. ಸ್ವಚ್ಛತೆಯ ಬಗ್ಗೆಯೂ ಪಾಠ ನಡೆಯುತ್ತದೆ.
ಘೋಟುಲ್‌ನಲ್ಲಿ ಪ್ರೇಮ ಕಾಮಗಳು ಹಸಿವೆ ನಿದ್ರೆಯಂತೆಯೇ ಸಹಜವಾದುದು! ಆದ್ದರಿಂದ ಅಲ್ಲಿ ಯಾವುದೇ ವಿಕೃತಿಗೆ ಎಡೆಯೇ ಇಲ್ಲ..
ಈ ಬಗ್ಗೆ ಡಾ.ಕೃಷ್ಣಾನಂದ ಕಾಮತರು "ಘೋಟುಲ್‌ನಲ್ಲಿ ರಾತ್ರಿ ಹೊತ್ತು ಹಿರಿಯ ಮೋತಿಯಾರಿ ಚಾಪೆಯ ಜೋಡಿಗಳನ್ನು ತಿಳಿಸುತ್ತಾಳೆ. ಪ್ರತಿ ದಿನ ಜತೆಗಾರರು ಬದಲಾಗುತ್ತಾರೆ. ಪ್ರತಿ ದಿನದ ಚಾಪೆ ಜೋಡಿಗಳನ್ನು  ಹೆಸರಿಸಿದ ನಂತರ ಸದಸ್ಯರೆಲ್ಲರೂ ಸ್ವತಂತ್ರರು. ಚಿಕ್ಕ ಮಕ್ಕಳ ವಿಷಯದಲ್ಲಿ ಇವರು ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ತಮಗೆ ಸರಿ ಕಂಡವರೊಡನೆ ಮಲಗುತ್ತಾರೆ. ಬಾಲ್ಯದಲ್ಲಿ ಅಣ್ಣ ತಂಗಿಯರಂತೆ ಒಟ್ಟಿಗೆ ಮುದುಡಿಕೊಂಡು ಮಲಗಿದರೆ ಸ್ವಲ್ಪ ಸಮಯದ ನಂತರ ಒಬ್ಬರ ಕಾವಿಗೆ ಇನ್ನೊಬ್ಬರು, ಒಬ್ಬರ ಹೃದಯ ಮಿಡಿತ ಕೇಳಿಸುವಂತೆ ಮಲಗುತ್ತಾರೆ. ಒಂದೇ ಕೋಣೆಯಲ್ಲಿ ಸಹೋದರ ಸಹೋದರಿಯರು ತಮ್ಮ ತಮ್ಮ ಪ್ರಿಯೆ ಪ್ರಿಯತಮರೊಡನೆ ವಿರಮಿಸುವ ಅವಕಾಶ ನೀಡುವ ಸಮಾಜ ವಿಶ್ವದಲ್ಲಿ ಇನ್ನೊಂದು ಇದೆಯೋ ಇಲ್ಲವೋ?" ಎನ್ನುತ್ತಾರೆ.

ಇಲ್ಲಿ ಲೈಂಗಿಕ ಕ್ರಿಯೆ ಗೌಪ್ಯ ಎಂದಾಗಲೀ, ಅಪರಾಧ ಎಂಬ ಭಾವಾಗಲೀ ಇಲ್ಲವೇ ಇಲ್ಲ. ಊಟ ತಿಂಡಿ ನಿದ್ರೆಯಂತೆಯೇ ಸಹಜವಾದುದು. ಇದರಿಂದಾಗಿ ಲೈಂಗಿಕ ತಿಳಿವಳಿಕೆ ಇಲ್ಲದೇ ಇರುವವರಿಗೆ, ಚಿಕ್ಕವರಿಗೆ ಲೈಂಗಿಕ ಶಿಕ್ಷಣ ಸಹಜವಾಗಿಯೇ ದೊರೆಯುತ್ತದೆ.

ಅಕ್ಕ ಪಕ್ಕದಲ್ಲಿ ಪ್ರೇಮ ಕಲಹ, ಪ್ರಣಯ ಕ್ರೀಡೆಗಳಲ್ಲಿ ನಿರತರಾಗಿರುವ ಹಿರಿಯ ಜೋಡಿಗಳನ್ನು ನೋಡಿ ಕಿರಿಯರು ಅದನ್ನು ಅನುಸರಿಸುತ್ತಾರೆ. ಇವರ ಪ್ರಣಯಾವಸ್ಥೆ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಮೋತಿಯಾರಿ (ಮುರಿಯಾ ಕನ್ಯೆ ) ಎಷ್ಟೇ ಚಿಕ್ಕವಳಿದ್ದರೂ ಈ ವಿಷಯದಲ್ಲಿ ಪ್ರಬುದ್ಧಳು. ಚಿಲಕರು ಹಾಗೂ ಮೋತಿಯಾರಿಗಳು ತಮಗೆ ಬಂದ ಅಡಚಣೆ, ಅಡ್ಡಿ ಆತಂಕ ಸಂಶಯಗಳನ್ನುತಮಗಿಂತ ಹಿರಿಯರಿಗೆ ಕೇಳಿ ಪರಿಹಾರ ಪಡೆಯುತ್ತಾರೆ. ಈ ಬಗ್ಗೆ ಯಾವುದೇ ಅಳುಕು ನಾಚಿಕೆ ಇರುವುದಿಲ್ಲ.
ಘೋಟುಲ್‌ನಲ್ಲಿ ಪ್ರೇಮ, ಪ್ರಣಯ ಯುವತಿಯ ಹಕ್ಕು, ಯುವಕನ ಕರ್ತವ್ಯ. ಅಂತೆಯೇ ಪ್ರಚೋದನೆಯಲ್ಲಿ ಆಕೆಯೇ ಮುಂದಾಗುತ್ತಾಳೆ. ರಾತ್ರಿಯ ಚಾಪೆಯ ಜೋಡಿಗಳಲ್ಲಿ ಪರಸ್ಪರ ಸಹಮತ, ಒಪ್ಪಿಗೆ ಇದ್ದರೆ ಮಾತ್ರ ಪ್ರಣಯ. ಬಲಾತ್ಕಾರದ ಪ್ರಶ್ನೆಯೇ ಇರುವುದಿಲ್ಲ. ಹಾಗೆಂದು ಯಾರೂ ಪಕ್ಷಪಾತ ಮಾಡುವಂತಿಲ್ಲ. ಹಾಗೆ ಮಾಡಿದರೆ ಅವರಿಗೆ ಶಿಕ್ಷೆ ಕೂಡ ಇರುತ್ತದೆ.
"ಚಿಲಕ ಮೋತಿಯಾರಿಗಳು ಪ್ರೇಮ ಬಂಧದಲ್ಲಿ ಸಿಲುಕದಂತೆ ಕಟ್ಟು ಪಾಡು ಇದ್ದರೂ ಆಗೊಮ್ಮೆ ಈಗೊಮ್ಮೆ ಇಂಥ ಪ್ರೇಮಿಗಳ ಉದಾಹರಣೆ ಸಿಗುತ್ತವೆ" ಎಂದು ಕೃಷ್ಣಾನಂದ ಕಾಮತರು ಹೇಳುತ್ತಾರೆ. ಈ ಬಗ್ಗೆ ಒಂದು ಹಾಡು ಹಾಗೂ ಕಥೆ ಅಲ್ಲಿ ಜನಪ್ರಿಯವಾಗಿದೆ:

"ಒಬ್ಬ ಬಡ ಚಿಲಕ (ಮುರಿಯಾ ಯುವಕ ) ಊರ ಕೊತ್ವಾಲನ ಮಗಳನ್ನು ಪ್ರೀತಿಸುತ್ತಾನೆ. ಆದರೆ ಕೊತ್ವಾಲ ಕೇಳಿದಷ್ಟು ವಧು ದಕ್ಷಿಣೆ ಕೊಡಲು ಸಾಧ್ಯವಾಗುವುದಿಲ್ಲ(ಮುರಿಯಾಗಳಲ್ಲಿ ವಧು ದಕ್ಷಿಣೆ ಪದ್ಧತಿ ಜಾರಿಯಲ್ಲಿದೆ ). ಅವರು ಊರು ಬಿಟ್ಟು ಓಡಿ ಹೋಗಿ ಕಾಡು ಮೇಡು ಅಲೆಯುತ್ತಾರೆ. ಕೊನೆಗೆ ಮೋತಿಯಾರಿ ಹುಲಿ ಬಾಯಿಗೆ ಸಿಕ್ಕು ಸಾಯುತ್ತಾಳೆ. ವಿರಹ ತಾಳಲಾಗದೆ ಚಿಲಕನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ."

ಈ ಆದರ್ಶ ಪ್ರೇಮಿಗಳ ಕಥೆ ಘೋಟುಲ್‌ನಲ್ಲಿ ಎಲ್ಲರಿಗೂ ಬಹಳ ಪ್ರಿಯವಾದುದಾಗಿದೆ. ಮೂಲತಃ ಈ ಹಾಡು ಹಲ್ಬಿ ಭಾಷೆಯಲ್ಲಿದ್ದು ಅದರ ಕನ್ನಡ ಅನುವಾದವನ್ನು ಕೃಷ್ಣಾನಂದ ಕಾಮತರು ಹೀಗೆ ಮಾಡಿದ್ದಾರೆ:

ದಿನವೆಲ್ಲ ಮೈಮುರಿದು ದುಡಿದಿಹೆನು ಪ್ರಿಯೇ, ಬಳಲಿ ಬೆಂಡಾಗಿ ಮರಳಿ ಬಂದಿಹೆನು/ ಮಿಂದುಂಡು ಒರಗಿರಲು ನಿನ್ನ ನೆನಪಾಗಿಹುದು, ಊರವರ ಕಣ್ಣು ತಪ್ಪಿಸಿ ಕಾಡ ಹಾದಿಯ ತುಳಿದು/ ಕೆರೆಯ ದಂಡೆಯಿಂದ ಪೊದೆಯ ಸಂಧಿಯಿಂದ, ಕತ್ತಲಲ್ಲಿ ಜಾರುತ್ತ ನುಸುಳುತ್ತ ನಿನಗಾಗಿ ಅಲೆದೆ/ ಕುಣಿಯಲಂಗಣವಿಲ್ಲ, ಕೊಳಲು-ಡೋಲುಗಳಿಲ್ಲ/  ಜೊತೆಯ ಹಾಡಿಲ್ಲ, ನೆರೆಕರೆಯವರು ಮಲಗಿಹರು/ ಒಟ್ಟಿಗೆ ಒರಗಿ ರಾತ್ರಿಯಾದರೂ ಕಳೆಯೋಣ/ ಮಂದ ಮಾರುತ, ಹೂಗಳರಳಿಹವು, ಭೂಮಾತೆಯಿಹಳು, ನೀಲ ಗಗನದಡಿ ಮೈ ಮರೆಯೋಣ ಬಾ."

ಇದೇ ರೀತಿ ತನ್ನ ಇನಿಯಳನ್ನು ನೋಡಲು ದುರ್ಗಮವಾದ ಕಾಡಿನಲ್ಲಿ ಬೆಟ್ಟ ಹತ್ತಿ ಇಳಿದು ಬರುವ ಪ್ರಿಯಕರನ ಕುರಿತಾಗಿ "ಸಣ್ಣಲ್ಲ ಕಾಡುಡು ಬಣ್ಣಲ್ಲ ಬಲಿಕೇಡು ಈ ಎಂಚ ಜತ್ತೇಯ ಜತ್ತೆ ಲಿಂಗ" (ಸಣ್ಣದಲ್ಲದ ಕಾಡಿನಲ್ಲಿ ಕಡಿದಾದ ಬೆಟ್ಟದಲ್ಲಿ ನೀನು ಹೇಗೆ ಇಳಿದು ಬಂದೆ ಜತ್ತೆ ಲಿಂಗ ) ಎಂಬ ಒಂದು ತುಳು ಜಾನಪದ ಹಾಡು  ಪ್ರಚಲಿತವಿದೆ.

ಘೋಟುಲ್‌ನಲ್ಲಿ ಮೋತಿಯಾರಿಗಳನ್ನು ಕೆರಳಿಸಲು ಚಿಲಕರು ಇಂಥ ಹಾಡುಗಳನ್ನು ರಾಗವಾಗಿ ದೈನ್ಯತೆಯಿಂದ ಹಾಡುತ್ತಾರೆ. ಪ್ರತಿಯಾಗಿ ಹುಡುಗಿಯರು ಗುದ್ದುತ್ತಾರೆ, ಚಿವುಟುತ್ತಾರೆ. ಆದರೆ ಇದಾವುದನ್ನೂ ಲೆಕ್ಕಿಸದೆ ಚಿಲಕರು ಹಾಡುತ್ತಲೇ ಇರುತ್ತಾರೆ.
ಕಿಶೋರಾವಸ್ಥೆಯನ್ನು ದಾಟಿ ಇವರು ವಿವಾಹಿತರಾಗಿ ಗೃಹಸ್ಥರಾದ ಮೇಲೆ ಅನ್ಯ ಸ್ತ್ರೀ ಪುರುಷ ಮಿಲನ, ಪ್ರೀತಿ- ಪ್ರೇಮ ನಿಷಿದ್ಧವಾಗಿದೆ. ಏಕ ಪತ್ನಿ ಪದ್ಧತಿ ಇವರಲ್ಲಿ ಜಾರಿಯಲ್ಲಿದೆ. ಈ ಬಗ್ಗೆ ಬಿಗಿಯಾದ ನೀತಿ ಸಂಹಿತೆ ಜಾರಿಯಲ್ಲಿದೆ. "ಅನ್ಯ ಸ್ತ್ರೀ ಮೇಲೆ ಕಣ್ಣು ಹಾಕಿದ ಗಂಡನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ. ಹಾಗಾಗಿ ಯಾರೂ ಪರ ಸ್ತ್ರೀಗೆ ತೊಂದರೆ ಕೊಡುವ ಪ್ರಶ್ನೆಯೇ ಇಲ್ಲಿರುವುದಿಲ್ಲ" ಎಂದು ಪ್ರೊ. ಉಮಾ ರಾಮ್ ಹೇಳುತ್ತಾರೆ.

ಬಸ್ತರ್ ಜನಪದರಲ್ಲಿ ಬಿಟ್ಟರೆ ಬೇರೆಲ್ಲೂ ಇಷ್ಟು ಸಹಜವಾದ ಲೈಂಗಿಕ ಶಿಕ್ಷಣದ ಮಾದರಿ ಕಾಣುವುದಿಲ್ಲ.
ಇದು ಬಿಟ್ಟರೆ ಕನ್ನಡ ತುಳು ಜನಪದ ಸಾಹಿತ್ಯ ಸೇರಿದಂತೆ ಎಲ್ಲ ಜನ ಪದ ಸಾಹಿತ್ಯದಲ್ಲಿ, ಹೆಣ್ಣು ಗಂಡಿನ ಪ್ರೇಮ, ಗಂಡಿನ ದೌರ್ಜನ್ಯವನ್ನು ಮೆಟ್ಟಿ ನಿಂತ ಹೆಣ್ಣಿನ ಜಾಣ್ಮೆ ಕುರಿತು ಅನೇಕ ಹಾಡು ಕಥೆಗಳು ಲಭ್ಯವಿವೆ.

ನೀರು ತರಲು ಹೋದಾಗ ಅಡ್ಡಗಟ್ಟಿದ ದೇರೆ ಮುಂಡೋರಿಯನ್ನು ಬಡಿದು ಓಡಿಸುವ ಬಂಗಾರಲ್ವಾಗ ಎಂಬ ಹೆಣ್ಣು ಮಗಳ ಸಾಹಸದ ಬಗ್ಗೆ ಒಂದು ತುಳು ಜನಪದ ಹಾಡು ಇದೆ. ತನ್ನನ್ನು ಕಾಮಿಸಿ ಮದುವೆಯಾಗುವಂತೆ ಕಾಡಿದ ಗಂಡನ್ನು ಉಪಾಯದಿಂದ ಕೊಲ್ಲುವ ರಂಗಮೆ, ನೇರವಾಗಿ ಕುದುರೆ ಏರಿ ಯುದ್ಧಮಾಡಿ ಕೊಲ್ಲುವ ಎಣ್ಮೂರು ಗುತ್ತಿನ ಬಾಲೆ ದೈಯಕ್ಕು, ತನ್ನನ್ನು ವಶಪಡಿಸಿಕೊಳ್ಳುವ ಸಲುವಾಗಿಯೇ ತನ್ನ ಗಂಡ ಪರವ ಮೈಂದನನ್ನು ಕೊಂದ ಅರಸು ಬೊಟ್ಟಿಪ್ಪಾಡಿ ಬಲ್ಲಾಳನಿಗೆ ಒಲಿದಂತೆ ನಟಿಸಿ ಅವನ ಸರ್ವ ಸಂಪತ್ತನ್ನೂ ಗಂಡನ ಚಿತೆಗೆ ಸುರಿವಂತೆ ಮಾಡಿ ತಾನೂ ಸತ್ತು ಪ್ರತೀಕಾರ ತೋರುವ ಪರತಿ ಮಂಗನೆ ಕುರಿತು ತುಳು ಜನಪದ ಪಾಡ್ದನಗಳು ರಚಿತವಾಗಿವೆ.

ಅಣ್ಣನೂ ಕೂಡ ತಂಗಿಯನ್ನು ಕಾಮಿಸಬಹುದು ಎಂಬ ಎಚ್ಚರಿಕೆ ನೀಡುವ ಅಣ್ಣ ತಂಗಿ ಕುಚು ಕುಚು, ಬಾಲೆ ಮೀನು ಮುಗುಡು ಮೀನು, ಹರಿವೆ ಬಸಳೆಗಳ ಕಥೆ ಕನ್ನಡ ತುಳು ಜನಪದ ಹಾಡುಗಳ ರೂಪದಲ್ಲಿ ಪ್ರಚಲಿತವಿವೆ. ಬಸ್ತರ್ ಬುಡಕಟ್ಟು ಜನಾಂಗದ ಘೋಟುಲ್ ಮಾದರಿಯ ವಿವಾಹ ಪೂರ್ವ ಮುಕ್ತ ಲೈಂಗಿಕತೆ ಪ್ರಸ್ತುತ ಭಾರತೀಯ ಶಿಷ್ಟ ಸಂಸ್ಕೃತಿಗೆ ಒಲ್ಲದ, ನಿಷಿದ್ಧವಾದ ವಿಚಾರವಾಗಿದೆ. ಆದರೆ ಇವರಲ್ಲಿನ ಲೈಂಗಿಕ ಶಿಕ್ಷಣದ  ಮಾದರಿಯನ್ನು ಸ್ವೀಕರಿಸಬಹುದಾಗಿದೆ.

ಇಂದು ಹದಿ ಹರೆಯದವರಿಗೆ ದೇಹದ ಅಂಗಗಳ ರಚನೆ, ವಯಸ್ಸಿಗನುಗುಣವಾಗಿ ಉಂಟಾಗುವ ಬದಲಾವಣೆ, ಭಾವನೆಗಳ ಏರು ಪೇರು, ಸ್ವಚ್ಛತೆಯ ಕುರಿತು ತಿಳಿವಳಿಕೆ ಮೂಡಬೇಕಿದೆ. ಲೈಂಗಿಕ ವಿಚಾರಗಳ ಕುರಿತು ತಮ್ಮ ಆಸಕ್ತಿ ಕುತೂಹಲಗಳನ್ನು ತಣಿಸುವ, ಸಂಶಯಗಳನ್ನು ಹಿರಿಯರಲ್ಲಿ ಕೇಳಿ ಪರಿಹರಿಸಿಕೊಳ್ಳುವ, ಮನವು ವಿಕೃತವಾಗದಂತೆ ತಡೆಯುವ, ಪರಿಪಕ್ವಗೊಳಿಸುವ ಮಾದರಿಯ ಸಹಜ ಶಿಕ್ಷಣದ ಅಗತ್ಯವಂತೂ ಖಂಡಿತಾ ಇದೆ.

ನೀಲಗಾರರ ಪದ ಕೇಳಿ

ಕಿನ್ನರ ಜೋಗಿಗಳ ಪದ ಕೇಳಿ

ಗೀಗಿ ಪದ ಕೇಳಿ...

ಸೋಮವಾರ, ಜುಲೈ 28, 2014

SAARC level International Seminar On Oral Epics of South Asia


Oral Epics are the epics through oral narrative forms and are important in understanding the Folk culture of a Community. “Oral Epics” have two functional dimensions.  There are narrative performances and ritual performances.  This reflects the folk-life of the communities to which the Epic belonged to.  For example, Junjappa Epic reflects the cultural life of customs and traditions of Kadugollas of Karnataka whereas Halumatha Kavya reflected those of Kurubas of Karnataka.

This international seminar is intended to provide a discussion forum  for analyses of the Oral Epics of India and its neighbouring countries.  The caste system in India demanded the conscious creation of caste myths.  The conflict between pastoralists and agriculturists, land labourers and land owners araising out of issues between them and others and the consequent compromises made thereafter are well-reflected in such oral epics.  Many a time, the belief systems, customs and practices are reflected herewith powerful and commanding voices.  The narration helps in re-establishing the value system in the Society.  Social Harmony and inter dependency of the castes or communities form central message of the oral epic.  The case in other neighbouring countries are to be explore`d to have better understanding of culture complexities therewith.


The developing societies in India and neighbouring countries are facing Generation shocks in the era of Globalisation.  The folklorists have a challenge in addressing the dichotomous situations emerge out of the usage of electronic gadgets and on the other hand the traditional folk equipments. For instance, the people sitting in the bullock carts are looking at the aeroplanes flying above their head. 

The participants are expected to discuss multifaceted socio- cultural issues in this event. Before, getting in to such discussions, valid data is to be collected.  This seminar provides platform to share the Data and to have an inquiry into issues related.  The study of oral Epics is never to be considered as study of some good old phrases sung by the priests of underdeveloped communities.  They have rich cultural treasure houses in them.  Unearthing such treasure and looking for suggestions for incorporating re-defined value systems in the contemporary society is the main focus of this venture.

Structure: The Research Papers are invited by the scholars who are working in the field of Oral Epics of South Asia.  The sub-themes are as follows:
Oral Epics in India
Narrative and Ritual Performances
Caste Myths and Dependent castes
Pastoral Epics    
Socio economic issues of Epic Narrators
Intellectual Property of the communities             
Application of folk culture across the disciplines

Registration Form
Name of the Researcher:
Address:

e-mail:
Cell Phone Number:
Title of the Research Paper:
Registration Fee:
Mode of Payment:
DD/ Cash/ Cheque:  Number with date:
Travel Plan: Starting From:
        Date and Time
        Arrival at Kuppam:
        Date and Time
                Departure from Kuppam
Date and Time:
Mode of Travel:
          On Road/ Train/ Aeroplane
Submission Last Dates:
Abstract                                                 April 30,2014
 Full length Paper and Registration   May 30,2014
Registration Fee:
For Indians Rs. 500/
 for Foreigners US $ 50 
For Research Students Rs. 400/
 Participants without Presentation of Paper: Rs.400/

Demand Draft should be drawn on any Nationalised Bank in favour of The Head, Department of Folklore and Tribal Studies, Dravidian University, Kuppam, payable at Kuppam 


Department of Folklore and Tribal Studies   
Dravidian University, Kuppam
Dravidian University was established by the Government of Andhra Pradesh through a Legislative Act in the year 1997 for an integrated development of Dravidian Languages, Literature and for conduct of advanced Research in various disciplines of Higher Education.  It is situated in a rural region of Andhra Pradesh called Kuppam which is close  to Karnataka (14 kms) and Tamilnadu (4 kms) borders. Kerala is at a distance of 4 hours of drive on road.   The Department of Folklore and Tribal Studies is established during the Year 2003.  The Department is engaged in teaching PG students and offers Research programs leading to award of M.Phil and Ph,D. degrees .

Kuppam: Kuppam is a Telugu Speaking town specifically known as  trilingual region belonging to Chittoor District of Andhra Pradesh.  The nearest Airport is Bangalore International Airport which is 130 kms. away. It is 250 kms away from Chennai  and 200 kms away from Temple town Tirupati. During July Kuppam experiences moderate weather conditions. 

The Host provides Accomodation and Local Hospitality.  Scholars will be provided travel expenses with in India only as per the University rules and are requested to approach funding agencies for their international travel grants.  However, the interested may approach the Seminar Director for special assistance in this regard.
Organizing committee
Prof. Kankanaala Rathnaiah      Chief Patron
Hon’ble Vice Chancellor,
Dravidian University, Kuppam

 Prof. Ch. A. Rajendra Prasad                      Patron     
Registrar i/c, Dravidian University

Prof. R. Kanaka Rathnam
Dean, School of Human and Social Sciences
 Dr. M. N. Venkatesha               Seminar Director
Head i/c
Department of Folklore and Tribal Studies
Dravidian University, Kuppam
cell: 07382753182

Prof. P. Subbachary,           Organising Secretary  
Professor, Department of Folklore and Tribal studies, Dravidian University, Kuppam
Cell:
Dr. K. Shyamala,                               Coordinator
Assistant Professor, Department of Folklore and Tribal studies, Dravidian University, Kuppam
Cell:
Dr. T. Maneppa,                               Coordinator
Assistant Professor, Department of Folklore and Tribal studies, Dravidian University, Kuppam
Cell:
Research Scholars and Students of the Department
                                                                            
                                    Dravidian    University
Srinivasa vanam,
Kuppam- 517 425, Chittoor District, Andhrapradesh, INDIA
Department of Folklore and Tribal Studies
SAARC level
International Seminar
On
Oral Epics of South Asia

20,21 August  2014
At
Dravidian University, Kuppam
To:……………………………………….
………………………………………….



You are cordially invited
Prof. Ch. A. Rajendra Prasad                                                                                                                     Dr. M. N. Venkatesha
Registrar i/c                                                                                                                                                 Seminar Director

ಇಟ್ಟರೆ ಬೆರಣಿಯಾದೆ, ತಟ್ಟಿದರೆ ಕುರುಳಾದೆ..

H S Anupama

http://bhoomibalaga.blogspot.in/2014/07/blog-post_28.htmlhttp://bhoomibalaga.blogspot.in/2014/07/blog-post_28.html

ಎಂಟನೇ ಅದ್ಭುತದ ಸುತ್ತಮುತ್ತ 


ಬೇಸಿಗೆಯಿಡೀ ಕರಾವಳಿಯಲ್ಲಿ ಉರಿದಿದ್ದು ಸಾಲದೆಂಬಂತೆ ಇಲ್ಲಿ ಮಳೆ ಶುರುವಾಗುವ ಹೊತ್ತಿಗೆ ಉತ್ತರದ ಕಡೆ ಹೊರಟೆವು. ಉತ್ತರವೆಂದರೆ ಹಿಮಾಲಯಕ್ಕಲ್ಲ, ಬಿರುಬೇಸಿಗೆಯಲ್ಲಿ ಬೇಯುತ್ತಿರುವ ರಾಜಸ್ಥಾನಕ್ಕೆ, ದೆಹಲಿ-ಆಗ್ರಾ ಮಾರ್ಗವಾಗಿ. ದೆಹಲಿಯಿಂದ ಯಮುನಾ ನದಿಯ ಪೂರ್ವ ದಂಡೆಗುಂಟ ಚಲಿಸುತ್ತಿದ್ದೆವು. ಗಂಟೆ ಬೆಳಗಿನ ಹತ್ತಷ್ಟೇ, ಹೊರಗೆ ಕಾಲಿಟ್ಟರೆ ಕುಲುಮೆಯೊಳಗೆ ಇಳಿದ ಅನುಭವ.

ಆ ಬಿರುಬಿಸಿಲ ರಸ್ತೆಯಲ್ಲಿ ಹಲವು ವಿಸ್ಮಯಗಳು ಎದುರಾದವು.

ಅದು ಆರು ಲೇನುಗಳ ದೇಶದ ಅತಿ ದೊಡ್ಡ ರಸ್ತೆ - ಯಮುನಾ ಎಕ್ಸ್‌ಪ್ರೆಸ್ ವೇ. ದೆಹಲಿ ಎಷ್ಟು ಜನಭರಿತವೋ ಈ ಹೈವೇ ಅಷ್ಟೇ ಭಣಗುಡುತ್ತಿತ್ತು. ಆಚೀಚಿನ ಬಯಲುಗಳಲ್ಲಿ ಕಳ್ಳಿ ಗಿಡ, ಮರ ಜಾಲಿ, ಬಳ್ಳಾರಿ ಜಾಲಿ, ಎಕ್ಕದ ಗಿಡ, ಬೇವಿನ ಗಿಡ ಕಂಡವು. ವಿಸ್ತಾರವಾದ, ಫಲವತ್ತಾದ ಗಂಗಾಯಮುನಾ ನದೀಬಯಲುಗಳು ಮರುಭೂಮಿಯಾಗುತ್ತಿವೆಯೇ ಎಂದು ದಿಗಿಲಾಗುವಂತೆ ಮುಳ್ಳುಕಂಟಿ ಗಿಡಗಳೇ ಹೆಚ್ಚೆಚ್ಚು ಕಾಣತೊಡಗಿದವು.




ರಸ್ತೆಯ ಆಚೀಚೆ ಬಿತ್ತನೆಗೆ ಸಿದ್ಧವಾದ ಉತ್ತ ಹೊಲಗಳಿದ್ದವು. ನಡುನಡುವೆ ನಮ್ಮ ತಿರಿ, ಬಣವೆಗಿಂತ ಆಕೃತಿಯಲ್ಲಿ, ವಿನ್ಯಾಸದಲ್ಲಿ ಕೊಂಚ ಭಿನ್ನವಾದ, ಆಕರ್ಷಕವಾಗಿ ಕಟ್ಟಿದ ಧಾನ್ಯಸಂಗ್ರಹಗಳು ಕಂಡವು. ಬಣವೆಯ ಜೊತೆಗೇ ಮತ್ತೊಂದು ಆಕೃತಿ ಗಮನ ಸೆಳೆಯಿತು. ಉಳುಮೆಯಾದ ಹೊಲದ ಬದುಗಳಲ್ಲಿ, ಹಳ್ಳಿ ಮನೆಗಳ ಅಕ್ಕಪಕ್ಕದಲ್ಲಿ, ದಿಬ್ಬದ ಮೇಲೆ, ಕಂಪೌಂಡ್‌ಗೆ-ಬೇಲಿಗೆ ತಾಗಿದಂತೆ ವಿವಿಧ ಆಕಾರಗಳ ಮಣ್ಣುಬಣ್ಣದ ಪುಟ್ಟ ಗುಡ್ಡಗಳಿದ್ದವು. ದೆಹಲಿ, ನೋಯ್ಡಾ ದೂರದೂರವಾದ ಹಾಗೆ ಪ್ರತಿ ಮನೆ, ಹೊಲದಲ್ಲೂ ಅಂಥ ಹಲವು ಗೋಪುರ ಕಾಣತೊಡಗಿದವು. ಕೆಲವು ಸೂರು ಹೊದ್ದುಕೊಂಡಿದ್ದರೆ ಮತ್ತೆ ಕೆಲವು ಗೋಡೆಮೇಲೆ ಚಿತ್ತಾರ ಬರಕೊಂಡಿದ್ದವು. ಏನಿದು? ಡ್ರೈವರ್ ಕೇಳಿದರೆ ಉತ್ಸಾಹದಿಂದ ವಿವರಿಸಿದ್ದೇ ಅಲ್ಲದೆ ಸರಿಯಾಗಿ ಫೋಟೋ ತೆಗೆದುಕೊಳ್ಳಿ ಎಂದು ಒಂದೆರೆಡು ಕಡೆ ನಿಲ್ಲಿಸಿದರು.

ಅವು ಬಿಟೌಡಾ. ಸಗಣಿ ಬೆರಣಿಯ ಗೋಪುರಗಳು. ಕರ್ನಾಟಕದ ಬಯಲು ನಾಡಿನಲ್ಲಿ ಬೆರಣಿ ರಾಶಿ ಹಾಕಿದ್ದು ನೋಡಿದ್ದರೂ ಇಲ್ಲಿಯಷ್ಟು ಬೃಹತ್ ಪ್ರಮಾಣದ ಕಲಾತ್ಮಕ ಗೋಪುರಗಳನ್ನು ನೋಡಿದ ನೆನಪಾಗಲಿಲ್ಲ. ಮುಂದೆ ಮುಂದೆ ಹೋದಂತೆ ರಚನೆಯ ವಿವಿಧ ಹಂತಗಳಲ್ಲಿರುವ, ವಿಭಿನ್ನ ಆಕಾರ-ಚಿತ್ತಾರ-ಎತ್ತರ-ವಿನ್ಯಾಸ-ಬಣ್ಣದಲ್ಲಿರುವ ಗೋಪುರಗಳು ಕಾಣಿಸಿದವು. ಒಣಗಿದ ಕುಳ್ಳನ್ನು ಅಲ್ಯುಮಿನಿಯಂ ಬುಟ್ಟಿಗಳಲ್ಲಿ ತಲೆಮೇಲೆ ಹೊತ್ತು ಬ್ಯಾಲೆನ್ಸ್ ಮಾಡಿ ನಡೆವ ಹುಡುಗಿಯರು ಕಂಡರು.

ಮಲೆನಾಡು ಮತ್ತು ಘಟ್ಟದ ಸೆರಗಿನಲ್ಲಿ ಸಮೃದ್ಧ ಗಿಡಮರಗಳ ನಡುವೆ ಬದುಕುವವರಿಗೆ ಬೆರಣಿಯನ್ನು ಉರುವಲಾಗಿ ಕಲ್ಪಿಸಿಕೊಳ್ಳಲು ಕಷ್ಟ. ಆದರೆ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲೇ ಅತ್ಯಂತ ಜನಪ್ರಿಯ ಗ್ರಾಮೀಣ ಇಂಧನ, ಬಡವರ ಇಂಧನ ಬೆರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಲಭವಾಗಿ ಸಿಗುವ; ಅತ್ಯಂತ ಕಡಿಮೆ ಬೆಲೆಗೆ ಸಿಗುವ; ನಿಶ್ಚಿತವಾಗಿ ಸಿಗುವ; ಬೇಕೆಂದಾಗ ಒಲೆ ಹೊತ್ತಿಸಿ, ಆರಿಸಬಹುದಾದ; ಮನೆಯಲ್ಲಿ ಜಾನುವಾರಿಲ್ಲದಿದ್ದರೂ ಬೀದಿಯಲ್ಲಿ ಸಗಣಿಯಾಗಿ, ಮಾರುಕಟ್ಟೆಯಲ್ಲಿ ಬೆರಣಿಯಾಗಿ ಸಿಗುವ ಈ ಇಂಧನವನ್ನು ನಮ್ಮ ದೇಶದ ಹಳ್ಳಿಗಳ ಮುಕ್ಕಾಲುಪಾಲು ಜನಸಂಖ್ಯೆ ಈಗಲೂ ನೆಚ್ಚಿದ್ದಾರೆ. ಒಮ್ಮೆ ಬೆರಣಿ ಒಲೆಯಲ್ಲಿ ಮಾಡಿದ ಅಡಿಗೆ ರುಚಿ ನೋಡಿದರೆ ಗ್ಯಾಸ್-ಕರೆಂಟ್-ಸೀಮೆಎಣ್ಣೆ ಒಲೆಗಳನ್ನು ಬಿಟ್ಟು ನೀವೂ ಅದನ್ನೇ ಬಳಸುತ್ತೀರಿ ನೋಡಿ ಎಂದು ನಮ್ಮ ಡ್ರೈವರ್ ಹೇಳಿದ್ದು ಉತ್ಪ್ರೇಕ್ಷೆಯಿರಬಹುದಾದರೂ ಅವರ ಮಾತುಗಳಿಂದ ಸಗಣಿಯ ಪ್ರಾಮುಖ್ಯತೆ, ಉರುವಲಾಗಿ ಬೆರಣಿ ಬಳಕೆ ಎಷ್ಟು ಸಾಮಾನ್ಯ ಎಂದು ತಿಳಿದುಬಂತು.





ಪ್ರತಿ ಬೆರಣಿಯ ಮೇಲೂ, ಬೆರಣಿ ಗೋಪುರದ ಮೇಲೂ ಕಂಡುಬರುತ್ತಿದ್ದವು ಕೈಬೆರಳ ಗುರುತುಗಳು. ವಿಶೇಷವಾಗಿ ಹೇಳುವುದು ಬೇಡ, ಅವು ಹೆಣ್ಮಕ್ಕಳವೇ. ಯಾಕೆಂದರೆ ಅಡಿಗೆ ಕೆಲಸ ಯಾರದೋ, ಇಂಧನ ಹೊಂದಿಸುವ ಜವಾಬ್ದಾರಿಯೂ ಅವರದೇ ಎನ್ನುವುದು ಅಲಿಖಿತ ನಿಯಮ. ಕೃಷಿ-ಕೂಲಿ ಕೆಲಸ ಮುಗಿಸಿ ಬರುವಾಗ ದಾರಿಯಲ್ಲಿ ಒಂದು ಒಣರೆಂಬೆ ಕಂಡರೂ ಹೆಣ್ಮಕ್ಕಳು ಮನೆಗೆ ಹೊತ್ತು ತರುವವರೇ. ಮೂರು ಹೊತ್ತೂ ಹೊಟ್ಟೆಯ ಬೆಂಕಿ ತಣಿಸಲು ಏನು ಅಡಿಗೆ ಬೇಯಿಸಲಿ ಎನ್ನುವುದು ಎಷ್ಟು ತಲೆಬಿಸಿಯ ವಿಚಾರವೋ, ವರ್ಷಾವಧಿಗಾಗುವಷ್ಟು ಉರುವಲು ಸಂಗ್ರಹ ಮಾಡುವುದೂ ಅವರಿಗೆ ಅಷ್ಟೇ ದೊಡ್ಡ ಚಿಂತೆ.

ಸಗಣಿ ಸಂಗ್ರಹಿಸಿ, ಬೆರಣಿ ತಟ್ಟಿ, ಎರಡೂ ಬದಿ ಒಣಗಿಸಿ, ಅವನ್ನು ಕಲಾತ್ಮಕವಾಗಿ ಸುರುಳಿಸುರುಳಿಯಲ್ಲಿ ಜೋಡಿಸಿಡುವ ಕೆಲಸ ಮಾಡುತ್ತಿದ್ದ ಹೆಂಗಸರು, ಮಕ್ಕಳು ಕಾಣಿಸಿದರು. ಬಹುಶಃ ಬೇಸಿಗೆ ಒಣ ಉರುವಲು ಕೂಡಿಕೊಳ್ಳುವ ಕಾಲವಾದ್ದರಿಂದ ಈ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಬರೀ ಸೆಗಣಿಯದಾದರೆ ಉರಿಯಲು ಕಷ್ಟ ಎಂದು ಅದರೊಡನೆ ಧಾನ್ಯಗಳ ಹೊಟ್ಟು, ಹುಲ್ಲು, ಇದ್ದಿಲ ಪುಡಿಯನ್ನೂ ಸೇರಿಸುತ್ತಾರಂತೆ. ಮೂರ್ನಾಲ್ಕು ದಿನ ಒಣಗಿಸಿ, ಬೆರಣಿಯನ್ನು ವಿಶಿಷ್ಟವಾಗಿ ಜೋಡಿಸಿ, ಮೇಲೊಂದು ದಪ್ಪನೆಯ ಪದರ ಸಗಣಿಯ ಗಿಲಾಯಿ ಮಾಡುತ್ತಿದ್ದರು. ಸಗಣಿ ವಾಟರ್‌ಪ್ರೂಫ್ ಆದ್ದರಿಂದ ಹೊರಗಣ ಪದರ ಮಳೆಗಾಲದಲ್ಲೂ ಉರುವಲು ಒದ್ದೆಯಾಗದಂತೆ ತಡೆಯುತ್ತದೆ. ಕೆಲವೆಡೆ ಮಾತ್ರ ಆರೆಂಟು ಅಡಿ ಎತ್ತರದ ಗೋಪುರಗಳ ಮೇಲೆ ದಂಟಿನ ಸೂರು ಹೊದೆಸಲಾಗಿತ್ತು. ಅದರ ಗೋಡೆಗಳ ಮೇಲೆ ಥರಥರದ ಚಿತ್ರ ಚಿತ್ತಾರಗಳು, ಜನಪದ ಕಲೆಯ ವಿವಿಧ ವಿನ್ಯಾಸಗಳು ಅರಳಿದ್ದವು. ಗೋಪುರಗಳ ಕೆಳಭಾಗದಲ್ಲಿ ಸುಣ್ಣ ಬಳಿದ ಒಂದು ತಗ್ಗು ಇರುತ್ತದೆ. ಅದು ಬೆರಣಿ ಹೊರತೆಗೆಯಬೇಕಾದ ಸ್ಥಳ. ಅಲ್ಲಿಂದ ಒಂದೊಂದೇ ಬೆರಣಿ ತೆಗೆದರೆ ಗೋಪುರ ಕುಸಿಯದೇ ಅದನ್ನು ಖಾಲಿ ಮಾಡಬಹುದು ಎಂದರು. 





ಕಳೆದವರ್ಷ ಗ್ಯಾಸ್ ಸಿಲಿಂಡರ್ ಬಳಕೆಯನ್ನು ನಿರ್ಬಂಧಕ್ಕೊಳಪಡಿಸಿ ಸಬ್ಸಿಡಿ ಸಿಲಿಂಡರುಗಳ ಸಂಖ್ಯೆ ವಾರ್ಷಿಕ ಆರು ಎಂದು ನಿಗದಿಗೊಳಿಸಲಾಯಿತು. ಬೇಯಿಸಿ-ಹುರಿದು-ಕರಿದು ತಿನ್ನುವ ಭಾರತೀಯ ಅಡಿಗೆ ಶೈಲಿಗೆ ವರ್ಷಕ್ಕೆ ಆರು ಸಿಲಿಂಡರ್ ಏನೇನೂ ಸಾಲದು. ಅದಕ್ಕಿಂತ ಹೆಚ್ಚು ಬೇಕಾದವರು ಪ್ರತಿ ಸಿಲಿಂಡರಿಗೆ ೯೫೨ ರೂ. ಕೊಡಬೇಕು ಎಂದು ಸರ್ಕಾರ ಪ್ರಕಟಿಸಿತು. ಆಗ ಬೆರಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿತಂತೆ. ತಿಪ್ಪೆಗೆ ಹೋಗುವ ಸಗಣಿಯೆಲ್ಲ ಬೆರಣಿಯಾಗಿ ಒಂದು ಬೆರಣಿಗೆ ಒಂದೂವರೆ ರೂಪಾಯಿಯಂತೆ ಮಾರಾಟವಾಯಿತು. ಅದುವರೆಗೆ ನಾಕಾಣೆಗೆ ಸಿಗುತ್ತಿದ್ದ ಬೆರಣಿಯೂ ತುಟ್ಟಿಯಾಯಿತು, ಕಟ್ಟಿಗೆಯಂತೂ ಕೆಜಿಗೆ ಎಂಟು ರೂಪಾಯಿಯಾಯಿತು ಎಂದರು ನಮ್ಮ ಡ್ರೈವರ್.

ಒಟ್ಟಾರೆ ಗಿಡಮರಗಳಿಲ್ಲದ ಬಯಲು ನಾಡಿನ ಜನ ಉರುವಲಿಗೆ ಮಾಡಿಕೊಂಡ ಸುಲಭ ವ್ಯವಸ್ಥೆ, ಗಿಲಾಯಿ, ಚಿತ್ತಾರ, ವಾಪಸು ತೆಗೆಯಲು ಅನುಕೂಲವಾಗುವ ಜೋಡಣೆ ಇವೆಲ್ಲ ನಾವು ನೋಡಹೊರಟ ಜಗತ್ತಿನ ಎಂಟನೇ ಅದ್ಭುತಕ್ಕೆ ಸಮನಾಗಿವೆ ಎನಿಸಿತು.

ನೀನಾರಿಗಾದೆಯೋ ಎಲೆ ಮಾನವಾ?

ಪಶುಗಣತಿ ಪ್ರಕಾರ ಭಾರತದಲ್ಲಿ ಅಂದಾಜು ೨೮.೩ ಕೋಟಿ ದನ, ಎಮ್ಮೆಗಳಿವೆ. ಅವುಗಳಿಂದ ಅಜಮಾಸು ಪ್ರತಿದಿನ ೭೦ ಕೋಟಿ ಟನ್ ಸಗಣಿ ಉತ್ಪತ್ತಿಯಾಗುತ್ತದೆ. ಸಗಣಿಯ ವ್ಯವಸ್ಥಿತ ವಿಲೇವಾರಿಗೆ ಬೆರಣಿ ಉರುವಲು ಸಹಾಯಕವಾಗಿದೆ. ಇಲ್ಲದಿದ್ದರೆ ಕಂಡಕಂಡಲ್ಲಿ ದೇಹಬಾಧೆ ತೀರಿಸಿಕೊಳ್ಳುವ ಭಾರತೀಯರ ಅಭ್ಯಾಸದಿಂದ ದುರ್ನಾತ ಬೀರುವ ಊರುಕೇರಿಗಳು ಸಗಣಿ ತೊಪ್ಪೆಯಿಂದ ತುಂಬಿ ಹೋಗುತ್ತಿದ್ದವು.

ಭಾರತದ ಗ್ರಾಮೀಣ ಮಹಿಳೆಯರಿಗೆ ಈಗಲೂ ಗ್ಯಾಸ್ ತುಟ್ಟಿ. ಕರೆಂಟನ್ನು ನಂಬಲು ಸಾಧ್ಯವಿಲ್ಲ. ಸೋಲಾರ್ ಎಂದರೆ ಏನೋ ಎಂಥದೋ. ೧೧೦ ಕೋಟಿ ಜನಸಂಖ್ಯೆಯ ದೇಶಕ್ಕೆ ಇಂಧನ ಒದಗಿಸುವುದು ಸುಲಭದ ಮಾತಲ್ಲ. ಹಾಗಿರುವಾಗ ಬೆರಣಿಯು ಕಡಿಮೆ ಖರ್ಚಿನ, ನಿಸರ್ಗ ಸ್ನೇಹಿ, ಮರುಪೂರಣಗೊಳ್ಳಬಹುದಾದ ಇಂಧನವಾಗಿ ಒದಗಿ ಬಂದಿದೆ. ಬೆರಣಿಯನ್ನು ಉರುವಲಿಗೆ ಬಳಸುವುದರಿಂದ ಮರಗಿಡಗಳೂ ಉಳಿಯುತ್ತವೆ. ಸುಟ್ಟ ಬೂದಿ ಕ್ರಿಮಿನಾಶಕವಾಗಿ ಬಳಕೆಯಾಗುತ್ತದೆ.

ಆದರೆ ಪರಿಸರ ಸ್ನೇಹಿಯಾದ ಬೆರಣಿ ಅಷ್ಟೇನೂ ಬಳಕೆದಾರ ಸ್ನೇಹಿ ಅಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ. ಸಗಣಿಯಲ್ಲಿ ಅಸಂಖ್ಯ ಶಿಲೀಂಧ್ರ, ರೋಗಾಣುಗಳಿರುತ್ತವೆ. ಬರಿಗೈಲಿ ಮುಟ್ಟುವುದರಿಂದ ಕೆಲ ಚರ್ಮರೋಗಗಳು ಬರಬಹುದಾಗಿದೆ. ಇತ್ತೀಚೆಗೆ ಕೃಷಿಯಲ್ಲಿ ಬಳಸುತ್ತಿರುವ ರಾಸಾಯನಿಕದ ಪ್ರಮಾಣ ಮೇಲ್ಮೈ ನೀರು ಕಲುಷಿತಗೊಳಿಸುವಷ್ಟು ಅತಿಯಾಗಿದೆ. ಕೀಟನಾಶಕ ಸಿಂಪಡಿಸಿದ ಹುಲ್ಲು ತಿಂದ ಜಾನುವಾರುಗಳ ಸಗಣಿಯಲ್ಲೂ ಆರ್ಸೆನಿಕ್ ಅಂಶ ಪತ್ತೆಯಾಗಿದೆ. ಅದನ್ನು ಉರಿಸಿದಾಗ ಬರುವ ಹೊಗೆಯಲ್ಲೂ ಆರ್ಸೆನಿಕ್ ಅಂಶ ಹೆಚ್ಚಿರುವುದು ಗಂಗಾ-ಮೇಘನಾ-ಬ್ರಹ್ಮಪುತ್ರ ನದೀಬಯಲಿನ ಪ್ರದೇಶಗಳಲ್ಲಿ ನಡೆದ ಸಂಶೋಧನೆಯಿಂದ ಧೃಢಪಟ್ಟಿದೆ. ಒಲೆ ಮುಂದೆ ಕೂತು ಅದರ ಹೊಗೆ ಕುಡಿಯುವವರು ಶ್ವಾಸಕೋಶ ಸಂಬಂಧಿ ಕಾಯಿಲೆ, ಕಣ್ಣಿನ ಕಾಯಿಲೆಗೆ ತುತ್ತಾಗುತ್ತಾರೆ. ಮೊದಲೇ ಅಡಿಗೆ ಮನೆ ಎಂದರೆ ಕಿಷ್ಕಿಂಧೆ. ಬೆಳಕಿರುವುದಿಲ್ಲ, ಗಾಳಿಯಿರುವುದಿಲ್ಲ. ಅದರ ನಡುವೆ ಹೊಗೆಯೂ ತುಂಬಿಕೊಂಡರೆ ಅಲರ್ಜಿ ಅಸ್ತಮಾ, ದಮ್ಮು, ಟಿಬಿ, ಶ್ವಾಸಕೋಶ ಕ್ಯಾನ್ಸರಿನಂತಹ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿವರ್ಷ ವಿಶ್ವಾದ್ಯಂತ ೧೬ ಲಕ್ಷ ಜನ ಮನೆಯೊಳಗಿನ ವಾಯುಮಾಲಿನ್ಯದ ಕಾರಣಕ್ಕೆ ಸಾಯುತ್ತಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು.

ಸಗಣಿ ಇಂಧನ ಬಳಕೆದಾರ ಸ್ನೇಹಿ ಆಗುವಂತೆ ಮಾಡಲು ಒಂದು ಮಾರ್ಗವಿದೆ: ಸಗಣಿಯನ್ನು ಗೋಬರ್ ಗ್ಯಾಸ್ ಆಗಿ ಪರಿವರ್ತಿಸುವುದು. ಕೈಗೆಟುಕುವ ದರ, ವಿಧಾನದಲ್ಲಿ ಗೋಬರ್ ಗ್ಯಾಸ್ ಉತ್ಪಾದಿಸಿಕೊಳ್ಳಲು; ಅದನ್ನು ಪ್ರೋತ್ಸಾಹಿಸಲು ಯೋಜನೆ ಹಮ್ಮಿಕೊಳ್ಳಬೇಕು. ಈಗ ಮನೆಯಲ್ಲಿ ನಾಲ್ಕೈದು ಜಾನುವಾರುಗಳಿದ್ದವರು ಸಬ್ಸಿಡಿ ಹಣದೊಂದಿಗೆ ಹತ್ತು ಸಾವಿರ ರೂಪಾಯಿ ಸೇರಿಸಿದರೆ ಒಂದು ಬಯೋಗ್ಯಾಸ್ ಪ್ಲಾಂಟ್ ಹಾಕಬಹುದು. ಗ್ಯಾಸ್ ತಯಾರಿ ನಂತರದ ಸ್ಲರಿಯನ್ನು ಗೊಬ್ಬರಕ್ಕೆ ಬಳಸಿ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಸಗಣಿಯನ್ನು ಇಂಧನ ಮತ್ತು ಗೊಬ್ಬರ ಎರಡೂ ಆಗಿ ಬಳಸಲು ಸಾಧ್ಯವಾಗುವುದು ಈ ವಿಧಾನದ ಹೆಚ್ಚುಗಾರಿಕೆ ಎನ್ನಬಹುದು.

ಬೇರೆ ದೇಶಗಳಲ್ಲೂ ಬೆರಣಿ ಬಳಸುವರೇ ಎಂಬ ಪ್ರಶ್ನೆ ತೂರಿ ಬಂತು. ಗ್ರಾಮೀಣ ಈಜಿಪ್ಟ್‌ನ ಮನೆಯ ಗೋಡೆಗಳ ಮೇಲೆ ಬೆರಣಿ ನೋಡಿದ ನೆನಪಾಯಿತು. ಅದು ಒಂಟೆ ಸಗಣಿಯದು. ವಿಶ್ವ ಮಾಹಿತಿ ಜಾಲಾಡಿದರೆ ಬೆರಣಿಯನ್ನು ಇರಾನ್, ಚೀನಾ, ಮಂಗೋಲಿಯಾ, ಪ್ಯಾಲೆಸ್ಟೀನ್ ಸೇರಿದಂತೆ ಹಲವು ದೇಶಗಳಲ್ಲಿ ಜನ ಉರುವಲಾಗಿ ಬಳಸುತ್ತಿದ್ದಾರೆ. ವಿಶ್ವಾದ್ಯಂತ ಎರಡು ಬಿಲಿಯನ್ ಜನರ ಉರುವಲು ಸಗಣಿಯೇ ಆಗಿದೆ!

ದಿನನಿತ್ಯ ರಸ್ತೆಮೇಲೆ ಓಡಾಡುವ ವಾಹನಗಳು ಹೆಚ್ಚುತ್ತಿವೆ. ಪೆಟ್ರೋಲ್-ಡೀಸೆಲ್ ದಿನದಿನಕ್ಕೆ ತುಟ್ಟಿಯಾಗುತ್ತ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿದೆ. ಇದೇ ದರದಲ್ಲಿ ವಾಹನ-ಅಡಿಗೆ ಎರಡಕ್ಕೂ ಹೈಡ್ರೋಕಾರ್ಬನ್ ಇಂಧನ ಬಳಸಿದರೆ ಇನ್ನು ಅರ್ಧ ಶತಮಾನವೂ ಅದು ಬಾಳುವುದಿಲ್ಲ. ಮಿಲಿಯಗಟ್ಟಲೆ ವರ್ಷಗಳ ಕೆಳಗೆ ತಯಾರಾಗಿ ನೆಲದಡಿಯ ನಿದಾನವಾಗಿರುವ ತೈಲವನ್ನು, ನಮ್ಮ ಮಕ್ಕಳು-ಮೊಮ್ಮಕ್ಕಳು-ಮರಿಮಕ್ಕಳ ಪಾಲಿನ ತೈಲವನ್ನು ನಾವೀಗಲೇ ಕಬಳಿಸುತ್ತಿದ್ದೇವೆ. ತೈಲಕ್ಕಾಗಿ ಯುದ್ಧ ನಡೆಯುತ್ತಿದೆ. ತೈಲಕ್ಕಾಗಿ ಸರ್ಕಾರಗಳು ಉರುಳುತ್ತಿವೆ. ತೈಲಭರಿತ ಬಡದೇಶಗಳ ಅಧ್ಯಕ್ಷರು ‘ಹೇಳಿದ ಮಾತು’ ಕೇಳದಿದ್ದರೆ ಅವರ ವಿಮಾನ ಪತನವಾಗುತ್ತದೆ. ಹೀಗಿರುವಾಗ ಒಂದು ಪರ್ಯಾಯ ಇಂಧನ ಸೃಷ್ಟಿಸಿಕೊಳ್ಳುವುದು ಮನುಷ್ಯಕುಲದ ಉಳಿವಿಗೆ, ನಾಗರಿಕತೆಯ ಉಳಿವಿಗೆ ಅನಿವಾರ್ಯವಾಗಿದೆ. ಕಡಿಮೆ ದರದ ನಿಸರ್ಗ ಸ್ನೇಹಿ ಇಂಧನ ಪೂರೈಕೆಯ ವ್ಯವಸ್ಥೆಯನ್ನು ಜಗತ್ತಿನ ಎಲ್ಲ ದೇಶಗಳ ನಾಯಕರು, ವಿಜ್ಞಾನಿಗಳು ಅಭಿವೃದ್ಧಿಪಡಿಸಬೇಕಿದೆ.

‘ಸೇವ್ ಫ್ಯುಯೆಲ್’ ಎಂಬ ಸ್ಲೋಗನ್ನಿನೊಡನೆ ಪರ್ಯಾಯವನ್ನೂ ಸೂಚಿಸುವ ಕಾಲ ಈಗ ಬಂದಿದೆ.

ಭಾನುವಾರ, ಜುಲೈ 27, 2014

ಕೊರಗ ಸಮುದಾಯದ ಚಿತ್ರಗಳು ಭಾಗ-5


ವಿಶ್ವ ಆದಿವಾಸಿ ದಿನಾಚರಣೆ ಮೈಸೂರಿನಲ್ಲಿ

ಆದಿವಾಸಿಗಳ ಸಾಂಸ್ಕೃತಿಕ ಆಚಾರ ವಿಚಾರಗಳ ಮೇಲೆ ಬೆಳಕು ಚೆಲ್ಲುವ 'ವಿಶ್ವ ಆದಿವಾಸಿ ದಿನಾಚರಣೆ' ಆಗಸ್ಟ್ 8 ಮತ್ತು 9 ರಂದು ಮೈಸೂರಿನಲ್ಲಿ ಏರ್ಪಡಿಸಲಾಗಿದೆ. ಆದಿವಾಸಿಗಳ ಮೇಲಿನ ದೌರ್ಜನ್ಯ ನಿರಂತರವಾಗಿದ್ದು ಈ ಬಗ್ಗೆ ಆದಿವಾಸಿಗಳನ್ನು ಜಾಗೃತಗೊಳಿಸುವ ಮತ್ತು ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಎರಡು ದಿನಗಳ ಕಾಲ ಮಾಡಲಾಗುವುದೆಂದು 'ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್'ನ ರಾಜ್ಯ ಉಪಾಧ್ಯಕ್ಷ ಎಸ್ ಎನ್ ರಾಜಾರಾವ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಅವರು, ಸಮಾರಂಭದಲ್ಲಿ ರಾಜ್ಯದ ಎಲ್ಲಾ ಆದಿವಾಸಿ ಬುಡಕಟ್ಟು ಜನಾಂಗದ ಸಂಗಮವಾಗಲಿದ್ದು ಆ. 8ರಂದು ವಿಚಾರ ಸಂಕಿರಣ ಆ. 9ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ, ಕೇಂದ್ರ ಸಚಿವ ಸದಾನಂದ ಗೌಡ, ಮೈಸೂರು ಮತ್ತು ಕೊಡಗು ಜಿಲ್ಲೆಯ ಶಾಸಕರು ಹಾಗು ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಿಟ್ಟು ರಂಜಿತ್, ಬಿ ಜಿ ತಮ್ಮಯ್ಯ ಹಾಗು ಮೋಹನ್ ಉಪಸ್ಥಿತರಿದ್ದರು.



ಆದಿವಾಸಿಗಳು, ಅರಣ್ಯ ಕಾಯಿದೆಗಳು ಮತ್ತು ಕೊರಗರ ಹೆಚ್ಚುಗಾರಿಕೆ

ಆದಿವಾಸಿಗಳೇ ಈ ದೇಶದ ಮೂಲನಿವಾಸಿಗಳು. ಮೂಲನಿವಾಸಿಗಳೇ ಈ ದೇಶದ ಅರಣ್ಯ ಸಂರಕ್ಷಕರು. ಅವರೇ ಕಾಡಿನ ಸಂಚಾಲಕರು. ಆದರೆ, ಶತ ಶತಮಾನಗಳಿಂದ ಕಾಡನ್ನು ಬದುಕಾಗಿಸಿ ಪರಿವರ್ತಿಸಿಕೊಂಡ ಆದಿವಾಸಿಗಳನ್ನು - 'ಅರಣ್ಯ ಸಂರಕ್ಷಣಾ ಕಾಯಿದೆ', 'ವನ್ಯ ಜೀವಿ ಸಂರಕ್ಷಣಾ ಕಾಯಿದೆ', 'ಭೂ ಸ್ವಾಧೀನ ಕಾಯಿದೆ' ಮತ್ತು ಅಣೆಕಟ್ಟುಗಳ ನಿರ್ಮಾಣದ ಹೆಸರಿನಲ್ಲಿ ಕಾಡಿನಿಂದ ಒಕ್ಕಲೆಬ್ಬಿಸಲಾಯಿತು. ಆ ಮೂಲಕ ಆದಿವಾಸಿಗಳು ಕಾಡಿನಲ್ಲಿ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಯಿತು.

ಈ ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 600ಕ್ಕೂ ಹೆಚ್ಚು ಆದಿವಾಸಿ ಪಂಗಡದ 7.5 ಕೋಟಿಗೂ ಹೆಚ್ಚು ಜನರಿದ್ದಾರೆ. ಅದರಲ್ಲಿ, 'ಕೊರಗ ಆದಿವಾಸಿ ಬುಡಕಟ್ಟು ಪಂಗಡ'ವೂ ಸೇರಿ ಒಟ್ಟು 32 ಪಂಗಡಗಳನ್ನು ಭಾರತ ಸರಕಾರ 'ಈ ದೇಶದ ಮೂಲನಿವಾಸಿ'ಗಳೆಂದು ಮಾನ್ಯ ಮಾಡಿದೆ.

ಕರ್ನಾಟಕ ರಾಜ್ಯದ ಬರೇ 9 ಜಿಲ್ಲೆಗಳ 26 ತಾಲೂಕುಗಳಲ್ಲಿ ವಿವಿಧ ಆದಿವಾಸಿ ಪಂಗಡಕ್ಕೆ ಸೇರಿದ 2 ಲಕ್ಷಕ್ಕೂ ಅಧಿಕ ಆದಿವಾಸಿಗಳಿದ್ದಾರೆ. ಬಹುತೇಕ ಪಶ್ಚಿಮ ಘಟ್ಟವೇ ಇವರ ಆಶ್ರಯ ತವರು. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆದಿವಾಸಿಗಳು ಚದುರಿ ಹೋಗಿದ್ದಾರೆ.

ಕರ್ನಾಟಕದಲ್ಲಿರುವ ಆದಿವಾಸಿ ಪಂಗಡಗಳೆಂದರೆ - ಜೇನು ಕುರುಬ, ಬೆಟ್ಟ ಕುರುಬ, ಯರವ, ಪಣಿಯ, ಇರುಳಿಗ, ಸೋಲಿಗ, ಕೊರಗ, ಹಲಸರು, ಕಣಿಯನ್ ಮತ್ತು ಮಲೆಕುಡಿಯರು. ಕರ್ನಾಟಕದಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಆದಿವಾಸಿಗಳ ವಾಸದ ದಟ್ಟ ಕಾಡುಗಳಿವೆ. ಇವರಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತಮ್ಮದೇ ಆದ ಸಾಂಸ್ಕೃತಿಕ ಬದುಕಿದೆ. ಇವರಿಗೆಲ್ಲ ಅರಣ್ಯವೇ ಪ್ರಪಂಚ. ಅರಣ್ಯದ ಉತ್ಪನ್ನಗಳನ್ನು ಬಳಸಿಕೊಂಡೇ, ಅರಣ್ಯವನ್ನು ಪೋಷಿಸಿಕೊಂಡೇ ಬದುಕಿದ್ದಾರೆ. ಆದರೆ, ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ವನ್ಯ ಜೀವಿ ಸಂರಕ್ಷಣಾ ಕಾಯಿದೆಗಳು - ಈ ಆದಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಂಡಿತು. ಕಾಡು ಉತ್ಪನ್ನಗಳನ್ನು ಬಳಸುವುದನ್ನು ಮತ್ತು ಬೇಟೆಯಾಡುವುದನ್ನು ನಿಷೇಧಿಸುವ ಮೂಲಕ ಆದಿವಾಸಿಗಳ ಸ್ವಚ್ಛಂದ ಕಾಡಿನ ಬದುಕಿಗೆ ಕೊಡಲಿ ಏಟು ಹಾಕಲಾಯಿತು. ಅಲ್ಲದೆ, ಅವರನ್ನು ತಮ್ಮ ಮೂಲ ನಲೆಯಿಂದ ಸ್ಥಳಾಂತರಿಸುವ ಮೂಲಕ ತಮ್ಮದೇ ಕಾಡಿನಲ್ಲಿ ತಮ್ಮನ್ನು ಪರಕೀಯರನ್ನಾಗಿಸಿ, ಬದುಕುವ ಸ್ವಾತಂತ್ರ್ಯವನ್ನೇ ಮೊಟಕುಗೊಳಿಸಲಾಯಿತು. ಹೀಗೆ, ಅಡವಿ ಮಕ್ಕಳನ್ನು ಸ್ಥಳಾಂತರಿಸಿದ ಸರಕಾರ, ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸುವ ಯೋಜನೆಗಳನ್ನು ಕಾರ್ಯರೂಪಗೊಳಿಸಲಿಲ್ಲ. ಹಾಗಾಗಿ, ಬದುಕುವ ಪರ್ಯಾಯ ಮಾರ್ಗೋಪಾಯಗಳಿಲ್ಲದೇ ಇದ್ದುದರಿಂದ ಬಹುತೇಕ ಗಿರಿಜನರು ಸಾವಿನ ದವಡೆಗೆ ಸಿಲುಕಿದರು. ಇದಕ್ಕೊಂದು ಉತ್ತಮ ನಿದರ್ಶನ - 1970ರಲ್ಲಿ ಮೈಸೂರು ಜಿಲ್ಲೆಯ ದಡದಹಳ್ಳಿ ಗಿರಿಜನ ಕಾಲೋನಿಯಲ್ಲಿ ಹಸಿವಿನಿಂದ 80 ಮಕ್ಕಳು ಸಾವನ್ನಪ್ಪಿದ ಪ್ರಕರಣ. ಹೀಗೆ ಅರಣ್ಯ ಕಾಯಿದೆಗಳು ಆದಿವಾಸಿಗಳ ಬದುಕಿನ ಮೌಲ್ಯಗಳನ್ನು, ಕಾಡಿನೊಂದಿಗಿನ ಚೈತನ್ಯಯುತ ಸಂಸ್ಕೃತಿಯನ್ನು, ಕಾಡಿನ ಅನೋನ್ಯ ಸಂಬಂಧವನ್ನು ಬುಡಮೇಲು ಮಾಡಿದವು.

ಪ್ರತಿಕಾರ?
ಹೀಗೆ, ಕಾಡಿನ ಸ್ವಾತಂತ್ರ್ಯ ಕಳೆದು ಕೊಂಡ ಆದಿವಾಸಿಗಳಲ್ಲಿ ಕೆಲವು ಯುವಕರು ನಕ್ಸಲ್ ಕ್ರಾಂತಿಯತ್ತ ಆಕರ್ಷಿತರಾದರು. ಹಾಗು ಆದಿವಾಸಿಗಳ ಹಾಡಿಗೆ ಭೇಟಿ ನೀಡುತ್ತಾ ಅವರ ಮನಸ್ಸಿಗೆ ಸಲ್ಲದ, ಹುಸಿ ನೆತ್ತರ ಕ್ರಾಂತಿಯ ಬೀಜ ಬಿತ್ತಲು ಆರಂಭಿಸಿದರು. ಆದರೆ, ಮುಗ್ಧ ಮನಸ್ಸಿನ ಆದಿವಾಸಿ ಬಂಧುಗಳು ಆ ಕ್ರಾಂತಿಯ ವಿಚಾರದಿಂದ ದೂರವೇ ಉಳಿದರು. ಅದಕ್ಕೆ ಉತ್ತಮ ನಿದರ್ಶನವೇ ಕೊರಗ ಜನಾಂಗ. ಎಷ್ಟೇ ತೊಂದರೆ ಅನುಭವಿಸಿದರೂ, ತಮ್ಮ ಆದರ್ಶದ ಬದುಕಿಗೆ ವಿಮುಖವಾಗಿ ನಡೆದಿಲ್ಲ. ರಕ್ತದ ಕೋಡಿ ಹರಿಸಿಲ್ಲ. ಒಬ್ಬನೇ ಒಬ್ಬ ಕೂಡಾ ನಕ್ಸಲೇಟ್ ಆಗಿಲ್ಲ. ಇದು ಕೊರಗರ ಹೆಚ್ಚುಗಾರಿಕೆ.
- ಹೃದಯ


ಆ ಮಾದರಿಯ ನಡತೆ...
ಇದೊಂದು ಅಭಿಮಾನದ ವಿಷಯವೇ. ಇಂದಿನ ಕೊರಗ ಯುವ ಜನತೆ ಎದೆ ತಟ್ಟಿ ಹೇಳಬೇಕಾದ ವಿಷಯ ಮತ್ತು ಅದನ್ನು ತಮ್ಮ ಪರಂಪರೆಯಾಗಿ, ತಮ್ಮ ವಂಶದ ಕುರುಹಾಗಿ, ಮಾದರಿಯಾಗಿ ತೆಗೆದುಕೊಳ್ಳಬೇಕಾದ ವಿಷಯ. ಅದೇನೆಂದರೆ ಕೊರಗ ಸಮುದಾಯದ ಯಾರೇ ಹಿರಿಯರ ನಡೆ/ನಡತೆಯನ್ನು ಗಮನಿಸಿದರೂ, ಅವರು ತಮ್ಮ ದಾರಿಯಲ್ಲಿನ ಕಲ್ಲು ಮುಳ್ಳುಗಳನ್ನು ಅಥವಾ ಗಾಜಿನ ಚೂರುಗಳನ್ನು ಬದಿಗೆ ಸರಿಸಿಯೇ ಮುಂದುವರಿಯುತ್ತಾರೆ. ಅದು ತನಗೆ ಅಥವಾ ಆ ದಾರಿ ಹೋಕರಿಗೆ ತೊಂದರೆಯಾಗಬಾರದೆಂಬ ದೃಷ್ಠಿಯಿಂದ. ಹಾಗಂತ ಈ ವಿಚಾರವನ್ನು ಇತರರು ಕೇವಲವಾಗಿ ಪರಿಗಣಿಸಬಹುದು. ಇದು ಎಲ್ಲರೂ ಅನುಸರಿಸುವ ನಡೆ ಎಂದು ಕುಹಕವಾಡಬಹುದು. ಆದರೆ, ಕೊರಗರ ಈ ನಡೆ ಇಂದು ನಿನ್ನೆಯದಲ್ಲ. ವಂಶಪಾರಂಪರ್ಯದ ನಡೆ ಮತ್ತು ಇದು 'ಕಾಡಿನ ನಡೆ'. ಯಾಕೆಂದರೆ ಕಾಡಿನಲ್ಲಿ ನಡೆಯಬೇಕಾದರೆ ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿಯೇ ನಡೆಯಬೇಕು. ಕೊರಗರಿಗೆ ಕಾಡೇ ಬದುಕಾದುದರಿಂದ ಆ ನಡೆ ವಂಶಪಾರಂಪರ್ಯದ ನಡೆಯಾಗಿ ಮುಂದುವರಿದಿದೆ. ಆದರಿಂದ ಈಗಲೂ ದಾರಿಯಲ್ಲಿನ ಕಲ್ಲು ಮುಳ್ಳುಗಳನ್ನು ಸರಿಸಿಯೇ ಮುಂದುವರಿಯುತ್ತಾರೆ ಮತ್ತು ಅದನ್ನು ತಮ್ಮ 'ಧರ್ಮ' ಎನ್ನುತ್ತಾರೆ. ಆ ನಡೆ/ನಡತೆಯನ್ನು ಹಿರಿಯರಲ್ಲಿ ಈಗಲೂ ಕಾಣಬಹುದು. ಆದರೆ, ಕಿರಿಯರಲ್ಲಿ?! ಅದಕ್ಕಾಗಿಯೇ ಆ 'ಮಾದರಿಯ ನಡೆ'ಯನ್ನು ಇಂದಿನ ಯುವಜನತೆ ಮಾದರಿಯಾಗಿ ಮುಂದುವರಿಸಬೇಕು. ಯಾಕೆಂದರೆ ಅದು ನಮ್ಮ ಧರ್ಮ.
- ಹೃದಯ




ಕೊರಗರ ಮುಗ್ಧತೆಯೇ ಬಲಿಪಶುವಾಯಿತೆ?

ಸಾಮಾಜಿಕ ಬದುಕು ಮಾನವ ನಿರ್ಮಿತ ಅದ್ಭುತ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಮೇಲು - ಕೀಳು ಭಾವನೆಗಳು ಯಾಕೆ ಹುಟ್ಟಿ ಕೊಂಡಿತು ಎಂಬ ಪ್ರಶ್ನೆ ಹೃದಯವಂತರ ಮನವ ಕಾಡುತ್ತದೆ. ಇಂದು ಇಂತಹ ಭೇದಗಳು ನಿರ್ಧಾರವಾಗಲು ಜನರ ವೃತ್ತಿ ಕಾರಣವೆ? ಶಿಕ್ಷಣ ಕಾರಣವೆ? ಬಡತನ ಕಾರಣವೆ? ಅಥವಾ ಜಾತಿ ಕಾರಣವೆ? ಹೌದು. ಇವೆಲ್ಲವುಗಳ ಜೊತೆ ಇನ್ನೂ ಅನೇಕ ವಿಚಾರಗಳಿಂದ ಪ್ರತಿಫಲಿತಗೊಂಡ ಈ ಮೇಲು ಕೀಳು ಭಾವನೆ ಇಂದು ಕೆಲವೊಂದು ಮುಗ್ಧ ಜನಾಂಗಕ್ಕೆ ಭಾರೀ ಹೊಡೆಕವಾಗಿದೆ. ಇಂತಹ ಭಾವನೆಗಳಿಗೆ ಬಲಿಪಶುವಾಗಿರುವ ಜನಾಂಗಗಳಲ್ಲಿ ಕೊರಗ ಜನಾಂಗವೂ ಒಂದಾಗಿದೆ. ಜಾತಿ ವ್ಯವಸ್ಥೆಯ ಕಟ್ಟು ಪಾಡುಗಳು ಇಷ್ಟೊಂದು ಅನ್ಯಾಯ ಮಾಡಿದೆ ಎಂಬುದು ಗಂಭೀರ ವಿಚಾರವಾಗಿದೆ.

ಜಾತಿ ವ್ಯವಸ್ಥೆಯಲ್ಲಿ ನಲುಗಿರುವ ಭಾರತೀಯ ಸಮಾಜದಲ್ಲಿ ಇಂದು ಅನೇಕ ಜಾತಿಗಳು ತಮ್ಮ ಸಾಮರ್ಥ್ಯದಿಂದ ಮುಂದೆ ಬಂದಿರುವುದಾದರೆ, ಈ ಕೊರಗ ಜನಾಂಗ ಯಾಕೆ ಮುಂದುವರಿದಿಲ್ಲ? ಹೌದು. ಈ ಜನಾಂಗವೂ ಅಭಿವೃದ್ಧಿಯತ್ತ ಹೊರಟಂತಿದೆ. ಆದರೆ, ಉಳಿದ ಜಾತಿಗಳಿಗಿಂತ ಬಹಳಷ್ಟು ಹಿಂದುಳಿದಿದ್ದ ಕಾರಣ, ಅವರ ಸಮನಾಗಿ ಓಡಲು ಅಸಾಧ್ಯವಾಗಿ ಇನ್ನೂ ಪ್ರಯತ್ನಿಸುವುದೇ ಆಗಿದೆ. ಇದೀಗ ಮೇಲ್ವರ್ಗದ ಸ್ಥಾನದಲ್ಲಿರುವ ಜಾತಿ ಭಾಂದವರೂ ಹಿಂದೆ ಬಿದ್ದಿರುವ ತಮ್ಮ ಜೊತೆಗಾರ ಜಾತಿಗಳನ್ನು ತುಳಿಯುವವರಾದರಿಂದ ಆ ಬಡಪಾಯಿ ಜಾತಿಗಳು ಮೇಲೇರುವುದಾದರೂ ಹೇಗೆ?

ಮುಗ್ಧ ಬಡವರಾದ ಕೊರಗರಿಗೂ ಮನಸ್ಸು ಎಂಬುದು ಇದೆ. ಅವರೂ ಭವಿಷ್ಯದ ಕನಸು ಕಾಣುತ್ತಾರೆ. ಅವರ ಮನಸ್ಸೂ ಎಲ್ಲೋ ಒಂದೆಡೆ ನೋವಿನಿಂದ ಈ ರೀತಿ ಕೂಗುತ್ತಿರಬಹುದು.. "ಅಯ್ಯೋ, ನಾವೇನು ತಪ್ಪು ಮಾಡಿದ್ದೇವೆ? ನಮ್ಮನೇಕೆ ಈ ರೀತಿ ದೂರ ಮಾಡುತ್ತಾರೆ? ಎಲ್ಲರಿಗೂ ನ್ಯಾಯವಿರುವಾಗ ನಮಗೆ ಅದೂ ದೂರವಾಯಿತೇಕೆ? ನಮ್ಮ ಮನಸ್ಸನೇಕೆ ಚುಚ್ಚಿ ಹಿಂಸಿಸುತ್ತೀರಿ? ನಿಮಗೂ ಆತ್ಮಸಾಕ್ಷಿ ಎನ್ನುವುದಿಲ್ಲವೆ? ಈ ನೋವು ನಿಮಗೆ ತಿಳಿಯದೆ?" ಇತ್ಯಾದಿ ವೇದನೆಗಳಿಂದ ತುಂಬಿದ ಆ ಆತ್ಮ ಕಿರುಚಿದರೂ ಮೇಲ್ವರ್ಗ ಎನಿಸಿಕೊಂಡ ಆತ್ಮಗಳಿಗೆ ಅದು ಕೇಳಿಸದು! ಹಾಗಾಗಿ, ಈ ಸಮಾಜದ ಮುಖ್ಯವಾಹಿನಿ ಎಂದಿಗೂ ತನ್ನ ನಿಲುವನ್ನು ಬದಲಿಸಲಾರದೆ ಎಂಬುದು ಚಿಂತನೀಯವಾಗಿದೆ.

ಮನಸ್ಸಿನ ಮುಗ್ಧತೆ ಎಲ್ಲಿದೆ ಅಂದರೆ ಇಂದು ಅದು ಈ ಕೊರಗ ಜನಾಂಗದಲ್ಲಿ ಮನೆ ಮಾಡಿದೆ. ಈಗಿನ ಆಧುನಿಕ ಕಾಲದಲ್ಲಿ ಅಪಮೌಲ್ಯವಾಗಿರುವ ಮುಗ್ಧತೆ ಇನ್ನೂ ಇವರ ಬಳಿ ಉಳಿದಿರುವುದು ಯಾಕೆ? ಇದು ಹೊಗಳುವಂತದ್ದೆ. ಇಂದು ಇವರು ಯಾಕೆ ದುಷ್ಟರಾಗಿಲ್ಲ? ಕಳ್ಳ ಕದೀಮರಾಗಿಲ್ಲ? ಈ ವಿಚಾರವನ್ನು ನಮ್ಮ ಚಿಂತನಾಲಹರಿಯಲ್ಲಿ ಓಡಿಸಿದಾಗ ಉತ್ತರ ಸಿಗದಿರದೆ? ಹೌದು. ಇದುವೇ ಈ ಕೊರಗ ಜನಾಂಗದಲ್ಲಿ ಪ್ರಾಮಾಣಿಕತೆ, ಮುಗ್ಧತೆ ಇದೆ ಎಂಬುದಕ್ಕೆ ಸಾಕ್ಷಿ. ಇದನ್ನು ಸಮಾಜದ ಮುಖ್ಯ ವಾಹಿನಿಯ ಬಾಂಧವರು ತಿಳಿದುಕೊಳ್ಳರೇ? ಈ ಮುಗ್ಧತೆಯಿಂದಾಗಿ ಇಡೀ ಜನಾಂಗ ನಿರಂತರವಾಗಿ ಸಾಮಾಜಿಕ ತುಳಿತಕ್ಕೊಳಗಾಗಲು ಕಾರಣ ಎಂದರೆ ತಪ್ಪಾಗದು. ಇಲ್ಲಿ ಹಿರಿಯರೊಬ್ಬರು ಹೇಳಿದ ಮಾತು ಪ್ರಸ್ತುತವೆನಿಸುತ್ತದೆ - " ಬಲಿ ಕೊಡುವವರು ಎಂದಿಗೂ ಕುರಿ ಕೋಳಿಗಳನ್ನೇ ಬಲಿ ಕೊಡುತ್ತಾರೆ. ವಿನಹಃ ಹುಲಿ ಸಿಂಹಗಳನ್ನಲ್ಲ!" ಅಂತೆಯೇ ಸಮಾಜದಲ್ಲಿ ದೌರ್ಜನ್ಯ ದಬ್ಬಾಳಿಕೆಗಳಿಗೆ ಬಲಿಯಾಗುವವರೂ ಮುಗ್ಧರೇ ಆಗಿರುತ್ತಾರೆ.

ಸಮಾಜದಲ್ಲಿ ಈ ಅನ್ಯಾಯವನ್ನು ಸರಿಪಡಿಸಲು ಈಗ ಎಚ್ಚೆತ್ತುಗೊಂಡಿರುವುದು ಸಾಕೆ? ಇನ್ನೂ ಯಾರು ಎಚ್ಚೆತ್ತುಕೊಳ್ಳಬೇಕು? ಸರಕಾರ ಎಚ್ಚರವಾಗಬೇಕಾ? ಅಥವಾ ಈ ಬಲಿಪಶು ಜನಾಂಗವೇ ಹೋರಾಡಬೇಕೆ? ಈ ಪ್ರಶ್ನೆಗೆ ಉತ್ತರ ಸುಲಭಸಾಧ್ಯವೆ? ಸಾಧ್ಯವಿದೆ. ಇದು ಸಮಾಜದಲ್ಲಿ ಕಾರ್ಯನಿರ್ವಹಿಸುವ ಎಲ್ಲ ವ್ಯವಸ್ಥೆಗಳೂ ಸಮನ್ವಯ ರೀತಿಯಲ್ಲಿ ಬದಲಾವಣೆಗೊಂಡು ಮುಂದುವರಿದಾಗ ಈ ಜನಾಂಗದ ಸಮಾಜಿಕ ಭವಿಷ್ಯದಲ್ಲಿ ಒಂದು ಉಜ್ವಲ ಆಶಾಕಿರಣ ಕಾಣಬಹುದು.
- ಸಚ್ಚು ಉಡುಪಿ



ಬುಧವಾರ, ಜುಲೈ 23, 2014

ಕೊರಗ ಸಮುದಾಯದ ಚಿತ್ರಗಳು ಭಾಗ-4

'ಕೊರಗ ತನಿಯ'ನೆಂಬ ಯುವಕ 'ಕೊರಗಜ್ಜ'ನಾದ!

ಕೋಲು ಹಿಡಿದವರೆಲ್ಲಾ ಅಜ್ಜರಲ್ಲ! ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ... ಕೊರಗ ಜನಾಂಗದ ಕುಲ ಪುರುಷ - ತನಿಯನ ಕಾಲ ನಂತರ (ಬ್ರಾಹ್ಮಣರಿಂದ ನಡೆದ ವ್ಯವಸ್ಥಾ ಬದ್ಧವಾದ ಕೊಲೆ), ಆತನನ್ನು ಕೊರಗ ಸಮುದಾಯದ ಹಿರಿಯರು- ದೈವತ್ವಕ್ಕೇರಿಸಿ ಕುಲಪುರುಷನೆಂದು ಆರಾಧಿಸಲಾರಂಭಿಸಿದರು. ಮರದಡಿಯಲ್ಲಿ ಕಲ್ಲನಿಟ್ಟು ಪೂಜಿಸಲಾರಂಭಿಸಿದರು. ಕಲ್ಲಿನ ಮೇಲೆ ತನಿಯನಿಗೆ ಪ್ರಿಯವಾದ ಶೇಂಧಿಯನ್ನು ಇಡಲಾರಂಭಿಸಿದರು. ಅಲ್ಲೊಂದು ಕೋಲು ಇಟ್ಟರು. ಯಾಕೆಂದರೆ, ಕೊರಗ ಸಮುದಾಯದ ತನಿಯನಿಗೆ ‘ಆಮೆ - ಬೇಟೆ’ಯಾಡುವ ಹವ್ಯಾಸವಿತ್ತು. ಆತ ಹೋದಲೆಲ್ಲಾ ಕೋಲು ಹಿಡಿದುಕೊಂಡು ಹೋಗುತ್ತಿದ್ದ. ಆಮೆ ಹುಡುಕಬೇಕಾದರೆ ‘ಕೋಲು’ ಬೇಕೇ ಬೇಕು. ಕೋಲು ಇಲ್ಲದಿದ್ದರೆ ಆಮೆ ಬೇಟೆಯಾಡಲು ಸಾಧ್ಯವಿಲ್ಲ. ಹಾಗಾಗಿ, ತನಿಯನನ್ನು ಪ್ರತಿಸ್ಟಾಪಿಸಿದಲೆಲ್ಲಾ ಕೋಲು ಇಡುತ್ತಿದ್ದರು - ಕೊರಗ ಸಮುದಾಯದ ಬಾಂಧವರು. ಆದರೆ, ಯಾವಾಗ ಇತರ ಸಮುದಾಯದವರು ಕೊರಗರ ‘ತನಿಯ’ನನ್ನು ಪೂಜಿಸಲು ಆರಂಭಿಸಿದರೋ, ಅವರಿಗೆ ಕೋಲಿನ ಮಹತ್ವ ತಿಳಿಯಲಿಲ್ಲ. ಯಾಕೆಂದರೆ, ಕರಾವಳಿಯಲ್ಲಿ ಕೊರಗರನ್ನು ಬಿಟ್ಟರೆ ಬೇರೆ ಯಾರೂ - ಆಮೆ ಬೇಟೆಯಾಡಿದವರಲ್ಲ. ಅವರೂ ತನಿಯನ ಕಲ್ಲಿನಲ್ಲಿ ಕೋಲನ್ನು ಇಟ್ಟು ‘ತನಿಯಜ್ಜ’ ಎಂದು ಬಿಟ್ಟರು, ಇತರರೂ ‘ಕೊರಗಜ್ಜ’ ಎಂದರು! ಆದರೆ ತನಿಯ ಕಾಲವಾದದ್ದು ತನ್ನ ಬರಿಯ ಹದಿನೆಂಟನೆ ವಯಸ್ಸಿನಲ್ಲಿ! ಆತನಿಗೆ ಕೋಲು ಬೇಕಾದದ್ದು ಆಮೆ ಬೇಟೆಯಾಡಲೇ ಹೊರತು ಆಧಾರಕ್ಕಲ್ಲ! ಆತ ಅಜ್ಜನಾಗಲೇ ಇಲ್ಲ. ಆದರೆ, ಇತರರು ಆತನನ್ನು ‘ಅಜ್ಜ’ನನ್ನಾಗಿ ಮಾಡಿಬಿಟ್ಟರು!

- ಹೃದಯ





ಕೊರಗ ಭಾಷೆ ಮತ್ತು ವೈಶಿಷ್ಟ್ಯ

ಮಾನವ ಭಾವನೆಗಳನ್ನು ವ್ಯಕ್ತಪಡಿಸಲು, ಪರಸ್ಪರ ಸಂವಹನ ನಡೆಸಲು ಇರುವಂತಹ ಮಾಧ್ಯಮವೇ ಭಾಷೆ. ಭಾಷೆ ಬಾರದ, ಇರದ ಮಾನವ ಪ್ರಾಣಿ ಬಹುಃಶ ಈ ಜಗತ್ತಿನಲ್ಲಿಯೇ ಇರಲಾರದೇನೋ!!

ಪ್ರಾಚೀನ ಆದಿಮಾನವನು ಹಲವಾರು ತರಹದ ಕೈಸನ್ನೆ, ಬಾಯಿ ಸನ್ನೆಗಳ ಮೂಲಕ ಭಾವನೆಗಳನ್ನು ವ್ತಕ್ತಪಡಿಸುತ್ತಿದ್ದರು. ಅದು ಅಭಿವೃದ್ಧಿ ಹೊಂದುತ್ತಾ ನಿರ್ದಿಷ್ಟ ಪದಗಳ ಬಳಕೆ ಆರಂಭವಾಯಿತು. ಹಾಗೆ ಭಾಷೆ ಹುಟ್ಟುತ್ತಾ ಬೆಳೆಯುತ್ತಾ ಬಂತು.

ಭಾಷೆಯು ದೇಶ, ರಾಜ್ಯ, ಪ್ರಾಂತ್ಯ, ಜಾತಿ, ಧರ್ಮಗಳಿಗೆ ಸಂಬಂಧಿಸಿದಂತೆ, ಪ್ರಾದೇಶಿಕ ಭಿನ್ನತೆಯನ್ನು ಮಹತ್ವವನ್ನು ಪಡೆದಿರುತ್ತದೆ. ಭಾಷೆ ಒಂದು ಜನ ಸಮೂಹದ ಅನನ್ಯತೆಯ, ಅಸ್ತಿತ್ವದ ಪ್ರತೀಕವೂ ಹೌದು. ಒಂದು ಭಾಷೆಯೊಳಗೆ ಹಲವಾರು ಉಪ ಭಾಷೆಗಳು ಇರಬಹುದು.

ಆದಿವಾಸಿ ಬುಡಕಟ್ಟು ಪಂಗಡಗಳು ಕೂಡಾ ಇದೇ ರೀತಿಯ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಭಾರತದ ಆದಿವಾಸಿ ಬುಡಕಟ್ಟು ಪಂಗಡಗಳಲ್ಲಿ ಒಂದಾಗಿರುವ ಈ ಕೊರಗ ಜನಾಂಗವು ಕೂಡ ತನ್ನದೇ ಆದ ಇತಿಹಾಸ, ಆಚಾರ ವಿಚಾರ , ಸಂಸ್ಕೃತಿ, ಉಡುಗೆ ತೊಡುಗೆ, ಮನರಂಜನೆ ಮತ್ತು ಭಾಷೆಯನ್ನು ಹೊಂದಿದೆ. ಆದರೆ, ಶೋಷಣೆ ಅನುಕರಣೆ ಮತ್ತು ಆಧುನೀಕರಣಗಳ ಬಿರುಗಾಳಿಗೆ ಸಿಲುಕಿ ಇಂದು ಸಮುದಾಯವೇ ಅವನತಿಯ ಅಂಚಿನಲ್ಲಿದೆ. ಅಳಿದುಳಿದ ಪಳೆಯುವಿಕೆಗಳು ಕೂಡಾ ರೂಪಾಂತರಗೊಂಡಿದೆ.

ಸಮುದಾಯದ ಅನನ್ಯತೆಯ ದೃಷ್ಟಿಯಿಂದಾಗಿ ಭಾಷೆ, ಸಂಸ್ಕೃತಿಗಳ ರಕ್ಷಣೆ ಮತ್ತು ಧನಾತ್ಮಕ ಬೆಳವಣಿಗೆ ಮುಖ್ಯವಾತ್ತದೆ. ಸರಿಯಾದ ಬಳಕೆಯಿಂದ ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕೊರಗ ಭಾಷೆಯು ಯಾವುದೇ ಭಾಷೆಯ ಉಪ ಭಾಷೆಯಾಗಿರದೆ, ಸ್ವತಂತ್ರ ಭಾಷೆಯೇ ಆಗಿರಬಹುದು. ಯಾಕೆಂದರೆ, ಕೊರಗ ಸಮುದಾಯವು ಆದಿ ಮೂಲದ ಜನಾಂಗವಾಗಿರುವುದರಿಂದ ಇತರ ಭಾಷೆಗಳನ್ನು ಅನುಕರಣೆ ಮಾಡಿರಲು ಸಾಧ್ಯವಿಲ್ಲ. ಅಲ್ಲದೆ ತುಳು, ಕನ್ನಡ ಭಾಷೆಯಲ್ಲಿ ಸಿಗದಂತಹ ಪದಗಳು ಕೊರಗ ಭಾಷೆಯಲ್ಲಿ ಸಿಗುತ್ತದೆ. ಕಾಲಕ್ರಮೇಣ ತುಳು ಭಾಷೆಯ ಪ್ರಭಾವಕ್ಕೆ ಒಳಗಾಗಿರುವುದು ಅಧ್ಯಯನದಿಂದ ತಿಳಿದು ಬರುತ್ತದೆ. ಪ್ರಸ್ತುತ ಕೊರಗ ಭಾಷೆಯಲ್ಲಿ ಐದು ಪ್ರಾದೇಶಿಕ ಬಿನ್ನತೆಗಳನ್ನು ಗುರುತಿಸಲು ಸಾಧ್ಯವಿದೆ.

ಉಡುಪಿ ಜಿಲ್ಲೆಯ - ಉಡುಪಿ ನಗರ, ಕೋಟಾ, ಬ್ರಹ್ಮಾವರ, ಬಾರ್ಕೂರು ಸುತ್ತಮುತ್ತ ಒಂದು ಬಗೆಯ ಕೊರಗ ಭಾಷೆ ಚಾಲ್ತಿಯಲ್ಲಿದ್ದರೆ, ಕಾಪು, ಬೆಳ್ಮಣ್ಣು, ಕಿನ್ನಿಗೋಳಿ, ಕಾರ್ಕಳ ಪರಿಸರದಲ್ಲಿ ಇನ್ನೊಂದು ಬಗೆಯ ಭಿನ್ನತೆಯೊಂದಿಗೆ ಬಳಕೆಯಲ್ಲಿದೆ. ಕೊಕ್ಕರ್ಣೆ, ಹೆಬ್ರಿ, ಬಜಗೋಳಿ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಅರಗ ಸುತ್ತಮುತ್ತ ಮತ್ತೊಂದು ರೀತಿಯಲ್ಲಿ ಭಾಷೆಯ ಬಳಕೆಯಿದೆ. ಅದೇ ರೀತಿ ಕುಂದಾಪುರ, ಶಂಕರನಾರಾಯಣ, ಕೊಲ್ಲೂರು, ಬೈಂದೂರು, ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ ಮೊದಲಾದ ಕಡೆ ತುಸು ಭಿನ್ನ ರೀತಿಯಲ್ಲಿ ಕೊರಗ ಭಾಷೆ ಚಾಲ್ತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ಹಾಗೂ ಕೇರಳದ ಕಾಸರಗೋಡು ಸುತ್ತಮುತ್ತ ಇನ್ನೂ ಒಂದು ಶೈಲಿಯ ಕೊರಗ ಭಾಷೆ ಬಳಕೆಯಲ್ಲಿತ್ತು ಆದರೆ, ಅದೀಗ ಬಳಕೆಯ ಕೊರತೆಯಿಂದಾಗಿ ಕೆಲವೇ ಕೆಲವೊಂದು ಅವಶೇಷಗಳು ಮಾತ್ರ ಕಾಣಲು ಸಿಗುತ್ತದೆ.


ಈ ಎಲ್ಲಾ ಪ್ರಕಾರಗಳು - ತುಳು, ಕನ್ನಡ, ಮಲಯಾಳಿ ಭಾಷೆಗಳ ಪ್ರಭಾವಕ್ಕೊಳಗಾಗಿ ಹಲವಾರು ಭಿನ್ನತೆಗಳೊಂದಿಗೆ ಚಾಲ್ತಿಯಲ್ಲಿದ್ದರೂ, ಕೆಲವೊಂದು ಮೂಲ ಸಾಮ್ಯತೆಗಳನ್ನು ಉಳಿಸಿಕೊಂಡು ಬಂದಿದೆ. ಮಕ್ಕಳು ಎಂಬ ಪದವನ್ನು ಉಡುಪಿ ಮತ್ತು ಬಾರ್ಕೂರು ಪರಿಸರದ ಭಾಷೆಯಲ್ಲಿ 'ಜೇರ್ಲು' ಎಂದು ಕರೆದರೆ, ಕಾಪು ಮತ್ತು ಬೆಳ್ಮಣ್ಣು ಸುತ್ತಲಿನ ಭಾಷೆಯಲ್ಲಿ 'ಕುಜೇರ್ಲು' ಎನ್ನಲಾಗುತ್ತದೆ. ಇದೇ ಪದವನ್ನು ಕುಂದಾಪುರ, ಬೈಂದೂರು ಕಡೆ 'ಕಿಜ್ಜೆರ್' ಎಂದು ಬಳಸಲ್ಪಟ್ಟರೆ, ಕೊಕ್ಕರ್ಣೆ, ಹೆಬ್ರಿ, ತೀರ್ಥಹಳ್ಳಿ ಕೊರಗರ ಭಾಷೆಯಲ್ಲಿ 'ಕಿದ್ದೆರ್' ಎಂದು ಬಳಸುತ್ತಾರೆ. ಮಾಂಸ ಎಂಬ ಪದವು ಕ್ರಮವಾಗಿ ಚಮ್ಮಾಯಿ, ಸಮಾಯಿ, ಚಮ್ಮಿ ಎಂದು ಉಪಯೋಗವಾಗುತ್ತದೆ. ಇಲ್ಲಿ ಪರಸ್ಪರ ಸಾಮ್ಯತೆಗಳಿರುವುದನ್ನು ಗುರುತಿಸಲು ಸಾಧ್ಯವಿದೆ. ಮಡಾರ್ ಎಂಬ ಪದವು ಸಾಮಾನ್ಯವಾಗಿ ಎಲ್ಲಾ ಪ್ರಾದೇಶಿಕ ಭಿನ್ನತೆಯಲ್ಲೂ ಒಂದೇ ರೀತಿಯಲ್ಲಿ ಬಳಕೆಯಲ್ಲಿದೆ (ಮಡರ್ = ಎಂಜಲನ್ನ; ಮಡೆ = ಎಂಜಲು; ಔರು = ಅನ್ನ) ಅದೇ ರೀತಿ ಮದುವೆ ಎಂಬರ್ಥದ ಪದವು ಕ್ರಮವಾಗಿ ಬಿರ್ದು, ಮಂಗಿಲ ಎಂದು ಉಪಯೋಗವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಉಡುಪಿ, ಬಾರ್ಕೂರು ಸುತ್ತಲಿನ ಭಾಷೆಯು ಕಾಪು, ಬೆಳ್ಮಣ್ಣಿನ ಭಾಷೆಗೆ ಹೆಚ್ಚು ನಿಕಟವಾಗಿದೆ. ಇನ್ನು ಕೊರಗ ಭಾಷೆಯಲ್ಲಿ ಕೆಲವು ತುಳು ಹಾಗು ಹಳೆಗನ್ನಡದ ಪದಗಳೂ ಯಥಾರ್ಥದಲ್ಲಿ ಕಾಣಸಿಗುತ್ತದೆ. ಹಳೆಗನ್ನಡದ 'ಸೊಲ್ಲು' ಎಂಬ ಪದ ಕೊರಗ ಭಾಷೆಯಲ್ಲಿ ಕ್ರಿಯಾ ಪದವಾಗಿ (ಸೊಲ್ಲು = ಹೇಳು) ಬಳಲ್ಪಡುತ್ತದೆ. ಇಲ್ಲಿ ವ್ಯತ್ಯಾಸ ಭಿನ್ನತೆಗಳೇನಿದ್ದರೂ ಕೊರಗ ಸಮುದಾಯಕ್ಕೊಂದು ಸ್ವತಂತ್ರ ಭಾಷೆ ಇರುವುದು ಹೆಮ್ಮೆಯ ವಿಷಯ. ಈ ಬಗ್ಗೆ ಮುಂದೆ ವಿಸ್ತೃತವಾಗಿ ಚರ್ಚಿಸೋಣ. ಸುಂದರ ಸಂಸ್ಕೃತಿ ನಿರ್ಮಿಸೋಣ!

- ಬಾಬು ಕೊರಗ, ಪಾಂಗಾಲ


ಸಿಹಿ ಜೇನ ಸವಿದು ಜೇನಿನಂತಾದವರು...


ಕೊರಗ ಸಮುದಾಯದ ಕುಲಕಸುಬು ಬುಟ್ಟಿ ನೇಯುವುದು, ಹಗ್ಗ ಮಾಡುವುದು ಮತ್ತು ಜೇನು ತೆಗೆಯುವುದು. ತಮ್ಮದೇ ಆದ ಕೌಶಲ್ಯಭರಿತ ಪ್ರತಿಭೆಗಳಿಂದ ಈ ಕೆಲಸವನ್ನು ನಾಜೂಕಾಗಿ ಮಾಡಬಲ್ಲರು.

ಜೇನು ತೆಗೆಯುವ ಕೊರಗರ ಬುದ್ಧಿವಂತಿಕೆ ಎಲ್ಲೂ ದಾಖಲಾಗಿಲ್ಲ. ಯಾರೂ ತಿಳಿಯಲಿಲ್ಲ. ಪ್ರಾಣಿ ಪಕ್ಷಿ, ಕ್ರಿಮಿ ಕೀಟ, ಗಿಡ ಬಳ್ಳಿಗಳೊಂದಿಗೆ ಅನ್ಯೋನ್ಯತೆಯಿಂದ ಬದುಕುವುದು ಕೊರಗರ ಸಂಸ್ಕೃತಿ. ಸಾಮಾನ್ಯವಾಗಿ ಡಿಸೆಂಬರ್ ನಿಂದ ಮೇ ತಿಂಗಳವರೆಗೆ ಜೇನು ತೆಗೆಯುವ ಕೆಲಸದಲ್ಲಿ ಕೊರಗರು ತೊಡಗುತ್ತಾರೆ.

ಕಾಡಿನಲ್ಲಿ ಜೇನುನೊಣಗಳನ್ನು ಅರಸುತ್ತ ಅಲೆದಾಡುತ್ತಾರೆ. ಜೇನುನೊಣದ ಸ್ವರವನ್ನು ಹಿಂಬಾಲಿಸುವುದರಲ್ಲಿ ಮೂರು ವಿಧಗಳಿವೆ. ಮೊದಲನೆಯದಾಗಿ ಜೇನುನೊಣಗಳು ಮಕರಂದಕ್ಕಾಗಿ ಹೂವನ್ನು ಹುಡುಕುವ ಸ್ವರ, ನೊಣಗಳ ಆಟದ ಸ್ವರ ಮತ್ತು ಮಕರಂದವನ್ನು ಹೀರಿ ತನ್ನ ವಾಸಸ್ಥಾನಕ್ಕೆ (ಗೂಡಿಗೆ) ಸೇರುವ ಸ್ವರ. ಗೂಡಿಗೆ ನೊಣಗಳು ಹಾರುವ ಸ್ವರವನ್ನು ಅನುಸರಿಸಿ ಜೇನು ತೆಗೆಯುವ ಬುದ್ಧಿವಂತಿಕೆ ಕೊರಗರಲ್ಲಿ ಇದೆ. ಕೊರಗರು ಯಾವತ್ತೂ ಜೇನುಗೂಡನ್ನು ಸುಡುವುದಿಲ್ಲ, ಅಗಿದು ಧ್ವಂಸ ಮಾಡುವುದಿಲ್ಲ. ಅವುಗಳ ಮರಿಗಳು ದೊಡ್ಡದಾಗಿ ಜೇನು ಸಂಗ್ರಹವಾದ ಮೇಲೆ ತೆಗೆಯುವರು. ಆ ಗೂಡು ಮುಂದಿನ ತಲೆಮಾರಿಗೂ ಇರಲಿ ಅಥವಾ ಅದು ತನಗಲ್ಲದಿದ್ದರೂ ಇನ್ನು ಯಾರಿಗಾದರೂ ಸಿಗಲಿ ಎನ್ನುವ ಮನೋಭಾವ ಕೊರಗರದು. ಈ ರೀತಿಯ ಬುದ್ಧಿವಂತಿಕೆ ಇಡೀ ಸಮುದಾಯಕ್ಕೆ ಸ್ವಾಭಿಮಾನದ ಸಂಕೇತ. ಒಟ್ಟು ಸಮಾಜಕ್ಕೆ ಮಾದರಿಯ ಸಂದೇಶ.
- ಮತ್ತಡಿ ಕೊರಗ
ಕಾಯರ್ ಪಳಿಕೆ, ಬಂಟ್ವಾಳ




ಪೋಲಿಯೋ ಎಂಬ ಮಹಾಮಾರಿಗೆ ಸವಾಲಾದವರು; ಈಗ ಉಪನ್ಯಾಸಕರು!

ಇವರ ಹೆಸರು ದಿನಕರ ಕೆಂಜೂರು. ಉಡುಪಿ ಜಿಲ್ಲೆಯ ಕೆಂಜೂರಿನ ಕಲ್ಲುಗುಡ್ಡೆಯ ಸುಕ್ರ ಕೊರಗ ಮತ್ತು ಶಾಂತ ದಂಪತಿಯ ಮಕ್ಕಳಲ್ಲಿ ಒಬ್ಬರಾದ ದಿನಕರ ಕೊರಗ ಹುಟ್ಟುತ್ತಲೇ ಪೋಲಿಯೋ ಎಂಬ ಮಹಾಮಾರಿಗೆ ಒಳಗಾದರು. ಹುಟ್ಟು ಬಡತನ, ಕೌಟುಂಬಿಕ ಅನಕ್ಷರತೆ ಮತ್ತು ತನಗೆ ಸವಾಲೆನಿಸಿದ ಪೋಲಿಯೋ ಪೀಡಿತ ಭಿನ್ನ ದೇಹಾಕೃತಿಯನ್ನು ಮೆಟ್ಟಿ ನಿಲ್ಲುತ್ತಲೇ, ಸಾಧನೆಯ ಹಾದಿಯಲ್ಲಿ ಛಲದಂಕಮಲ್ಲನೆನೆಸಿಕೊಂಡವರು.
Photo: ಪೋಲಿಯೋ ಎಂಬ ಮಹಾಮಾರಿಗೆ ಸವಾಲಾದವರು; ಈಗ ಉಪನ್ಯಾಸಕರು!

ಇವರ ಹೆಸರು ದಿನಕರ ಕೆಂಜೂರು. ಉಡುಪಿ ಜಿಲ್ಲೆಯ ಕೆಂಜೂರಿನ ಕಲ್ಲುಗುಡ್ಡೆಯ ಸುಕ್ರ ಕೊರಗ ಮತ್ತು ಶಾಂತ ದಂಪತಿಯ ಮಕ್ಕಳಲ್ಲಿ ಒಬ್ಬರಾದ ದಿನಕರ ಕೊರಗ ಹುಟ್ಟುತ್ತಲೇ ಪೋಲಿಯೋ ಎಂಬ ಮಹಾಮಾರಿಗೆ ಒಳಗಾದರು. ಹುಟ್ಟು ಬಡತನ, ಕೌಟುಂಬಿಕ ಅನಕ್ಷರತೆ ಮತ್ತು ತನಗೆ ಸವಾಲೆನಿಸಿದ ಪೋಲಿಯೋ ಪೀಡಿತ ಭಿನ್ನ ದೇಹಾಕೃತಿಯನ್ನು ಮೆಟ್ಟಿ ನಿಲ್ಲುತ್ತಲೇ, ಸಾಧನೆಯ ಹಾದಿಯಲ್ಲಿ  ಛಲದಂಕಮಲ್ಲನೆನೆಸಿಕೊಂಡವರು.
ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡರೂ ತಮ್ಮ ತಂದೆ, ಇಬ್ಬರು ತಮ್ಮಂದಿರು ಮತ್ತು ಓರ್ವ ತಂಗಿ ಹಾಗೂ 'ಊರುಗೋಲೆಂಬ ಜೀವ ಮಿತ್ರ'ನ ಸಹಾಯದಿಂದಲೇ ಉಡುಪಿ ಜಿಲ್ಲೆಯ ಶ್ರೀ ವೀರೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಬ್ಯಾಸವನ್ನು ಆರಂಭಿಸಿದರು. ಪ್ರೌಡಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರು ಶಿರ್ವದ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದರು. ನಂತರ ಉನ್ನತ ವ್ಯಾಸಾಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೇರ್ಪಡೆಗೊಂಡ ಇವರು ಎಂ.ಕಾಂ ಸ್ನಾತ್ತಕೋತ್ತರ  ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡರು.

2009ರಲ್ಲಿ ಮಂಗಳೂರು ವಿವಿ ವಾಣಿಜ್ಯ ಅಧ್ಯಯನ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ಸಾಧಿಸುವ ಛಲದ ಮುಂದೆ ಮಹಾಮಾರಿಯೊಂದು ಅಸಹಾಯಕ ಸ್ಥಿತಿಗೆ ತಲುಪಿದ  ಸ್ವಾರಸ್ಯವಿದು!!

ದಿನಕರ ಕೆಂಜೂರು - 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ' ಕರ್ನಾಟಕ ಮತ್ತು ಕೇರಳ (ರಿ) ಇದರ ಸಕ್ರೀಯ ಸದಸ್ಯರಾಗಿದ್ದಾರೆ.
- ಹೃದಯ
ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡರೂ ತಮ್ಮ ತಂದೆ, ಇಬ್ಬರು ತಮ್ಮಂದಿರು ಮತ್ತು ಓರ್ವ ತಂಗಿ ಹಾಗೂ 'ಊರುಗೋಲೆಂಬ ಜೀವ ಮಿತ್ರ'ನ ಸಹಾಯದಿಂದಲೇ ಉಡುಪಿ ಜಿಲ್ಲೆಯ ಶ್ರೀ ವೀರೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಬ್ಯಾಸವನ್ನು ಆರಂಭಿಸಿದರು. ಪ್ರೌಡಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಇವರು ಶಿರ್ವದ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದರು. ನಂತರ ಉನ್ನತ ವ್ಯಾಸಾಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸೇರ್ಪಡೆಗೊಂಡ ಇವರು ಎಂ.ಕಾಂ ಸ್ನಾತ್ತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡರು.

2009ರಲ್ಲಿ ಮಂಗಳೂರು ವಿವಿ ವಾಣಿಜ್ಯ ಅಧ್ಯಯನ ಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಶೈಕ್ಷಣಿಕ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ಸಾಧಿಸುವ ಛಲದ ಮುಂದೆ ಮಹಾಮಾರಿಯೊಂದು ಅಸಹಾಯಕ ಸ್ಥಿತಿಗೆ ತಲುಪಿದ ಸ್ವಾರಸ್ಯವಿದು!!

ದಿನಕರ ಕೆಂಜೂರು - 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ' ಕರ್ನಾಟಕ ಮತ್ತು ಕೇರಳ (ರಿ) ಇದರ ಸಕ್ರೀಯ ಸದಸ್ಯರಾಗಿದ್ದಾರೆ.
- ಹೃದಯ
 —

ಬುಟ್ಟಿ ಹೆಣೆಯುವ ಕೈಗಳು ಶಿಕ್ಷಣಕ್ಕೆ ಪ್ರೋತ್ಸಾಹವಿತ್ತಾಗ...


ಇದು ಮತ್ತೊಂದು ಸಂತೋಷದ ವಿಷಯ! ದೈಹಿಕವಾಗಿ ಮತ್ತು ಮಾನಸಿಕವಾಗಿ 'ಅಜಲು' ಎಂಬ ಅನಿಷ್ಠ ಮತ್ತು ನಿಷೇದಿತ 'ಬಿಟ್ಟಿ ಚಾಕರಿ' (ಉಚಿತ ಸೇವೆ)ಗೆ ಒಳಪಟ್ಟ ಕೊರಗ ಆದಿವಾಸಿ ಸಮುದಾಯ, ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ - ತಾವೂ ಕೂಡ ಏನನ್ನಾದರೂ ಸಾಧಿಸಬಲ್ಲೆವು ಮತ್ತು ತಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ!

ಬುಟ್ಟಿ ಹೆಣೆಯುತ್ತಾ, ಡೋಲು ಬಡಿಯುತ್ತಾ, ಸಮಾಜದಲ್ಲಿ ತೀರಾ ಕೆಳಮಟ್ಟಕ್ಕೆ ದೂಡಲ್ಪಟ್ಟ ಕೊರಗ ಸಮುದಾಯದ ಹಿರಿಯ ಜೀವಿಗಳು - ತಮ್ಮ ಮಕ್ಕಳು ಯಾವತ್ತೂ ಈ ತಮ್ಮಂತೆ ಪರರ ಬಿಟ್ಟಿ ಚಾಕರಿಗಾಗಿ ಬದುಕಬಾರದೆಂದು ಆಶಿಸಿದವರೇ.
ಅಂತಹುದೇ ಆಸೆ - ಆಕಾಂಕ್ಷೆಗಳನ್ನು ಹೊತ್ತ ಹಿರಿ ಜೀವವೇ ಸುಕ್ರ ಕೊರಗ. ಉಡುಪಿ ಜಿಲ್ಲೆಯ ಕೆಂಜೂರಿನ ಸುಕ್ರ ಕೊರಗ ಎಂಬವರ ಹಿರಿಯ ಮಗ ದೈಹಿಕ ಅನಾನುಕೂಲತೆಗೆ ಒಳಗಾದರೂ ಅವನನ್ನು ಶೇಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಏರಿಸಿದವರು. ಈಗ ಅವರ ಎರಡನೇ ಪುತ್ರನ ಸರದಿ! ಅಣ್ಣ ದಿನಕರ ಕೆಂಜೂರಿನಂತೆ ತಮ್ಮ ದಿನೇಶ್ ಕೂಡ ಶೈಕ್ಷಣಿಕ ರಂಗದಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕೋಲೇಜ್ನಲ್ಲಿ ಬಿಎಸ್ಡಬ್ಲ್ಯು ಮಾಡಿದ ದಿನೇಶ್, ಮಂಗಳೂರು ವಿವಿಯಲ್ಲಿ ಎಂಎಸ್ಡಬ್ಲ್ಯು ಮುಗಿಸಿ ಯುಜಿಸಿ - ನೆಟ್ ಲೆಕ್ಚರರ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಕೊರಗ ಸಮುದಾಯದಿಂದ ಯುಜಿಸಿ ಪಾಸಾದ ಎರಡನೇ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ.

ಅಪ್ಪನಿಗೆ ಅಕ್ಷರದ ಅರಿವಿಲ್ಲದಿದ್ದರೂ, ತಮ್ಮಿಬ್ಬರು ಮಕ್ಕಳು 'ಅಕ್ಷರದ ಬೆಳಕಾಗುವ' ಮಟ್ಟಕ್ಕೆ ಬೆಳೆಸಿದ್ದಾರೆ. ತಂದೆ ಮಕ್ಕಳಿಗೆ ನಮ್ಮನಿಮ್ಮೆಲ್ಲರ ಪರವಾಗಿ ಪ್ರೀತಿಯ ವಂದನೆ... ಅಭಿನಂದನೆಗಳು...
- ಹೃದಯ


ಯುಜಿಸಿ ಪಾಸಾದ ಕೊರಗ ಸಮುದಾಯದ ಪ್ರಥಮ ಪ್ರತಿಭೆ..

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ನಿದಾನವಾಗಿಯಾದರೂ ಶೈಕ್ಷಣಿಕ ರಂಗದಲ್ಲಿ ಅತ್ಯುತ್ತಮ ಎನ್ನಬಹುದಾದ ಸಾಧನೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಬಿತಾ ಗುಂಡ್ಮಿ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಗುಂಡ್ಮಿ ಎಂಬಲ್ಲಿ ಜನಿಸಿದ ಸಬಿತಾ, ಬಾಲ್ಯದಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಂಡ ತಬ್ಬಲಿ. ಆದರೆ, ತನ್ನ ದೊಡ್ಡಮ್ಮ ಮತ್ತು ದೊಡ್ಡಪ್ಪನ ಆಸರೆಯಲ್ಲಿ - ಪ್ರೀತಿಯ ಹಾರೈಕೆಯಲ್ಲಿ ಬೆಳೆದ ಸಬಿತಾ, ಬ್ರಹ್ಮಾವರದಲ್ಲಿಯೇ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು.
ಉಡುಪಿ ಜಿಲ್ಲೆಯ ಮಂಚಕಲ್ ಪೆರ್ನಾಲಿನ ಸಮಗ್ರ ಗ್ರಾಮೀಣ ಆಶ್ರಮ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಜೊತೆಗೆ ಕೆಲಸ ಮಾಡಿಕೊಂಡ ಸಬಿತಾ ತಾನೂ ಕಲಿಯಬೇಕೆಂಬ ಕನಸು ಕಂಡವರು. ಅವರ ಆಕಾಂಕ್ಷೆಗೆ ಸಮಗ್ರ ಗ್ರಾಮೀಣ ಆಶ್ರಮ ಬೆಂಬಲವಾಗಿ ನಿಂತಿತು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದ ಸಬಿತಾ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಸ್ಲೆಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗುವ ಮೂಲಕ ಕೊರಗ ಸಮುದಾಯದ ಪ್ರಪ್ರಥಮ ಯುಜಿಸಿ ತೇರ್ಗಡೆಗೊಂಡ ಸಾಧಕಿಯೆಂಬ ಕೀರ್ತಿಗೆ ಪಾತ್ರರಾದರು. ಆ ಮೂಲಕ ಒಟ್ಟು ಸಮಾಜ - ಕೊರಗ ಬುಡಕಟ್ಟು ಪಂಗಡವನ್ನು ಶೈಕ್ಷಣಿಕ ರಂಗದಲ್ಲಿಯೂ ಗುರುತಿಸುವಂತಾಯಿತು ಅಭಿನಂದನೆಗಳು ಸಬಿತಾ..
- ಹೃದಯ


ಕಾಸರಗೋಡಿನಲ್ಲಿ 'ಕನ್ನಡ'ದ ಸಾಧಕಿ!


ಮಲಯಾಳ ಭಾಷೆಯ ಪ್ರಭಾವಕ್ಕೆ ಭಾಗಶಃ ಒಳಗಾಗಿರುವ, ಕರ್ನಾಟಕದ ಗಡಿನಾಡು ಕಾಸರಗೋಡುನಲ್ಲಿ ಕೊರಗ ಸಮುದಾಯದ ಯುವತಿಯೊಬ್ಬಳು ಕನ್ನಡದಲ್ಲಿಯೇ ಸ್ನಾತ್ತಕೋತ್ತರ ಪದವಿ ಪೂರೈಸಿ ಸಮುದಾಯಕ್ಕೆ ಕೀರ್ತಿ ತಂದಿದ್ದಾಳೆ.

ವರ್ಕಾಡಿ ಗ್ರಾಮ ಪಂಚಾಯತಿನ ಬೊಡ್ಡೋಡಿಯ ಕೂಲಿಕಾರ್ಮಿಕ ವೃತ್ತಿಯ ಶೇಖರ ಕೊರಗ ಮತ್ತು ತುಕ್ರು ಎಂಬವರ ಮಗಳಾಗಿರುವ ಮೀನಾಕ್ಷಿ ಕೊರಗ ಎಂಬವಳೇ ಈ ಸಾಧನೆಗೈದವಳು.

ಬೊಡ್ಡೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಈಕೆ ಹತ್ತಿರದ ಕೊಡ್ಲುಮೊಗರು ವಾಣಿವಿಜಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದರು. ಕನ್ಯಾನ ಕಾಲೇಜಿನಲ್ಲಿ ಪಿಯುಸಿ ಪಾಸಾದ ಮೀನಾಕ್ಷಿ, ಮಂಜೇಶ್ವರ ಗೋವಿಂದ ಪೈ ಸರಕಾರಿ ಸ್ಮಾರಕ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. 2012ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ ಪೂರೈಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಆದಿವಾಸ ಕೊರಗ ಸಮುದಾಯದ ಸ್ನಾತ್ತಕೋತ್ತರ ಪದವಿ ಪೂರೈಸಿದ ಪ್ರಪ್ರಥಮ ಸಾಧಕಿಯಾಗಿ ಮೂಡಿ ಬಂದಿದ್ದಾರೆ.

ಇದೀಗ ಮೀಯಪದವಿನ ರತ್ನಾಕರ ಕೊರಗ ಎಂಬವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಅಭಿನಂದನೆಗಳು ಮೀನಾಕ್ಷಿ ಬೊಡ್ಡೋಡಿಯವರಿಗೆ...
- ಹೃದಯ