ಗುರುವಾರ, ಜನವರಿ 29, 2015

ಆತ್ಮಸಾಕ್ಷಿಯ ದೀಪ ಆರದಿರಲಿ......



     -ಡಾ.ಎಂ.ಡಿ.ಒಕ್ಕುಂದ

          ಗೊಮ್ಮಟನ ನಾಡಿನಲ್ಲಿ ಕನ್ನಡ ನಾಡು ನುಡಿಯ ಮಹಾಜಾತ್ರೆ ಇನ್ನೇನು ಆರಂಭವಾಗುತ್ತದೆ. ಆದರೆ ಕನ್ನಡ ಬದುಕಿನ ಸಾಕ್ಷಿಪ್ರಜ್ಞೆ ದೇವನೂರು ಮಹದೇವ ಅವರ ಆಶಯಕ್ಕೆ ಸಮ್ಮೇಳನ ವೇದಿಕೆಯಾದೀತೇ ಎಂಬ ಪ್ರಶ್ನೆ ಹಾಗೂ ಆಗಲಿಕ್ಕಿಲ್ಲ ಎಂಬ ಆತಂಕ ಕಾಡುತ್ತಿವೆ.

ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಯೋಗವು ಶ್ರವಣಬೆಳಗೊಳದಲ್ಲಿ ನಡೆಯಲಿರುವ ೮೧ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಾಗ ೧೦ನೆಯ ತರಗತಿಯವರೆಗೆ ಮಾತೃಭಾಷಾ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವವರೆಗೆ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಭಾಗವಹಿಸದಿರುವ ತಮ್ಮ ಮೂರು ದಶಕಗಳ ನಿಲುವಿಗೆ ಬದ್ಧತೆಯನ್ನು ಮುಂದುವರಿಸಿ ಆ ಗೌರವದ ಸ್ಥಾನವನ್ನು ದೇವನೂರು ಮಹದೇವ ನಿರಾಕರಿಸಿದರು. ಈ ಹಿಂದೆ ಎರಡು ಬಾರಿ ಇದೇ ಕಾರಣಕ್ಕೆ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನೂ,  ನೃಪತುಂಗ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೂ ತಿರಸ್ಕರಿಸಿದ್ದರು. ಕರ್ನಾಟಕದ ಪ್ರಮುಖ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳ ನೇತಾರರು ಹಾಗೂ ಅವುಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ ನಾವು- ತಾವುಗಳೆಲ್ಲ ಕಳೆದ ಎರಡು ದಶಕಗಳಲ್ಲಿ ನಮ್ಮ ನಿಲುವುಗಳಲ್ಲಿ ಮಾಡಿಕೊಂಡ ಬದಲಾವಣೆಗಳು ಹಾಗೂ ರಾಜೀ ಮನೋಭಾವವನ್ನು ನೆನೆಸಿಕೊಂಡರೆ, ಹಾಗೂ ಜೀವನದುದ್ದಕ್ಕೂ ಸಾಹಿತ್ಯ ಪರಿಷತ್ತು, ಅಕಾಡೆಮಿಗಳ ಅಧ್ಯಕ್ಷರಾಗುವ, ಸದಸ್ಯರಾಗುವ, ಪ್ರಶಸ್ತಿಗಳನ್ನು ಸ್ವೀಕರಿಸುವ ಮನೋಭಾವವನ್ನು ತೀವ್ರವಾಗಿ ಖಂಡಿಸಿ ಕೆಲವರಿಂದ ರಾಜೀನಾಮೆ ಕೊಡಿಸಿ, ಪ್ರಶಸ್ತಿಗಳನ್ನು ಹಿಂದಿರುಗಿಸಿಸಿ ಸಂಭ್ರಮಿಸಿದ ನನ್ನ ತಲೆಮಾರಿನ ನಾವು ಕೆಲವರು ಒಂದು ಸಣ್ಣ ಸಾಂಸ್ಕೃತಿಕ ಅಧಿಕಾರ ಕೇಂದ್ರ, ಒಂದು ಪುಟ್ಟ ಪ್ರಶಸ್ತಿ ಬಂದಾಗ ಸಂಭ್ರಮಿಸುತ್ತಿರುವ ವಾಸ್ತವವನ್ನು ನೆನಪಿಸಿಕೊಂಡರೆ ಮಹಾದೇವ ಅವರ ಬದ್ಧತೆ ಮತ್ತು ದೃಢತೆಗಳ ಚಾರಿತ್ರಿಕ ಮಹತ್ವ ಅರಿವಿಗೆ ಬರುತ್ತದೆ.

ರಾಜಕೀಯ ಅಧಿಕಾರಗಳು, ಸಾಂಸ್ಕೃತಿಕ ಅಧಿಕಾರ ಕೇಂದ್ರಗಳು, ಗೌರವ- ಪ್ರಶಸ್ತಿ- ಸನ್ಮಾನಗಳು ಪ್ರತಿಭಟನಾ ಮನೋಭಾವವನ್ನು ನಿಯಂತ್ರಿಸುವ ಸಲಕರಣೆಗಳಾಗಿ ಬಳಕೆಯಾಗುತ್ತ ಸಾಂಸ್ಕೃತಿಕ ವಲಯದಲ್ಲಿ ಮೌನವನ್ನು ಉತ್ಪಾದಿಸತೊಡಗಿವೆ. ಹೀಗಾಗಿ ಪ್ರಭುತ್ವದ ನಿಲುವುಗಳಿಗೆ ಬಹುತೇಕರು ಮೌನವಾಗಿದ್ದೇವೆ. ಇಲ್ಲವೇ ಒಂದು ಸೀಮಿತ ಚೌಕಟ್ಟಿನಲ್ಲಿ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದಂತೆ ಮಾಡಿ ಮರೆತುಬಿಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ.  ಚಳುವಳಿಗಳನ್ನು ಹುಟ್ಟುಹಾಕುವ ನೈತಿಕ ಶಕ್ತಿಯನ್ನೇ ಕಳೆದುಕೊಂಡು ದುರ್ಬಲರಾಗುತ್ತಿದ್ದೇವೆ. ಮಾತೃಭಾಷಾ ಮಾಧ್ಯಮದ ಶಿಕ್ಷಣ ನೀತಿಯನ್ನು ಕುರಿತಂತೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸರ್ವೋಚ್ಛ ನ್ಯಾಯಾಲಯದ ತೀರ್ಮಾನವು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಬಂಡವಾಳಶಾಹಿ ಪ್ರಭುತ್ವಗಳ ಹಿತಾಸಕ್ತಿಯ ಪರವಾಗಿ ಹೊರಬಿದ್ದಾಗ ದಿಗ್ಭ್ರಾಂತರಾದೆವು. ಅಥವಾ ಹಾಗೆ ತೋರಿಸಿಕೊಂಡೆವು. ಜನಾಂದೋಲನವೊಂದು ಏಕಾಏಕಿಯಾಗಿ ಆರಂಭವಾಗಿ ಬಿಡಬೇಕಾದ ಚಾರಿತ್ರಿಕ ಸಂದರ್ಭವದು. ಕರ್ನಾಟಕದ ಶೂದ್ರ, ದಲಿತ, ರೈತ, ಬಂಡಾಯ, ಮಹಿಳಾ, ಪರಸರ ಇತ್ಯಾದಿ ಚಳುವಳಿಗಳು ಒಂದೊಂದು ಸಣ್ಣಪುಟ್ಟ ಕಾರಣಗಳನ್ನು ನೆಪಮಾಡಿಕೊಂಡು ಹೊರಹೊಮ್ಮಿದವು. ಯಾಕೆಂದರೆ ವ್ಯವಸ್ಥೆ ಹಾಗೂ ಮನಸ್ಥಿತಿಗಳಲ್ಲಿ ಒಳಗೇ ಚಳುವಳಿಯ ಕಾವು ಸಿದ್ಧವಾಗಿತ್ತು. ಆದರೆ ಇಲ್ಲಿ, ಚಳುವಳಿ ಹುಟ್ಟಲು ಬಲಾಢ್ಯ ಕಾರಣವಿರುವಾಗಲೂ, ಜಾಗತೀಕರಣದ ಒಪ್ಪಂದದ ನಂತರ ಹಳೆಯ ಹೊಸ ಶೋಷಣೆಗಳು ತೀವ್ರವಾಗಿರುವಾಗಲೂ, ಪ್ರಾದೇಶಿಕ ಭಾಷೆ, ಸಂಸ್ಕೃತಿ ಹಾಗೂ ಬದುಕುಗಳನ್ನು ಸರ್ವನಾಶಗೊಳಿಸುವಷ್ಟು ಆಕ್ರಮಣ ತೀವ್ರವಾಗಿರುವಾಗಲೂ ನಾವೆಲ್ಲ ನೋಯುತ್ತಿದ್ದೇವೆಯೇ ಹೊರತು ಪುಟಿದೇಳುತ್ತಿಲ್ಲ. ಆದರೆ ದೇವನೂರು ಮಹದೇವ ಪುಟಿದೇಳುವ ಚಾರಿತ್ರಿಕ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರು ಮನವೊಲಿಸಲು ಹೋದಾಗ ತಮ್ಮ ನಿಲುವನ್ನು ಬದಲಾಯಿಸದೇ ’ಹಾಲಂಬಿಯವರಿಗೆ ಒಂದು ಬಹಿರಂಗಪತ್ರ’ ಬರೆದರು. ಆ ಪತ್ರ ಕೇವಲ ಹಾಲಂಬಿಯವರಿಗಲ್ಲ- ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೇ ಬರೆದ ಬಹಿರಂಗ ಪತ್ರವಾಗಿತ್ತು. ಇಲ್ಲಿಯವರೆಗೆ ತಮ್ಮಷ್ಟಕ್ಕೆ ತಾವೇ ರಾಜಕೀಯ, ಸಾಂಸ್ಕೃತಿಕ ಅಧಿಕಾರ ಕೇಂದ್ರಗಳನ್ನು, ಪ್ರಶಸ್ತಿಗಳನ್ನು ತಿರಸ್ಕರಿಸಿ ಸಂಚಲನ ಸೃಷ್ಟಿಸಿ ಮೌನವಾಗುತ್ತಿದ್ದವರು ಈ ಬಾರಿ ಸಾಕಷ್ಟು ಹೆಜ್ಜೆ ಮುಂದೆ ಹೋಗಿ ಎಲ್ಲರೂ ಸೇರಿ ಜನಾಂದೋಲನವನ್ನು ಆರಂಭಿಸಬೇಕಾದ ಅಗತ್ಯವನ್ನು ಮಂಡಿಸಿದ್ದರು. ನಾಡು, ನುಡಿ, ಸಂಸ್ಕೃತಿ ಹಾಗೂ ಪ್ರಾದೇಶಿಕ ಬದುಕಿನ ನೆಲೆಗಳು ನಿರ್ನಾಮವಾಗುತ್ತಿರುವ ಇಂಥ ಸಂಕಟದ ಸಂದರ್ಭದಲ್ಲೂ ದೇವನೂರ ಅವರ ಪ್ರಸ್ತಾಪಕ್ಕೆ ತೀರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸತ್ತಂತಿಹರನು ಬಡಿದೆಚ್ಚರಿಸುವುದು, ಕಷ್ಟ ಎನ್ನುವುದು ಸಾಬೀತಾಯಿತು.
ಮಹದೇವ ತಮ್ಮ ಪತ್ರದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ ಸಂಗತಿಗಳೆಂದರೆ- ಮಾತೃಭಾಷಾ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಕುರಿತಾದ ಆಘಾತಕಾರಿ ಬೆಳವಣಿಗೆಗಳು ಕೇವಲ ಕನ್ನಡದ ಪ್ರಶ್ನೆಯಲ್ಲ. ನವಬಂಡವಾಳವಾದದ ಆಕ್ರಮಣಕ್ಕೆ ತುತ್ತಾದ ಈ ದೇಶದ ಹಾಗೂ ಬಡರಾಷ್ಟ್ರಗಳ ಪ್ರಾದೇಶಿಕ ಭಾಷೆ; ಸಂಸ್ಕೃತಿ ಬದುಕುಗಳ ಅಳಿವು ಉಳಿವಿನ ಪ್ರಶ್ನೆ. ಇದಕ್ಕಿರುವ ಏಕೈಕ ದಾರಿಯೆಂದರೆ ತಕ್ಷಣವೇ ದೇಶದ ಪಾರ್ಲಿಮೆಂಟಿನ ಮೇಲೆ ಒತ್ತಡ ಹೇರಬಲ್ಲ ಜನಾಂದೋಲನವನ್ನು ಕರ್ನಾಟಕದಿಂದ ಆರಂಭಿಸುವುದು. ಅದರ ನಾಯಕತ್ವವನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯಪರಿಷತ್ತು ವಹಿಸಿಕೊಂಡು ಮರುಹುಟ್ಟು ಪಡೆಯಬೇಕು. ಕರ್ನಾಟಕದಲ್ಲಿ ಚಳುವಳಿ ಹುಟ್ಟಲು ಪೂರಕವಾದ ರಾಜಕೀಯ ವಾತಾವರಣವೂ ಇದೆ.-  ದೇವನೂರರ ಜನಾಂದೋಲನದ ಕನಸಿಗೆ ಜೀವತುಂಬುವ ನೈತಿಕ ಜವಾಬ್ದಾರಿಯಿಂದ ನಾವೆಲ್ಲ ನುಣುಚಿಕೊಂಡೆವಲ್ಲವೇ?. ಕನಿಷ್ಟಪಕ್ಷ ಆ ಕುರಿತು ತಕರಾರುಗಳಿದ್ದರೆ  ದಾಖಲಿಸದಂತೆ  ಮೌನವಹಿಸಿದೆವು.

ಒಮ್ಮೆ ಹೀಗೆ ಊಹಿಸೋಣ- ಈಗಾಗಲೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿದ ಹಿರಿಯರು ದೇವನೂರ ಅವರನ್ನು ಬೆಂಬಲಿಸಿ ತಾವು ಬೀದಿಗಿಳಿಯುವುದಾಗಿ ಘೋಷಿಸಿದ್ದರೆ, ಮಹಾದೇವ ತಿರಸ್ಕರಿಸಿದ ೮೧ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಇದೇ ಕಾರಣ ನೀಡಿ ಈ ನಾಡಿನ ಯಾವ ಹಿರಿಯ ಸಾಹಿತಿಗಳೂ ಒಪ್ಪಿಕೊಳ್ಳದೇ ಹೋಗಿದ್ದರೆ, ಈ ಸಮ್ಮೇಳನದ ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಸನ್ಮಾನ ಗೋಷ್ಠಿಗಳಲ್ಲಿ ಭಾಗವಹಿಸಲು ಇದೇ ಕಾರಣಕ್ಕೆ ನಾವು ನೀವೆಲ್ಲ ನಿರಾಕರಿಸಿದ್ದರೆ, ಎಲ್ಲ ಅಕೆಡಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ರಾಜೀನಾಮೆ ನೀಡಿ ಈನಾಡಿನ ಸಾಹಿತಿ ಕಲಾವಿದರು ಮಾತೃ ಭಾಷಾಮಾಧ್ಯಮದ ಶಿಕ್ಷಣ ವ್ಯವಸ್ಥೆ ಹಾಗೂ ಸಮಾನ ಶಿಕ್ಷಣ ನೀತಿಗಳು ಜಾರಿಯಾಗುವವರೆಗೆ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸುವ ತೀರ್ಮಾನವನ್ನು ಪ್ರಕಟಿಸಿದ್ದರೆ, ಕನ್ನಡ ಚಿತ್ರರಂಗವನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಯತ್ನಿಸಿದ್ದರೆ...  ಆಂದೋಲನಕ್ಕೆ ಒಂದು ಸಣ್ಣ ಸಂಚಲನ ಸಿಗಬಹುದಾಗಿತ್ತಲ್ಲವೇ? ಈ ರೇ.. ಪ್ರಪಂಚ ಅತೀ ಆದರ್ಶವಾದಿಯಾಗಿ ತೋರಿದರೂ ಅಸಾಧ್ಯವಾದುದೇನಾಗಿರಲಿಲ್ಲ. ದೇವನೂರರ ತೀರ್ಮಾನ ಅಂಥದೊಂದು ಆತ್ಮಾವಲೋಕನಕ್ಕೆ ತೊಡಗಿಸಿತ್ತು. ನಾವೆಲ್ಲ ಮೌನ ವಹಿಸಿದೆವು. ಇದು ಮಹಾಮೌನ.
ಹಾಗೆ ನೋಡಿದರೆ ದೇವನೂರು ನಿಲುವಿಗೆ ತಕ್ಕಮಟ್ಟಿಗೆ ಘನತೆಯಿಂದ ಸ್ಪಂದಿಸಿದ್ದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು. ಪುಂಡಲೀಕ ಹಾಲಂಬಿಯವರು ಸಮ್ಮೇಳನವನ್ನು ಜನಾಂದೋಲನದ ಕಾರ‍್ಯಾಗಾರವಾಗಿ ರೂಪಿಸುವುದಾಗಿ ಘೋಷಿಸಿದರು. ನಿಯೋಜಿತ ಸರ್ವಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ದೇವನೂರರ ಆಶಯಗಳು ಮೊದಲ ಆದ್ಯತೆಯಾಗಿ ಚರ್ಚಿಸಿ ಸಮ್ಮೇಳನದ ಮೂಲಕ ಜನಾಂದೋಲನಕ್ಕೆ ನಾಂದಿ ಹಾಡುವುದಾಗಿ ಹೇಳಿಕೊಂಡರು. ಈಗಾಗಲೇ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ. ’ಸಂವಿಧಾನ-ರಾಜ್ಯಭಾಷಾನೀತಿ’, ’ಕನ್ನಡ-ಬದುಕು - ಚಳುವಳಿಗಳು’, ’ಸ್ವಾತಂತ್ರೋತ್ತರ ಕರ್ನಾಟಕ-ವರದಿಗಳ ಅನುಷ್ಠಾನ’ ಎಂಬ ಮೂರು ಪ್ರಮುಖ ಗೋಷ್ಠಿಗಳನ್ನು ರೂಪಿಸಲಾಗಿದೆ. ಮೇಲುನೋಟಕ್ಕೆ ದೇವನೂರರ ಆಶಯಗಳಿಗೆ ಆದ್ಯತೆ ಸಿಕ್ಕಂತೆ  ಭಾಸವಾಗುತ್ತದೆ. ಆದರೆ ಚಳುವಳಿಯನ್ನು ರೂಪಿಸುವ ಉದ್ದೇಶ ಇದ್ದಂತಿಲ್ಲ. ಹಾಗೇನಾದರೂ ಇದ್ದಿದ್ದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪು-ಚಿಂತನೆಯ ಕೇಂದ್ರವಾಗುತ್ತಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ದೀನ ದಲಿತರಿಂದ ಹಿಡಿದು ಪುರೋಹಿತ ಸಿರಿವಂತರವರೆಗೆ ಇಂಗ್ಲೀಷ್ ವ್ಯಾಮೋಹದಲ್ಲಿ ಮುಳಿಗೇಳುತ್ತಿರುವ ವಾಸ್ತವದ ಬಗ್ಗೆ, ಅದಕ್ಕೆ ಕಾರಣವಾಗಿರುವ ಸಾಮ್ರಾಜ್ಯಶಾಹಿ ರಾಜಕೀಯ ಹಿತಾಸಕ್ತಿಗಳ ಹಾಗೂ ಕಾರ್ಯಾಚರಣೆಗಳ ಬಗ್ಗೆ,  ಚಿಂತನ ಮಂಥನ ನಡೆಯತ್ತಿತ್ತು. ಮುಖ್ಯವಾಗಿ ಪಾರ್ಲಿಮೆಂಟಿನ ಮೇಲೆ ಒತ್ತಡ ಹೇರುವ ಜನಾಂದೋಲನವನ್ನು ರೂಪಿಸುವ ತಾತ್ವಿಕ ಹಾಗೂ ಸಂಘಟನಾತ್ಮಕ ಪ್ರಣಾಳಿಕೆಯನ್ನು ರೂಪಿಸುವುದು ಮೊದಲ ಆದ್ಯತೆಯಾಗುತ್ತಿತ್ತು. ಸಮ್ಮೇಳನವನ್ನು ಭವಿಷ್ಯದ ಆಂದೋಲನದ ನೀಲನಕ್ಷೆಯನ್ನು ತಯಾರಿಸುವ ಕಾರ‍್ಯಾಗಾರವಾಗಿ ರೂಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುತುವರ್ಜಿವಹಿಸಿಲ್ಲ. ದೇವನೂರರ ಆಶಯ ಆದ್ಯತೆ ಪಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಹಾಗಾದರೆ ಮುಂದೇನು? 

   ಮಾತೃಭಾಷಾ ಮಾಧ್ಯಮ ಹಾಗೂ ಸಮಾನ ಶಿಕ್ಷಣ ನೀತಿ ಜಾರಿ ಬರುವವರೆಗೆ ಇನ್ನೊಂದು ಸಮ್ಮೇಳನ ನಡೆಸುವುದಿಲ್ಲವೆಂದೂ ಸಮ್ಮೇಳನ ಮುಗಿದ ಮಾರನೆಯ ದಿನದಿಂದಲೇ ಕರ್ನಾಟಕದ ಸಾಂಸ್ಕತಿಕ ಲೋಕದ ಒಡನಾಟದಲ್ಲಿ ರೂಪು ರೇಷೆಗಳನ್ನು ಸಿದ್ಧಪಡಿಸಿ ಜನಾಂದೋಲನವನ್ನು ಆರಂಭಿಸುವ ಏಕೈಕ ನಿರ್ಣಯವನ್ನು ಪರಿಷತ್ತು ತೆಗೆದುಕೊಳ್ಳಬಹುದೇ? ಹಾಗೆ ಪರಿಷತ್ತು ತೀರ್ಮಾನಿಸದಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಒಟ್ಟಾಗಿ ಪರಿಷತ್ತಿನ ಕಣ್ಣೊರೆಸುವ ತಂತ್ರವನ್ನು ಧಿಕ್ಕರಿಸಿ ಜನಾಂದೋಲನಕ್ಕೆ ಚಾಲನೆ ನೀಡೀತೇ? ಅಥವಾ ದೇವನೂರು ಮಹದೇವ ಬೆಳಗಿಸಿದ ಆತ್ಮ ಸಾಕ್ಷಿಯ ದೀಪ ಆರಿ ಹೋದೀತೇ?
                                       

ಬುಧವಾರ, ಜನವರಿ 28, 2015

ತೊಗಲುಗೊಂಬೆಯಾಟ : ಪರಂಪರೆ ಮತ್ತು ಆಧುನಿಕತೆ

-ಡಾ. ಎಸ್.ಎಂ. ಮುತ್ತಯ್ಯ

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ ಚಿತ್ರದುರ್ಗ ನಗರದಲ್ಲಿ ಇಂದು ಆಯೋಜನೆಗೊಂಡಿರುವ ಯಕ್ಷಗಾನ ಬಯಲಾಟ ರಂಗಸಂಭ್ರಮ ಎಂಬ ಈ ವಿಶಿಷ್ಟ ಕಾರ್ಯಕ್ರಮದ ಮೊದಲ ಗೋಷ್ಟಿಯ ಅಧ್ಯಕ್ಷರಾದ ಪ್ರೊ. ಎಚ್.ಲಿಂಗಪ್ಪನವರೆ, ಗೋಷ್ಟಿಯಲ್ಲಿ ಉಪಸ್ಥಿತರಿರುವ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರು ಹಿರಿಯರೂ ಆಗಿರುವ ಪಿ. ತಿಪ್ಪೇಸ್ವಾಮಿಯವರೇ, ಚಿತ್ರದುರ್ಗ ಶಿಕ್ಷಕರ ತರಬೇತಿ ಕೇಂದ್ರದ ಸಹ ನಿದೇರ್ಶಕರಾದ ಎಸ್.ಎನ್.ಕುಮಾರ್ ಅವರೆ, ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿರುವ ಎಲ್ಲಾ ಆಹ್ವಾನಿತ ಗಣ್ಯರೇ, ಕಲಾಸಕ್ತ ಬಂಧುಗಳೆ, ಮಾದ್ಯಮದ ಮಿತ್ರರೆ ನಿಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು.
ಬಂಧುಗಳೆ ನಮ್ಮ ಚಿತ್ರದುರ್ಗ ಇತಿಹಾಸ ಹಾಗೂ ಸಂಸ್ಕೃತಿಯ ವಿಷಯದಲ್ಲಿ ಶ್ರೀಮಂತ ಪರೆಂಪರೆಯನ್ನು ಹೊಂದಿರುವ ಪ್ರದೇಶವಾಗಿದೆ. ಇಂಥ ಮಹತ್ವದ ನೆಲದಲ್ಲಿ ನಾಡಿನ ವಿಭಿನ್ನ ಜನಪದ ಕಲೆಗಳ ಬಗೆಗಿನ ಚರ್ಚೆ ಹಾಗೂ ಪ್ರರ್ಶನಗಳನ್ನು ಏರ್ಪಡಿಸುವುದರ ಮೂಲಕ ಈ ಭಾಗದ ಜನರಿಗೆ ಸಮಾಜಿಕ ಹಾಗೂ ಕಲಾ ಜಾಗೃತಿಯನ್ನು ಜೊತೆಗೆ ಮನೋರಂಜನೆಯನ್ನು ನೀಡಬಹುದಾದ ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ, ಹಾಗೂ ಅವರ ಸದಸ್ಯರೆಲ್ಲರಿಗೂ ಚಿತ್ರದುರ್ಗ ಪ್ರದೇಶದ ಎಲ್ಲಾ ಜನರ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು.
ಸರ್ಕಾರ ಅಥವಾ ಸಂಘ ಸಂಸ್ಥೆಗಳ ವತಿಯಿಂದ ನಡೆಯುವ ಇಂಥ ಕಾರ್ಯಕ್ರಮಗಳಲ್ಲಿ ಕಲೆಗಳ ಬಗೆಗಿನ ಕೇವಲ ಚರ್ಚೆಯೋ ಅಥವಾ ಬರೀ ಪ್ರದರ್ಶನವೂ ನಡೆಸುವುದುಂಟು. ಆದರೆ ಈ ಕಾರ್ಯಕ್ರಮದಲ್ಲಿ ಕಲೆಯ ಬಗ್ಗೆ ಮಾಹಿತಿಪೂರ್ಣ ಚರ್ಚೆ ಹಾಗು ಕಲೆಯ ಪ್ರದರ್ಶನ ಒಟ್ಟೊಟ್ಟಿಗೆ ನಡೆಯುತ್ತಿರುವುದು ವಿಶೇಷ.  ಇದರ ಭಾಗವಾಗಿ ಈ ದಿನ ಮಧ್ಯಾಹ್ನ ೨ ಗಂಟೆಗೆ ತುಮಕೂರು ಜಿಲ್ಲೆಯ ಪುಟ್ಟ ಶಾಮಯ್ಯ ಅವರ ತಂಡದ ವತಿಯಿಂದ ತೊಗಲುಗೊಂಬೆಯಾಟ ನಡೆಯಲಿದೆ. ಅದಕ್ಕೂ ಮೊದಲು ಈಗ ತೊಗಲುಗೊಂಬೆಯಾಟ ಕಲೆಯ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದಾಗಿದೆ.
ತೊಗಲುಗೊಂಬೆಯಾಟದ ಸ್ವರೂಪ
ಹೆಸರೇ ಸೂಚಿಸುವಂತೆ ತೊಗಲಿನಿಂದ ಗೊಂಬೆಗಳನ್ನು ತಯಾರಿಸಿ ಅವುಗಳನ್ನು ವ್ಯವಸ್ಥಿತವಾಗಿ ಜೊಡಿಸಿ ರಂಗ ವೇದಿಕೆಯ ಮೇಲೆ ತಂದು ಅವುಗಳ ಮೂಲಕವೇ ಕಥೆಗಳನ್ನು ಪ್ರದರ್ಶಿಸಿ ತೋರಿಸುತ್ತಾರೆ. ಪಾತ್ರಗಳ ಲಕ್ಷಣ ಹಾಗೂ ಔಚಿತ್ಯಕ್ಕೆ ತಕ್ಕಂತೆ ತೊಗಲನ್ನು ಕತ್ತರಿಸಿ ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಾಕುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರಗಳ ರೂಪ ರಚಿಸುತ್ತಾರೆ. ವಿವಿಧ ರೀತಿಯ ಸಣ್ಣ ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ಬೇಕಾದ ಕಡೆ ರಂಧ್ರ ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ. ಗೊಂಬೆಗಳು ಚಲಿಸುವಂತೆ ಅನುಕೂಲವಾಗಲು ಕೈ ಕಾಲು ಕತ್ತುಗಳಿಗೆ ಕೀಲುಗಳಿರುತ್ತವೆ. ಕೈಚಳಕದಿಂದ ಆಡಿಸಲು ಹಿಂದಕ್ಕೆ ಬಿದಿರಿನ ಕಡ್ಡಿಯನ್ನು ಕಟ್ಟಿರುತ್ತಾರೆ.  ಆ ಕಡ್ಡಿಗಳನ್ನು ಬೆರಳುಗಳಿಗೆ ಸಿಕ್ಕಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ಕುಣಿಯುವ ಈ ಬಣ್ಣದ ಗೊಂಬೆ ಬಿಳಿ ತೆರೆಯ ಮೇಲೆ ಪಡಿ ಮೂಡುವಂತೆ ತೆರೆಯ ಹಿಂಭಾಗದಲ್ಲಿ ವಿದ್ಯುಚ್ಛಕ್ತಿ ದೀಪ ಬಳಸಿ ಮಂದವಾದ ಬೆಳಕು ನೀಡುವ ವ್ಯವಸ್ಥೆ ಮಾಡಿರುತ್ತಾರೆ. ಗೊಂಬೆಗಳು ಸುಮಾರು ಎರಡು ಮೂರು ಅಡಿ ಎತ್ತರ ಇರುತ್ತವೆ. ಕೆಲವೆಡೆ ಮಾನವಾಕೃತಿಯ ಅಳತೆಯ ಗೊಂಬೆಗಳು ಇರುವುದೂ ಉಂಟು. ಒಬ್ಬ ಅನುಭವೀ ಕಲಾವಿದ ಗೊಂಬೆಗಳನ್ನು ಪ್ರದರ್ಶಿಸಿದೆ ಉಳಿದ ಕಲಾವಿದರು ಪರದೆಯ ಹಿಂದೆ ಕುಳಿತು ಆಟಕ್ಕೆ ಅಗತ್ಯವಾದ ಧ್ವನಿ, ಸಂಗೀತ ಮತ್ತಿತರ ಸಹಾಯವನ್ನು ನೀಡುತ್ತಾರೆ. ಪ್ರದರ್ಶನಕ್ಕೆ ಬಿಳಿ ಪರದೆ, ಹಾರ್ಮೋನಿಯಂ, ಮೃದಂಗ, ತಾಳ, ಗೆಜ್ಜೆಗಳು ಅವಶ್ಯಕ. ಈ ಕಲಾವಿದರ ತಂಡ ಹಲವಾರು ಸಂದರ್ಭಗಳಲ್ಲಿ ಒಂದೇ ಕುಟುಂಬದ ಸದಸ್ಯರೇ ಆಗಿರುತ್ತಾರೆ ಎಂಬುದು ಗಮನಾರ್ಹ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಮೇಲೆ ಪಡಿನೆಳಲಾಗುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ. ಈ ಕಲೆಯ ಪ್ರದರ್ಶನಕ್ಕೆ ವಿಶಿಷ್ಟ ರಂಗಸಜ್ಜಿಕೆ ಬೇಕು. ಎತ್ತರದ ವೇದಿಕೆ ಮೇಲೆ ಎತ್ತರದ ಮಂಟಪ ರಚಿಸಿ, ಉದ್ದದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿರುತ್ತಾರೆ. ಮಂಟಪದ ಉಳಿದ ಮೂರು ಬದಿಗಳನ್ನು ಚಾಪೆ ಅಥವಾ ಕಂಬಳಿಗಳಿಂದ ಮುಚ್ಚುತ್ತಾರೆ. ಈ ಪ್ರದರ್ಶನಗಳು ರಾತ್ರಿ ಇಡೀ ನಡೆಯುವ ಕಾಲವೊಂದಿತ್ತು ಈಗ ಎರಡು ಮೂರು ಗಂಟೆಗಳ ಅವಧಿಗೆ ಸೀಮಿತಗೊಂಡಿದೆ. 
ಉದ್ದೇಶಗಳು ಮತ್ತು ಸಂದರ್ಭಗಳು
ತೊಗಲುಗೊಂಬೆಯಾಟ ಮೊಟ್ಟ ಮೊದಲಿಗೆ ಆರಂಭಗೊಂಡಿದ್ದು ಭಕ್ತಿ ಮತ್ತು ಭಾವನೆಗಳ ಹಿನ್ನೆಲೆಯಲ್ಲಿ. ಹಾಗಾಗಿಯೇ ಈ ಆಟದಲ್ಲಿ ಪೌರಾಣಿಕ ಕಥೆಗಳು ಪ್ರಧಾನವಾಗಿದ್ದು ಅವುಗಳ ಮೂಲಕ ಭಕ್ತಿ ಪ್ರಚಾರದ ಉದ್ದೇಶವಿತ್ತು. ಈ ಕಲೆಯನ್ನು ಪ್ರದರ್ಶಿಸುವವರನ್ನು ದೈವ ಸ್ವರೂಪಿ ಎಂಬುದಾಗಿ ಭಾವಿಸಲಾಗಿತ್ತು. ಗೊಂಬೆ ಆಟದವರು ಊರು ಪ್ರವೇಶಿಸಿದರೆ ಅವರನ್ನು ಕೇವಲ ಹೊಟ್ಟೆ ಹೊರೆಯಲು ಬಂದ ಭಿಕ್ಷುಕರಂತೆ ಕಾಣುತ್ತಿರಲಿಲ್ಲ. ಗೊಂಬೆಯಾಟದವರು ಊರಿಗೆ ಪ್ರವೇಶಿಸಿದರೆ ಅವರು ಒಲೆ ಹಚ್ಚುತ್ತಿರಲಿಲ್ಲ. ಜಾತಿ ಶ್ರೇಣೀಕರಣ ಇವರಿಗೆ ಅಡ್ಡಿ ಉಂಟುಮಾಡುತ್ತಿರಲಿಲ್ಲ. ಕೊಡುವ ಧನ-ಧಾನ್ಯಗಳನ್ನು ಮೀಸಲಿರಿಸಿ ಗೌರವದಿಂದ ಸಮರ್ಪಿಸುತ್ತಿದ್ದರು.  ತೊಗಲುಗೊಂಬೆಯಾಟಗಳು ಏರ್ಪಾಟಾಗುತ್ತಿದ್ದ ಸಂದರ್ಭಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಮಳೆ-ಬೆಳೆಗಾಗಿ, ಜನ ಜಾನುವಾರುಗಳ ಕ್ಷೇಮಕ್ಕಾಗಿ, ಊರಿನ ಉಲುಸಿಗಾಗಿ, ಸಂತಾನ ಪ್ರಾಪ್ತಿಗಾಗಿ, ಸ್ವರ್ಗ ಪ್ರಾಪ್ತಿಗಾಗಿ, ದೆವ್ವ ಪ್ರೇತಗಳ ಉಚ್ಛಾಟನೆಗಾಗಿ, ಹಬ್ಬ ಹರಿದಿನ, ಜಾತ್ರೆ-ಉತ್ಸವ ಮೊದಲಾದ ಧಾರ್ಮಿಕ ಆಚರಣೆಗಳ ಭಾಗವಾಗಿ ತೊಗಲುಗೊಂಬೆಯಾಟ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇಂಥ ಸಂದರ್ಭಗಳಲ್ಲೆಲ್ಲ ಈ ಕಲೆ ಶುದ್ಧ ದೈವ ಸ್ವರೂಪಿ ಕಾರ್ಯವಾಗಿತ್ತು. ಹಾಗಾಗಿಯೇ ಗೊಂಬೆಯಾಟದ ತಂಡಗಳನ್ನು ಕರೆಸಿ ಗೌರವದಿಂದ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಭಕ್ತಿ ಇರುವವರು ಗೊಂಬೆಗಳನ್ನು ಮಾಡಿಸಿ ಕೊಡುವ ಪರಿಪಾಟವೂ ಇತ್ತು. ವಿವಿಧ ಪುರಾಣ ಪಾತ್ರಗಳ ಗೊಂಬೆಗಳನ್ನು ಮಾಡಿಸಿಕೊಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇತ್ತು. ಇತಿಹಾಸದ ರಾಜಮನೆತನಗಳು ಈ ಗೊಂಬೆಯಾಟದ ಕಲಾವಿದರಿಗೆ ಮತ್ತು ಕಲೆಗೆ ರಾಜಾಶ್ರಯವನ್ನು ನೀಡಿರುವುದು ತಿಳಿದು ಬರುತ್ತದೆ. ಆದರೆ  ನಂತರದ ಬದಲಾದ ಕಾಲ ಮಾನದ ಕಾರಣದಿಂದ ಈ ಕಲೆಯು ದೈವೀ ಆಯಾಮವನ್ನು ಕಳೆದುಕೊಂಡು ಕೇವಲ ಮನರಂಜನೆ ಹಾಗೂ ನೀತಿ ಬೋಧನೆಯ  ಮಾದ್ಯಮವಾಗಿ ಬದಲಾಯಿತು. ಅದರ ಪರಿಣಾಮವಾಗಿ ವಿವಿಧ ಪುರಾಣಕಥೆಗಳ ಮೂಲಕ ಮನೋರಂಜನೆ ಹಾಗೂ ನೀತಿಬೋಧನೆಯನ್ನು ಮಾತ್ರ ಪ್ರಧಾನವಾಗಿಸಿಕೊಳ್ಳಲಾಯಿತು. 
ಕಥೆಗಳ ಮೂಲ
  ತೊಗಲುಗೊಂಬೆಯಾಟದ ಕಲೆಯ ಪ್ರದರ್ಶನಗಳಿಗೆ ಪ್ರಧಾನವಾಗಿ ರಾಮಾಯಣ, ಮಹಾ ಭಾರತ, ಭಾಗವತ ಮತ್ತಿತರ ಮೂಲಗಳಿಂದ ಕಥೆಗಳನ್ನು ಬಳಸಿಕೊಳ್ಳುತ್ತಾರೆ. ಆಧುನಿಕ ಸಂದರ್ಭಕ್ಕೆ ಅಗತ್ಯವಾಗಿರುವ ಜಾಗೃತಿ ಕಾರ್ಯಕ್ಕಾಗಿ ಈ ಕಲೆಯನ್ನು ಬಳಸಿಕೊಂಡಿದ್ದರ ಪರಿಣಾಮ ಆ ದೃಷ್ಟಿಯಿಂದ ಹಾಗೂ ಸ್ವತಃ ಕಲಾವಿದರ ಹೊಸಕಾಲಕ್ಕೆ ಅನುಗುಣವಾಗಿ ಕಲೆಯನ್ನು ಮರು ರೂಪಿಸುವ ಪ್ರಯತ್ನವಾಗಿ ಕೆಲವು ಸಾಮಾಜಿಕ ಹಾಗೂ ಐತಿಹಾಸಿಕ  ಕಥಾ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟಾರೆ ಈ ಕಲಾ ಪ್ರದರ್ಶನಗಳಿಗೆ ಬಳಕೆಯಾಗುವ ವಸ್ತುಗಳನ್ನು ಈ ಮುಂದಿನಂತೆ ಕಾಣಿಸಬಹುದು. 
ರಾಮಾಯಣ : ರಾವಣ ದಿಗ್ವಿಜಯ, ಕೌಸಲ್ಯ ಕಲ್ಯಾಣ, ಪಂಚವಟಿ, ಶತಕಂಠ ರಾವಣ, ಐರಾವಣ-ಮೈರಾವಣ, ವೈಕುಂಟ, ರಾಮಾಯಣ, ಲವ-ಕುಶ
ಮಹಾಭಾರತ :  ಭೀಮಸೇನ ಪ್ರತಿಜ್ಞೆ, ಪಾಂಡವ ವಿಲಾಸ, ವಿರಾಟ ಪರ್ವ, ಕೃಷ್ಣಾರ್ಜುನರ ಕಾಳಗ
ಭಾಗವತ :  ದೇವಿ ಮಹಾತ್ಮೆ, ಸಮುದ್ರ ಮಂಥನ, ಶಿವ ಜಲಂದರ, ತ್ರಿಪುರ ಸಂಹಾರ, ಕೃಷ್ಣ        ಪಾರಿಜಾತ
ಇತರೆ :  ರೇಣುಕಾ ಮಹಾತ್ಮೆ, ಸತ್ಯ ಹರಿಶ್ಚಂದ್ರ, ಭಕ್ತ ಮಾರ್ಕಂಡೇಯ
ಜನಪದ :  ಚಿತ್ರಕೇತು ಮಹಾರಾಜ, ಸಾರಂಗಧರ, ಸುವರ್ಣವತಿ ಪರಿಣಯ, ಪ್ರಭಾವತಿ, ಮಂಜುಘೋಷ, ಕರಿಭಂಟನ ಕಾಳಗ, ನಗಿಸಿದವರ ಕಥೆ ವಿಧಿವಿಲಾಸ
ಐತಿಹಾಸಿಕ : ಪ್ರವಾದಿ ಬಸವೇಶ್ವರ, ಬಾಪು ಕಥೆ, ಸ್ವತಂತ್ರ ಹೋರಾಟ, ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಮಹಾತ್ಮ ಕಬೀರ,ಸಿಪಾಯಿ ದಂಗೆ
ಸಾಮಾಜಿಕ : ತಾಯಿ ಎದೆ ಹಾಲು, ಕುಟುಂಬ ಯೋಜನೆ, ಜನ ಸಂಖ್ಯಾ ನಿಯಂತ್ರಣ, ಕಬ್ಬಿನ ಮಹಾತ್ಮೆ, ತಂಬಾಕಿನ ದುಷ್ಪರಿಣಾಮ, ಬ್ರೂಣ ಹತ್ಯೆ
ಈ ರೀತಿ ಅನೇಕ ವಸ್ತು ವಿಷಯಗಳನ್ನು ತಮ್ಮ ಆಟದೊಳಗೆ ಸೇರಿಸಿಕೊಂಡು ಸಮಾಜದ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವುದು ತೊಗಲು ಗೊಂಬೆಯಾಟದ ಮಹತ್ವವನ್ನು ಸಾರುತ್ತದೆ. ಈ ಪ್ರಸಂಗಗಳಲ್ಲಿ ಕೆಲವನ್ನು ಕೆಲವು ನಿರ್ದಿಷ್ಟ ಉದ್ದೇಶಕ್ಕೆ ಅನುಗುಣವಾಗಿ ಪ್ರದರ್ಶಿಸಲಾಗುತ್ತದೆ. ಉದಾ : ಲವ-ಕುಶ ಪ್ರಸಂಗ ಸಂತಾನ ಪ್ರಾಪ್ತಿಗೆ, ರಾಮಾಯಣದ ಸ್ವರ್ಗಾರೋಹಣ ಪ್ರಸಂಗ ಅಪರಕರ್ಮದ ಕೊನೆದಿನ ಸ್ವರ್ಗ ಪ್ರಾಪ್ತಿಗೆ, ಮಳೆಗಾಗಿ ವಿರಾಟಪರ್ವ, ಊರಿಗೆ ಉತ್ತಮ ಉಲುಸಾಗಲೆಂದು ದೇವಿ ಮಹಾತ್ಮೆ ಇತ್ಯಾದಿ
ಪ್ರಾಚೀನತೆ- ಪ್ರದೇಶ  
ತೊಗಲುಗೊಂಬೆಯಾಟದ ಮೂಲ ಚೀನ ಎಂದು ಕೆಲವರು, ಭಾರತ ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಬಹಳಷ್ಟು ಜನ ವಿದ್ವಾಂಸರು ಊಹಿಸಿರುವಂತೆ ಭಾರತವೇ ಈ ಕಲೆಯ ಮೂಲ ನೆಲ. ಇಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿರಬಹುದು. ಈ ಕಲೆ ಭಾರತದಲ್ಲಿ ಪುರಾಣ ಕಾಲಕ್ಕಿಂತ ಪೂರ್ವದಲ್ಲೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಅನೇಕ ಪರಾವೆಗಳಿವೆ. ಇದರ ಪ್ರಾಚೀನತೆಯನ್ನು ಕ್ರಿ.ಪೂ.೩೦೦೦ ವರ್ಷಗಳಷ್ಟು ಹಿಂದಿನ ಭಗವದ್ಗೀತೆಯ ಕಾಲಕ್ಕೆ ಗುರುತಿಸಲಾಗಿದೆ. ಜರ್ಮನಿಯ ವಿದ್ವಾಂಸರು ಹೇಳುವಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತೊಗಲುಗೊಂಬೆ ಆಟ ಶಬ್ದದ ಉಲ್ಲೇಖವಿದೆ. ಮಹಾಭಾರತ ಗ್ರಂಥದಲ್ಲೂ ಇದರ ಪ್ರಸ್ತಾಪವಿದೆ. ಈ ಆಟವನ್ನು ಕಿಳ್ಯೇಕ್ಯಾತರು ಸಮುದಾಯ ತಮ್ಮ ಪಾರಂಪರಿಕ ಕಲೆಯಾಗಿಸಿಕೊಂಡಿದ್ದು, ಈ ಕಿಳ್ಳೇಕ್ಯಾತರ ಮೂಲ ಪುರುಷ ಪಾಂಡವರ ಜೊತೆ ವನವಾಸ ಮಾಡಿದನೆಂಬುದು ನಂಬಿಕೆ. ಮೂಲತಃ ತಮಿಳುನಾಡಿನ ಮೂಲದ ಈ ಕಲೆ ಕರ್ನಾಟಕಕ್ಕೆ ಸಮುದಾಯಗಳ ಮೂಲಕ ವಲಸೆ ಬಂದಿದೆ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡದ ಧನಪಾಲನ ತಿಲಕಮಂಜರಿ, ವಿದ್ಯಾರಣ್ಯರ ಪಂಚಾದಶಿ, ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ, ಭೀಮ ಕವಿಯ ಬಸವ ಪುರಾಣ, ನೇಮಿಚಂದ್ರನ ನೇಮಿನಾಥ ಪುರಾಣ ಗಳಲ್ಲಿ ತೊಗಲುಗೊಂಬೆಯಾಟದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಕನ್ನಡದ ವಚನಯುಗದಲ್ಲಿ ಅನೇಕ ವಚನಕಾರರು ಈ ಕಲೆಯ ಬಗ್ಗೆ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಲಕೇತ ಬೊಮ್ಮಯ್ಯ ಎಂಬ ವಚನಕಾರನಿದ್ದು ಅವನು ತೊಗಲುಗೊಂಬೆಯಾಟದ ಶಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದವನಾಗಿರಬಹುದೆಂದು ಊಹಿಸಲಾಗಿದೆ. 
ಭಾರತದ ಮಹಾರಾಷ್ಟ್ರ, ಓರಿಸ್ಸಾ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮೊದಲಾದ ರಾಜ್ಯಗಳಲ್ಲಿ, ಕರ್ನಾಟಕದ ಧಾರವಾಡ(ಕಿಳ್ಳೇಕ್ಯಾತರ ಆಟ), ಕೋಲಾರ,ಬಳ್ಳಾರಿ, ರಾಯಚೂರು ಬೀದರ್ (ತೋಲುಬೊಮ್ಮಲಾಟ), ಗುಲ್ಬರ್ಗಾ(ಕಟಬರಾಟ), ಬೆಳಗಾವಿ-ಕಾರವಾರ( ಚಿತ್ರಮರಾಟಿಗರು,ಕಥಾನಾಯಕರಾಟ), ಹಳೆ ಮೈಸೂರು ಭಾಗ (ಗೊಂಬೆರಾಮರಾಟ)ದ ಜಿಲ್ಲೆಗಳಲ್ಲಿ ಈ ಕಲೆ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಈ ಕಲೆಯನ್ನು ಉತ್ತುಂಗಕ್ಕೇರಿಸಿದ ಅನೇಕ ಕಲಾವಿದರಿದ್ದು ಅವರಲ್ಲಿ ಕೆಲವರನ್ನು ಹೆಸರಿಸುವುದಾದರೆ ಕರ್ನಾಟಕದ ಪ್ರಮುಖ ಕಲಾವಿದರು : ಹೊಂಬಯ್ಯ, ಗುಡ್ಡಪ್ಪ ಶಟವಾಜಿ, ಎಡ್ರಮ್ಮನಹಳ್ಳಿ ಭರಮಪ್ಪ, ಶಿಂದೆ ರಾಮಮೂರ್ತಿ, ಮೊರನಾಳದ ಭೀಮವ್ವ, ದೊಡ್ಡಬಾಳಪ್ಪ, ಬೆಳಗಲ್ಲು ವೀರಣ್ಣ, ಹನುಮಂತಯ್ಯ, ಹೊಂಬಯ್ಯ, ಅಪ್ಪಾಜಿ, ಬಡೇಲಡುಕಿನ ಕೆ. ತಿಪ್ಪೇಸ್ವಾಮಿ ಮೊದಲಾದವರು. ಇನ್ನೂ ಜಗತ್ತಿನ ಚೀನಾ, ಟರ್ಕಿ, ಗ್ರೀಸ್, ಥೈಲ್ಯಾಂಡ್, ಮಲೇಷಿಯ, ಇಂಡೋನೇಷಿಯಾ, ಪರ್ಷಿಯಾ, ಇಟಲಿ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತೊಗಲು ಗೊಂಬೆಯಾಟ ಪ್ರಚಲಿತದಲ್ಲಿರುವುದನ್ನು ಕಾಣಬಹುದು. ವಿದೇಶಗಳಲ್ಲಿ  ತೊಗಲುಗೊಂಬೆಯಾಟಕ್ಕೆ ಅನೇಕ ವೃತ್ತಿಪರ ಸಂಸ್ಥೆಗಳು ತೊಡಗಿಸಿಕೊಂಡಿವೆ.
ತೊಗಲು ಗೊಂಬೆಯಾಟದ ಇಂದಿನ ಸ್ಥಿತಿಗತಿ
ಎಲ್ಲಾ ಕಲೆಗಳಿಗೆ ಆಧುನಿಕತೆ ತಂದೊಡ್ಡಿದ ಸವಾಲು ಹಾಗೂ ಸಂಕಟಗಳನ್ನು ಈ ಕಲೆಗೂ ತಂದಿದೆ. ಒಂದು ಕಾಲಕ್ಕೆ ಅಪಾರ ಸಂಖೆಯ ಕಲಾವಿದರು ಮತ್ತು ಕಲಾ ತಂಡಗಳು ಇದದ್ದು ಈಗ ಕೇವಲ ನೂರರ ಒಳಗಿದೆ. ಒಂದು ಸಮೀಕ್ಷೆಯ ಪ್ರಕಾರ ೧೯೮೮ ರಲ್ಲಿ ೧೬೭ ತೊಗಲು ಗೊಂಬೆಯಾಟದ ತಂಡಗಳಿದ್ದು ಅವುಗಳ ಸಂಖ್ಯೆ ಈಗ ಕ್ಷೀಣಿಸಿ ಬೆರಳೆಣಿಕೆಯಷ್ಟಾಗಿವೆ. ಈ ಕಲೆಯಲ್ಲಿ ಅದ್ಭುತ ಸಾಧಕರೆನಿಸಿದ ಬೆಳಗಲ್ಲು ವಿರಣ್ಣ ಅವರ ಪ್ರಕಾರ ಕರ್ನಾಟಕದಲ್ಲಿ ಒಂದು ಕಾಲಕ್ಕೆ ೧೮೦ ಜನ ತೊಗಲುಗೊಂಬೆ ಕಲಾವಿದರಿದ್ದರು ಆದರೆ ಈಗ ೧೦೦ಕ್ಕೆ ಇಳಿದಿದೆ.  ಆಧುನಿಕತೆಯ ವಿದುನ್ಮಾನ ಮಾಧ್ಯಮಗಳು ಮನರಂಜನೆಯ ಅನಂತ ಸಾಧ್ಯತೆಗಳನ್ನು ಸೃಷ್ಟಸಿರುವ ಹಿನ್ನೆಲೆಯಿಂದಾಗಿ ಈ ಆಟವನ್ನು ನೋಡುವ ಪ್ರೇಕ್ಷಕರ ಸಂಖ್ಯೆಯೂ ಕ್ಷೀಣಿಸಿದೆ. ಆಡಿಸುವ ಪ್ರಾಯೋಜಕರು ಇಲ್ಲವಾಗಿದ್ದಾರೆ. ಸರ್ಕಾರದ ಪ್ರೋತ್ಸಾಹವೂ ಅಷ್ಟಕ್ಕಷ್ಟೆ. ಈ ಎಲ್ಲಾ ಕಾರಣದಿಂದಾಗಿ ಈ ಕಲೆಯನ್ನು ನಂಬಿ ಬದುಕುವ ಕುಟುಂಬಗಳು ವೆಚ್ಚದಾಯಕವಾದ ಈ ಕಲೆಯನ್ನು ಮುಂದುವರೆಸಲು ಸಾಧ್ಯವಾಗದೆ ಬೇರೆ ವೃತ್ತಿಗಳನ್ನು ಹರಿಸಿ ಈ ಕಲೆಯಿಂದ ದೂರವಾಗಿವೆ. ಒಟ್ಟಾರೆ ಕಲೆಗಳನ್ನು ನೋಡಿ ಆಸ್ವಾದಿಸುವ ಜನ ಮತ್ತು ವಾತಾವರಣವಿಲ್ಲ.  ಕಲೆಯನ್ನು ಮುಂದುವರೆಸುವ ಕಲಾವಿದರಿಲ್ಲ.  ಕಲೆಗೆ ಬೇಕಾದ ಅಗತ್ಯ ಸಾಮಾಗ್ರಿ ಮತ್ತು ಕುಶಲತೆಯಿಲ್ಲ. ಆಧುನಿಕ ಸಂದರ್ಭಕ್ಕೆ ಅನುಗುಣವಾಗಿ ಇರುವ ಕಲೆಗೆ ಮರು ರೂಪಣೆಮಾಡುವ ಮನಸ್ಸು ಮತ್ತು ಕಾರ್ಯಗಳಿಲ್ಲ. ಈ ಕಲೆಗೆ ಬೇಕಾದ ಹಣ ಮತ್ತು ಜನ ಬೆಂಬಲ ಇಲ್ಲವಾಗಿದೆ. ಈ ಎಲ್ಲಾ ಕಾರಣಗಳಿಂದ ಪಾರಂಪರಿಕ ತೊಗಲು ಗೊಂಬೆಯಾಟ ನಾಶದ ಅಂಚಿಗೆ ತಲುಪಿದೆ.
ತೊಗಲು ಗೊಂಬೆಯಾಟ ಮತ್ತು ಪಾರಂಪರಿಕ ಜ್ಞಾನಗಳು
ತೊಗಲುಗೊಂಬೆಯಾಟದ ಕಲೆಯನ್ನು ಕೇವಲ ಕಲೆಯಾಗಿ ನೋಡುವಂತಿಲ್ಲ. ಅದರ ಹಿನ್ನೆಲೆಗೆ ಅಪಾರವಾದ ಜ್ಞಾನ ಸಂಪತ್ತಿದೆ. ಈ ದೃಷ್ಟಿಯಿಂದ ಗಮನಿಸಬೇಕಾದ ಸಂಗತಿಗಳೆಂದರೆ :
೧. ಗೊಂಬೆಗಳ ನಿರ್ಮಾಣ
೨. ಗೊಂಬೆಗಳ ಸಂರಕ್ಷಣೆ
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
೪. ಚಿತ್ರಕಲೆ
೫. ಬಣ್ಣ ತಯಾರಿಕೆ

೧. ಗೊಂಬೆಗಳ ನಿರ್ಮಾಣ 
 ಕಲಾವಿದರು ತೊಗಲುಗೊಂಬೆಯಾಟವನ್ನು ಪ್ರದರ್ಶಿಸಲು ಬೇಕಾಗುವ ಗೊಂಬೆ ತಯಾರಿಕೆಗೆ ಬೇರೆ ಯಾರನ್ನೂ ಆಶ್ರಯಿಸದೆ ತಾವೇ ಅಗತ್ಯವಿರುವ ಗೊಂಬೆಗಳನ್ನು ತಯಾರಿಸಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಚರ್ಮವನ್ನು ಹದಮಾಡಿ ಅದಕ್ಕೆ ಒಂದು ರೂಪು ಕೊಡುವುದು ಸಾಮಾನ್ಯ ಕಾರ್ಯವಲ್ಲ. ಎಲ್ಲರಿಗೂ ಬರುವಂತಹದ್ದಲ್ಲ. ಅದನ್ನು ತಮ್ಮ ಅಪಾರ ಶ್ರಮ ಹಾಗೂ ಪ್ರಯತ್ನಗಳಿಂದ ಕಲಿಯಬೇಕಾಗುತ್ತದೆ. ಇದನ್ನು ಕಲಾವಿದರು ದೀರ್ಘಕಾಲದ ಪ್ರಯತ್ನದಿಂದಾಗಿ ಕಲಿಯುತ್ತಾರೆ. ಈ ಗೊಂಬೆತಯಾರಿಸುವ ಕುಶಲತೆ ಇದ್ದವರು ಕಲಾ ಪ್ರದರ್ಶನಗಳು ಕಡಿಮೆಯಾದರೂ ಚಿಂತಿಸಬೇಕಾಗಿಲ್ಲ ಇತ್ತೀಚೆಗೆ ಈ ರೀತಿಯ ಗೊಂಬೆಗಳಿಗೆ ಮಾರುಕಟ್ಟೆಯಲ್ಲಿ (ವಿಶೇಷವಾಗಿ ವಿದೇಶಿಯರಿಂದ) ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಈ ಗೊಂಬೆ ತಯಾರಿಸುವ ಕಲೆಯನ್ನು ಉಪ ಜೀವನಕ್ಕೆ ಆದಾರವಾಗಿಸಿಕೊಳ್ಳಲು ಸಾಧ್ಯವಿದೆ. ಇದು ಕಲೆಯ ಜೊತೆ ನಶಿಸಿದರೆ ಅಷ್ಟರ ಮಟ್ಟಿಗೆ ನಮ್ಮ ಪಾರಂಪರಿಕ ಜ್ಞಾನವನ್ನು ಕಳೆದುಕೊಂಡಂತೆ
೨. ಗೊಂಬೆಗಳ ಸಂರಕ್ಷಣೆ 
ಕಲಾವಿದರು ತಾವು ತಯಾರಿಸಿದ ಗೊಂಬೆಗಳನ್ನು ಬಹು ದಿನಗಳವರೆಗೆ ಸುರಕ್ಷಿತವಾಗಿ ಇಡಬೇಕಾಗುತ್ತದೆ. ಅದಕ್ಕಾಗಿ ಬಿದಿರಿನ ಪಟ್ಟಿಗೆಗಳ ತಯಾರಿ ಮತ್ತು ವಿವಿಧ ಗಿಡಮೂಲಿಕೆಗಳನ್ನು ಗೊಂಬೆಗಳಿಗೆ ಬಳಿಯುವುದು ಕಲಾವಿದರಿಗೆ ಪರಂಪರೆಯ ಅನುಭವದಿಂದ ಲಭ್ಯವಾದ ಜ್ಞಾನ. ಹಾಗಾಗಿ ಇಂಥ ಜ್ಞಾನವನ್ನು ಉಳಿಸಿಕೊಳ್ಳಲು ಅನೇಕ ಅವಕಾಶಗಳಿವೆ. ಈ ಬಗ್ಗೆ ಗಂಭೀರವಾದ ಅಧ್ಯಯನಮಾಡಿ ಸಂರಕ್ಷಣಾ ಪುಟ್ಟಿ ತಯಾರಿಸುವ ಕೌಶಲ, ಗೊಂಬೆಗಳು ಹಾಳಾಗದಂತೆ ಸಂರಕ್ಷಿಸುವ ಆ ಗಿಮೂಲಿಕೆಗಳು ಯಾವುವು ಅವುಗಳನ್ನು ಬಳಸುವ ಕ್ರಮಗಳ ಬಗ್ಗೆ ತಿಳಿದು ಸಮಕಾಲೀನ ಸಮಾಜದ ವಿವಿಧ ಅಗತ್ಯಗಳಿಗೆ ಬಳಸಿಕೊಳ್ಳುವ ಅವಕಾಶವಿದೆ.
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
ತೊಗಲುಗೊಂಬೆಯಾಟದ ಪ್ರದರ್ಶನದಲ್ಲಿ ಸಂಗೀತದ ಪಾತ್ರ ಹಿರಿದು. ಇದಕ್ಕೆ ಬೇಕಾಗುವ ವಾದ್ಯಪರಿಕರಗಳು ಹಲವಾರು. ಮೃದಂಗ, ಮುಖವೀಣೆ, ಡೋಲು, ಪುಂಗಿ,ತಾಳ, ಪಾವರೆ,ಹಾರ್ಮೋನಿಯಂ, ಕೊಳಲು ವಾದ್ಯಗಳನ್ನು ಬಳಸುತ್ತಾರೆ. ಈ ವಾದ್ಯಗಳನ್ನು ತಾವೇ ತಯಾರಿಸಿಕೊಳ್ಳುವುದು ಸಾಮಾನ್ಯ. ಹಾಗೂ ಅವುಗಳನ್ನು ಸಮರ್ಥವಾಗಿ ನುಡಿಸುವ ಕಲೆಯೂ ಕೂಡ ಕಲಾವಿದರಿಗೆ ಕರಗತ. ಇಲ್ಲಿ ಬಳಸುವ ಸಂಗೀತ ವಾದ್ಯಗಳು ಈ ಕಲೆಯ ಹೊರತಾಗಿಯೂ ಬಳಸ ಬಹುದಾದವು. ಹಾಗಾಗಿ ಇವುಗಳ ತಯಾರಿಕೆ ಮತ್ತು ಬಳಕೆಯ ಕೌಶಲಗಳನ್ನು ಸಮರ್ಥವಾಗಿ ಉಳಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ವಾದ್ಯಗಳಲ್ಲಿ ಪಾವರೆ ವಾದ್ಯ ವಿಶಿಷ್ಟ. ಈ ವಾದ್ಯವನ್ನು  ಕಂಚಿನ ಗಂಗಾಳದಿಂದ ಸಿದ್ದಗೊಳಿಸುತ್ತಾರೆ. ಗಂಗಾಳವನ್ನು ನೆಲದ ಮೇಲೆ ಬೋರಲು ಹಾಕಿ ಅದರ ಮೇಲೆ ಮಧ್ಯಭಾಗದಲ್ಲಿ ಮೇಣ ಮೆತ್ತಿ ಹಂಚಿ ಕಡ್ಡಿಯನ್ನು ಅದರಲ್ಲಿ ನೆಟ್ಟು ಎರಡೂ ಕೈಗಳಿಂದ ಉಜ್ಜಿದಾಗ ನಾದ ಹೊರಡುತ್ತದೆ. ಇಂಥ ವಾದ್ಯಗಳನ್ನು ಮುಂದುವರೆಸುವುದು ಪರಂಪರೆಯನ್ನು ಉಳಿಸುವ ಸಮರ್ಥವಾದ ಕಾರ್ಯವೆನಿಸುತ್ತದೆ. 
೪. ಚಿತ್ರಕಲೆ
ತೊಗಲು ಗೊಂಬೆಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಚಿತ್ರಕಲೆ ಬಹು ಪ್ರಧಾನವಾದ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಚರ್ಮದ ಮೇಲೆ ರೇಖಾ ವಿನ್ಯಾಸ ಮಾಡುವುದು; ರೇಖಾ ವಿನ್ಯಾಸಕ್ಕನುಗುಣವಾಗಿ ಚರ್ಮವನ್ನು ಕತ್ತರಿಸುವುದು; ಬಣ್ಣ ತುಂಬುವುದು ಇತ್ಯಾದಿ ಕಾರ್ಯಗಳು ನಡೆಯುತ್ತವೆ. ಚರ್ಮವನ್ನು ತಮಗೆ ಬೇಕಾದ ಪಾತ್ರದ ಆಕಾರಕ್ಕೆ ಕತ್ತರಿಸಿಕೊಳ್ಳುವುದು ಮತ್ತು ಅದಕ್ಕೆ ಸರಿಯಾದ ಬಣ್ಣದ ಸಂಯೋಜನೆ ಮಾಡುವುದು ಬಹಳ ಮುಖ್ಯ. ಇಲ್ಲಿ ಕಲಾವಿದರ ಚಿತ್ರಕಲಾ ಕೌಶಲ್ಯ ಕಾಣುತ್ತದೆ. ಈ ಚಿತ್ರಕಲೆ ಕಲಾವಿದರ ಪಾರಂಪರಿಕ ಜ್ಞಾನದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಕಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡು ಸಾಗಿ ಬಂದಿದೆ. ಇಂಥ ಜ್ಞಾನವನ್ನು ಕಲೆಯ ಜೊತೆ ಕಳೆದುಕೊಳ್ಳುವುದೆಂದರೆ ನಮಗೆ ಆಗುವ ನಷ್ಟ ಎಂತಹದ್ದು ಎಂಬುದನ್ನು ಚಿಂತಿಸಿದರೆ ಗಾಬರಿ ಹುಟ್ಟಿಸುತ್ತದೆ. 
೫. ಬಣ್ಣ ತಯಾರಿಕೆ
 ಗೊಂಬೆಗೆ ಲೇಪಿಸು ಬಣ್ಣವನ್ನು ಸ್ವತಃ ಕಲಾವಿದರೇ ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿಕೊಳ್ಳುವುದು ವಿಶೇಷ. ಈ ಕಲೆಯಲ್ಲಿ ಮುಖ್ಯವಾಗಿ ಬಳಸಲ್ಪಡುವ ಬಣ್ಣಗಳೆಂದರೆ ಕೆಂಪು, ಕಪ್ಪು, ಹಳದಿ, ನೀಲಿ, ಸಿಂಧೂರ, ಪಚ್ಚೆ ನೀಲಿ ಇತ್ಯಾದಿ. ಇಷ್ಟೊಂದು ಬಣ್ಣಗಳನ್ನು ತಯಾರಿಸಲು ಕಲಿತ ಇವರ ಜ್ಞಾನ ಎಷ್ಟೊಂದು ಕುತೂಹಲಕಾರಿ? ಈ ರೀತಿ ಪಾರಂಪರಿಕ ಮಾರ್ಗದಲ್ಲಿ ತಯಾರಿಸಿದ ಬಣ್ಣಗಳ ಹೊಳಪು ಮತ್ತು ದೀರ್ಘಕಾಲ ತಾಜಾತನವನ್ನು ಕಾಪಿಡುತ್ತವೆ. ಇತ್ತೀಚಿನ ದಿನಗಳಲ್ಲಿ ಹೊಸಕಾಲದ ರಸಾಯನಿಕಗಳನ್ನು ಬಳಸಿದ ಬಣ್ಣಗಳನ್ನು ಬಳಸಿದ ಕಲಾವಿದರಿಗೆ ಅದರ ಪರಿಣಾಮಗಳು ತಿಳಿದವೆ. ಹೊಳಪು ದೀರ್ಘಕಾಲ ಬಾಳಿಕೆ ಬೇಕೆಂದರೆ ಸಾಂಪ್ರದಾಯಿಕ ರೀತಿಯಲ್ಲಿಯೆ ಬಣ್ಣ ತಯಾರಿಕೊಳ್ಳಬೇಕೆಂಬುದು ಸ್ವತಃ ಕಲಾವಿದರ ಅನಿಸಿಕೆ. ಇಲ್ಲಿ ಬಳಸುವ ಪ್ರತಿಯೊಂದು ಬಣ್ಣವನ್ನು ತಯಾರಿಸಲು ಬಳಸಬೇಕಾದ ವಸ್ತುಗಳು ಯಾವುವು ಮತ್ತು ಅದನ್ನು ತಯಾರಿಸು ವಿಧಾನ ಯಾವುದು ಎಂಬುದು ಕಲಾವಿದರೆಲ್ಲರಿಗೂ ಗೊತ್ತಿರುವ ಸತ್ಯವೆ. ಅದರ ಕೆಲವು ಮಾದರಿಗಳನ್ನು ಗಮನಿಸುವುದಾದರೆ : 
೧. ಕಪ್ಪು ಬಣ್ಣ ಬೇಕೆಂದರೆ ದೀಪದ ಕಾಡಿಗೆ ಅಥವ ತೆಂಗಿನ ಕಾಯಿಯ ಚಿಪ್ಪನ್ನು ಸುಟ್ಟು ಕರಕು ಮಾಡಿಕೊಳ್ಳಬೇಕು. ಇದನ್ನು ಪುಡಿಮಾಡಿ ನೀರಿನಲ್ಲಿ ಬೆರಸಿ ಅದಕ್ಕೆ ಜಾಲಿಯ ಅಂಟನ್ನು ಬೆರಸ ಬೇಕು. ಅನಂತರ ಅದನ್ನು ಚನ್ನಾಗಿ ಕದಡಿ ಆರುದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಬಿಳಿಬಟ್ಟೆಯಲ್ಲಿ ಸೋಸಬೇಕು. ಹೀಗೆ ತಯಾರಾದ ಕಪ್ಪು ಬಣ್ಣ ವರ್ಷಗಟ್ಟಲೆ ಕೆಡುವುದಿಲ್ಲ.
೨. ಸಿಂಧೂರ ಬಣ್ಣ ಬೇಕೆಂದಾಗ ಮದರಂಗಿ ಮತ್ತು ಸುಣ್ಣವನ್ನು ಬೆರಸಿ ಅದಕ್ಕೆ ಬೇವಿನ ಅಂಟನ್ನು ಸೇರಿಸಿ ಕೆಲವು ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಉಪಯೋಗಿಸುತ್ತಾರೆ
ಹೀಗೆ ತಮಗೆ ಬೇಕಾದ ಎಲ್ಲಾ ತರಹದ ಬಣ್ಣಗಳನ್ನು ತಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಬಗೆಬಗೆಯ ಎಲೆ, ಹೂವು, ಅಂಟುಗಳ ಸಹಾಯದಿಂದ ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಗುಣಮಟ್ಟದಲ್ಲಿ ತಯಾರಿಸಿಕೊಳ್ಳುತ್ತಾರೆ. ಆಧುನಿಕ ಕಾಲದ ಬಣ್ಣಗಳಿಗಿಂತ ಹೆಚ್ಚು ಹೊಳಪು ಮತ್ತು ಬಾಳಿಕೆ ಇರುವ ಬಣ್ಣಗಳನ್ನು ತಯಾರಿಸು ಜ್ಞಾನ ನಮ್ಮಲ್ಲಿರುವಾಗ ಹೆಚ್ಚು ಖರ್ಚಿನ ದೀರ್ಘಕಾಲ ಬಾಳಿಕೆ ಬರದ ಬಣ್ಣಗಳನ್ನು ಯಾಕೆ ಉಪಯೋಗಿಸಬೇಕು ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. 
ನಮ್ಮ ಮುಂದಿರುವ ಸಾಧ್ಯತೆಗಳು
ತೊಗಲುಗೊಂಬೆಯಾಟ ವಿನಾಶದ ಕಡೆಗೆ ಸಾಗಿರುವಾಗ ಅದನ್ನು ಉಳಿಸಬೇಕಾದ ಬಗೆಗಳ ಬಗ್ಗೆ ಚಿಂತಿಸಬೇಕಾದುದು ಇಂದಿನ ತುರ್ತು. ಈ ಬಗ್ಗೆ ಅನೇಕ ವಿದ್ವಾಂಸರು ಬಹಳ ಗಂಭೀರವಾದ ಆಲೋಚನೆಗಳನ್ನು ನಡೆಸಿದ್ದಾರೆ. ಈ ಕುರಿತು ೧೯೮೯ ಫೆಬ್ರವರಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗ ನಡೆಸಿದ ೧೬ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ’ತೊಗಲುಗೊಂಬೆಯಾಟದ ಮೇಲೆ ಆಧುನಿಕತೆಯ ಪರಿಣಾಮ ಮತ್ತು ನವೀಕರಣದ ಸಾಧ್ಯತೆಗಳು’ ಎನ್ನುವ ವಿಷಯ ಕುರಿತು ಮಾತನಾಡುತ್ತಾ ಹಿ.ಚಿ. ಬೋರಲಿಂಗಯ್ಯ ಅವರು ಹೀಗೆ ಹೇಳಿದ್ದಾರೆ :
ಯಾವುದೇ ಕಲೆಗೆ ಹೆಚ್ಚು ಬೆಲೆಸಾಗಬೇಕಾದರೆ ಮತ್ತು ವ್ಯವಸ್ಥಿತವಾಗಿ ನಿಲ್ಲಬೇಕಾದರೆ ವಿದ್ಯಾವಂತರು ಅದರಲ್ಲಿ ಪ್ರವೇಶ ಮಾಡುವುದು ಅನಿವಾರ್ಯ. ಅಂದರೆ ವಿದ್ಯಾವಂತ ಇಲ್ಲಿ “ಕೋರಿಯಾಗ್ರಾಫರ್” ಆಗಿ ಕೆಲಸ ಮಾಡುವುದಷ್ಟೇ ಅಲ್ಲದೆ ಅವರ ಜೀವನ ವಿಧಾನಗಳನ್ನು ಅರ್ಥಮಾಡಿಕೊಳ್ಳುವವನಾಗಬೇಕು. ಆದ್ದರಿಂದ ಈ ವಿದ್ಯಾವಂತರು ಹಳ್ಳಿಗಳಲ್ಲಿ ಬೆಳೆದು ಕಲೆಯ ಬಗ್ಗೆ ನಿಜವಾದ ಅಭಿಮಾನ ಇರುವವರಾಗಬೇಕು. ಕಲೆಯ ಪರಂಪರೆಯ ಹಿನ್ನೆಲೆಯ ಸುಧಾರಣೆ ಹೇಗೆ ಮಾಡಬೇಕೆಂಬ ಪರಿಜ್ಞಾನವುಳ್ಳವರಾಗಿರಬೇಕು. ಕರಾವಳಿಯ ಯಕ್ಷಗಾನ ಪ್ರವೇಶದ ನಂತರ ನವೀಕರಣಗೊಂಡ ರೀತಿ ನಮ್ಮೆಲ್ಲರಿಗೂ ಗೊತ್ತೇ ಇದೆ. ಈ ಕ್ಷೇತ್ರಕ್ಕೆ ವಿದ್ಯಾವಂತರು ಪ್ರವೇಶ ಮಾಡುವುದರಿಂದ ಎರಡು ಲಾಭಗಳಿವೆ. ಒಂದು ಕೆಲವು ಅಂಧ ಸಂಪ್ರದಾಯಗಳು ಮತ್ತು ಶೋಷಣಾ ಮೂಲವಾದ ಆಚರಣೆಗಳಿಂದ ಕಲಾವಿದರನ್ನು ಅಥವಾ ಒಟ್ಟಾರೆ ಜನಪದರನ್ನು ವಿಮುಕ್ತಿಗೊಳಿಸುವುದು, ಎರಡು ಹಿಂದೆಯೇ ಹೇಳಿದಂತೆ ಕಲೆಯ ಸುಧಾರಣೆ ಮಾಡುವುದು. ಈ ಮಾತಿಗೆ ಅನೇಕ ವಿರೋಧಗಳು ಬರಬಹುದು ಆದರೆ ಇಂದಿನ ವಿಜ್ಞಾನ ಯುಗದಲ್ಲಿಯೂ ಧರ್ಮ. ದೇವರು ಮತ್ತು ಆಚರಣೆಗಳ ಹಿನ್ನೆಲೆಯಲ್ಲಿಯೇ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಪ್ರಗತಿ ವಿರೋಧಿ ಧೋರಣೆಯೇ ಆಗುತ್ತದೆ. ಅಜ್ಞಾನ ಮತ್ತು ಬಡತನದಿಂದ ನರಳುತ್ತಿರುವ ಭಾರತದಂತ ದೇಶದಲ್ಲಿ ಶೋಷಣಾರಹಿತವಾದ ಸಮಾಜವೊಂದರ ನಿರ್ಮಾಣವಾಗಬೇಕು ಮತ್ತು ಈ ದೇಶದ ಜನರ ಸಂಸ್ಕೃತಿಯ ಪ್ರಮುಖ ಅಂಗಗಳಾದ ಜಾನಪದ ಕಲೆ ಮತ್ತು ಸಾಹಿತ್ಯ ಸಂಗೀತಗಳು ಉಳಿಯಬೇಕು. ಇದು ದೃಂದದಲ್ಲಿರುವ ಮನಸ್ಸೊಂದರ ಆಲೋಚನೆ ಅನ್ನಿಸಿದರೂ ಈ ಎರಡೂ ಆಗಬೇಕಾದುದು ಅಗತ್ಯ. ಇದರ ಜೊತೆಗೆ ಇನೆರಡು ಅಂಶಗಳನ್ನು ಅವರು ಪ್ರಸ್ತಾಪಿಸುತ್ತಾರೆ. ಅವುಗಳೆಂದರೆ- ಸಂಘ -ಸಂಸ್ಥೆಗಳು ಜಾನಪದಕ್ಕಾಗಿಯೇ ಹುಟ್ಟಿಕೊಳ್ಳಬೇಕಾದ ಅನಿವಾರ್ಯತೆ. ಸರ್ಕಾರ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬಬೇಕಾದ ರೀತಿ.
ಪಾಶ್ಚಾತ್ಯ ದೇಶಗಳಂತೆ ಶುದ್ದ ಮನೋರಂಜನೆ ಕಲೆಯಾಗಿಸಿ ವಾಣಿಜ್ಯೀಕರಣಗೊಳಿಸಬೇಕೆ?
ಹೌದು ಈ ಕಲೆಯಯನ್ನು ಮಾತ್ರವಲ್ಲ ಯಾವುದೇ ಕಲೆ ಇಂದಿನ ಸಮಾಜದಲ್ಲಿ ಉಳಿಯಬೇಕಾದರೆ ಅದು ವಾಣಿಜ್ಯೀಕರಣಗೊಳ್ಳಲೇ ಬೇಕು. ಇಲ್ಲವಾದರೆ ಅದಕ್ಕೆ ಉಳಿಗಾಲವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಈ ಕಲೆಯನ್ನು ವಿದೇಶಗಳು ಸ್ವೀಕರಿಸಿ ತಮ್ಮ ಪರಿಸರ ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಹೊಂದಿಸಿಕೊಂಡು ಶುದ್ದಾಂಗವಾಗಿ ವಾಣಿಜ್ಯೀಕರಣಗೊಳಿಸಿದೆ. ಹಾಗಾಗಿ ಅಲ್ಲಿ ಗೊಂಬೆಯಾಟಕ್ಕಾಗಿ ಹಲವಾರು ವೃತ್ತಿಪರ ಸಂಸ್ಥೆಗಳು ಹುಟ್ಟಿಕೊಂಡಿದ್ದು ಸಾಕಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದು ಬರುತ್ತದೆ. ಈ ಮಾದರಿಯನ್ನು ನಾವು ಸಂಪೂರ್ಣ ಅನುಕರಿಸಬೇಕೆಂದು ಹೇಳಿದರೆ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ. ಏಕೆಂದರೆ ನಮ್ಮ ನೆಲೆದಲ್ಲಿ ಈ ಕಲೆ ಕೇವಲ ಮನೋರಂಜನೆಗೆ ಮೀಸಲಾದ ಕಲೆಯಲ್ಲ. ಬದಲಿಗೆ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ರವಾನಿಸುವ, ಪ್ರೇಕ್ಷಕರಿಗೆ ಸಾಮಾಜಿಕ ಜಾಗೃತಿಯನ್ನು ಉಂಟುಮಾಡುವ, ಮಾನವನ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ರೂಪವಾಗಿರುವ ಕಲೆಯಾಗಿದೆ. ಆದ್ದರಿಂದ ನಮ್ಮ ಈ ನೆಲೆದ ತೊಗಲುಗೊಂಬೆಯಾಟ ಕೇವಲ ಮನೋರಂಜನೆಯಾಗದೆ ತನ್ನ ಮೂಲೋದ್ದೇಶಗಳ ಜೊತೆಗೆ ಆಧುನಿಕ ಸಮಾಜಕ್ಕೆ ಮನೋರಂಜನೆಯೊದಗಿಸುವ ಮೂಲಕ ವಾಣಿಜ್ಯೀಕರಣ ಗೊಳ್ಳಬೇಕಿದೆ. 
ವಿದ್ಯಾವಂತ ಯುವ ಜನತೆ ಈ ಕಲಾ ಲೋಕಕ್ಕೆ ಪ್ರವೇಶಿಸಿ ಹೊಸ ರೂಪ ಕೊಡಲು ಪ್ರಯತ್ನಿಸಬೇಕೆ?
ಹೌದು ವಿದ್ಯಾವಂತ ಯುವ ಜನ ಪರಂಪರೆ ಮತ್ತು ಅದರ ಜ್ಞಾನಗಳ ಬಗ್ಗೆ ತೀವ್ರವಾದ ತಾತ್ಸಾರ ಹಾಗೂ ನಿರ್ಲಕ್ಷೆ ಮಾಡುತಿದ್ದು ಇದರಿಂದ ಪಾರಂಪರಿಕ ಕಲೆ ಸಾಹಿತ್ಯ ಮತ್ತಿತರ ಜ್ಞಾನ ಧಾರೆಗಳ ಮುಂದುವರಿಕೆಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಹಾಗಾಗಿ ಈ ಸಮುದಾಯ ಜನಪದ ಕಲೆಯಂತಹ ಕ್ಷೇತ್ರಕ್ಕೆ ಆಸಕ್ತಿಯಿಂದ ಪ್ರವೇಶ ಪಡೆದು ನಿಷ್ಟೆ ತೋರಿದರೆ ಖಂಡಿತಾ ಈ ಕಲೆ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಮುಂದುವರೆಯುತ್ತದೆ. ಅನಕ್ಷರಸ್ಥ ಕಲಾವಿದರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಈ ಕಲೆಯನ್ನು ಮುಂದುವರೆಸಬಹುದು. ಇಲ್ಲಿ ವಿದ್ಯಾವಂತ ಯುವಕರು ಮಾತ್ರವಲ್ಲ ಇಡೀ ಯುವ ಸಮುದಾಯ ಅಂದರೆ ಹೊಸ ತಲೆಮಾರಿನ ಜನ ಈ ಕಲೆಯ ಪ್ರದರ್ಶನದಲ್ಲಿ ಭಾಗಿಯಾಗಬೇಕು ಹೀಗೆ ಆಗುವುದಾದರೆ ತೊಗಲು ಗೊಂಬೆಯಾಟ ಇನ್ನಷ್ಟು ಕಾಲ ನಮ್ಮ ನಡುವೆ ರಿಲೆವೆಂಟಾಗಿ ಉಳಿಯಬಲ್ಲದು. 
ಶಿಕ್ಷಣದ ಮಾದ್ಯಮವಾಗಿ ಬಳಸಿ ಕೊಳ್ಳಬೇಕೆ?
 ಇಂದು ಶಿಕ್ಷಣ ಕ್ಷೇತ್ರ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಸಮರ್ಥವಾಗಿದೆ. ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ಬಹಳಷ್ಟು ಸಹಾಯವನ್ನು ಪಡೆದು ಮನ್ನೆಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಹಳೆಯ ಕಾಲದ ಉಳಿಕೆಯಾಗಿರುವ ತೊಗಲುಗೊಂಬೆಯ ಕಲೆಯನ್ನು ಶಿಕ್ಷಣ ಮಾದ್ಯಮಲ್ಲಿ ಬಳಸಿಕೊಳ್ಳುವುದೆಂದರೆ ಅಸಂಬದ್ಧವೆನಿಸಬಹುದು. ಆದರೆ ಮಕ್ಕಳ ಮನಸ್ಸಿಗೆ ಈ ಗೊಂಬೆಯಾಟ ತೀವ್ರ ಕೂತೂಹಲ ಮೂಡಿಸುವುದರಿಂದ ಇವುಗಳ ಮೂಲಕ ಕಲಿಕೆ ಸುಗಮವಾಗಬಲ್ಲದು.  
ನಮ್ಮ ದೇಶ ಸಂಪ್ರದಾಯಬದ್ದವಾಗಿರುವ ಕಾರಣ ಕಲೆಯನ್ನು ಸಾಂಪ್ರದಾಯಿಕ ನೆಲೆಯಲ್ಲಿ ಮುಂದುವರೆಸಬೇಕೆ?
ಕಾಲಕ್ಕೆ ಹೊಂದಿಕೊಂಡಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಕಲೆಯನ್ನು ಉಳಿಸಬೇಕೆಂಬ ಅಭಿಪ್ರಾಯಗಳು ಸಾಮಾನ್ಯವಾಗಿ ಬರುತ್ತವೆ. ಗೊಂಬೆಯಾಟದ ಮೂಲಕ ಹೊಸ ಕಾಲದ ಕಥೆ ಹೇಳುವ ಪ್ರಯತ್ನ ಮಾಡುವುದು ಕಲೆಯ ಪುನರುಜ್ಜೀವನದ ನಿಟ್ಟಿನಲ್ಲಿ ನಡೆಯುವ ಒಳ್ಳೆಯ ಪ್ರಯತ್ನವೇನೊ ನಿಜ. ಆದರೆ ಹೀಗೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಜಾನಪದ ಕಲೆಗಳು ಕಳೆದು ಹೋದದ್ದೆ ಹೆಚ್ಚು. ತಂತ್ರಜ್ಞಾನವನ್ನು ಬಳಸಿಕೊಂಡು ತೊಗಲುಗೊಂಬೆಗೆ ಜೀವ ತುಂಬುವ ಪ್ರಯತ್ನಗಳಾಗುವ ನಿಟ್ಟಿನ ಚಿಂತನೆಗಳು ಸದ್ಯದ ಅಗತ್ಯ.- ಕುಮಾರ ಎಸ್.
ಗೊಂಬೆಯಾಟವನ್ನು ಹೇಗೆ ಹೊಸಕಾಲಕ್ಕೆ ಹೊದಿಸಿಕೊಂಡು ಮುಂದುವರೆಸಬೇಕೆಂಬುದಕ್ಕೆ ಇಂದುಶ್ರೀ ಅವರು ಮಾಡುತ್ತಿರುವ ಡಿಂಕು ಪ್ರಯೋಗ ಮಾದರಿಯೆನಿಸುತ್ತದೆ. ಸಂಗೀತ ಮಾತು ಮತ್ತಿತರ ಅಂಶಗಳಲ್ಲಿ ಆಧುನಿಕ ಸಾಧ್ಯತೆಗಳನ್ನು ಬಳಸಿಕೊಂಡು ಮುಂದುವರೆಸ ಬೇಕಾಗುತ್ತದೆ. ಇದಕ್ಕೆ ಆಧುನಿಕ ವಿಜ್ಞಾ ತಂತ್ರಜ್ಞಾನದ ತಿಳುವಳಿಕೆ ಬೇಕಾಗುತ್ತದೆ.


ಚಿತ್ರಗಳು : ಅಂತರ್ಜಾಲದ ಮೂಲದಿಂದ
 ದಿನಾಂಕ : ೧೭.೦೧.೨೦೧೫ ರಂದು ಚಿತ್ರದುರ್ಗದಲ್ಲಿ ನಡೆದ ಯಕ್ಷಗಾನ ಬಯಲಾಟ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧ

ನೀರಾವರಿ ಹೋರಾಟದ ಸoಗಾತಿ ಹಲಗೆ,ಡೊಳ್ಳು







ನೀರಾವರಿ ಹೋರಾಟಕೆ ಹರಿದುಬಂತು ಜನಸಾಗರ
************************************************
ಕರ್ನಾಟಕ ನೀರಾವರಿ ವೇದಿಕೆ ಹಾಗೂ ನಾರಾಯಣಪೂರ ಬಲದಂಡೆ 5ಎ ಕಾಲುವೆ ಜಾರಿಗಾಗಿ ಹೋರಾಟ ಸಮಿತಿಯಿಂದ ದಿನಾಂಕ: 27.1.2015ರಂದು ಮುದುಬಾಳ ಕ್ರಾಸ್ ನಿಂದ ಲಿಂಗಸುಗೂರು ಶಾಸಕರ ಕಾರ್ಯಾಲಯದವರೆಗೆ ನಡೆದ ರೈತರ ಬೃಹತ್ ಪಾದಯಾತ್ರೆಯಲ್ಲಿ 500ಕ್ಕೂ ಅಧಿಕ ರೈತರು ಭಾಗವಹಿಸಿ ತಮ್ಮ ನೀರಿನ ಹಕ್ಕನ್ನು ಕೇಳಿದರು....
******
ಹಲಗೆ ಮೇಳ 
ಡೊಳ್ಳು ವಾದ್ಯ
ಪಾದಯಾತ್ರೆಯುದ್ದಕ್ಕೂ ರೈತ ಹೋರಾಟಗಾರರ ಉಮ್ಮಸ್ಸು ಹಿಮ್ಮಡಿಸುವಂತೆ ಮಾಡಿತು...
ಈ ಯೋಜನೆ ಜಾರಿಗೊಂಡರೆ ರಾಯಚೂರು ಜಿಲ್ಲೆಯ 5 ತಾಲ್ಲೂಕಿನ ಹಲವು ಗ್ರಾಮಗಳ ಲಕ್ಷಕ್ಕೂ ಮಿಕ್ಕಿ ಎಕರೆಗೆ ನೀರು ಹರಿಯಲಿದೆ. ಇದರಿಂದ ಹೊಲ-ಮನೆ ಬಿಟ್ಟು ಹೊಟ್ಟೆ ಹೊರೆಯಲು ರೈತರು ಬೆಂಗಳೂರು, ಮಂಗಳೂರಿನಂತಹ ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪಲಿದೆ...




ಮಂಗಳವಾರ, ಜನವರಿ 27, 2015

ಪಿ.ಯು ಕಲಿಕೆಗೆ ಜಾನಪದ ಪಠ್ಯ ಅಳವಡಿಕೆ.




  ಜಾನಪದ ಪದವೀಧರರು ನಿರಂತರವಾಗಿ ನಿರುದ್ಯೋಗದಿಂದ ಬಳಲಿದ್ದರು. ಕಾರಣ ಜಾನಪದಕ್ಕೆ ಹೇಳಿಕೊಳ್ಳುವಂತೆ ಉದ್ಯೋಗ ಸೃಷ್ಟಿಯೇ ಇಲ್ಲವಾಗಿತ್ತು. ಇದೀಗ ಪಿಯು ಕಾಲೇಜಿಗೆ ಒಂದು ಪಠ್ಯವನ್ನಾಗಿ ಜಾನಪದವನ್ನು ಕಲಿಸಲು ಸರಕಾರ ಕರಡನ್ನು ರೂಪಿಸಿದ್ದು, ಇದರ ಚರ್ಚೆಗೆ ಫೆಬ್ರವರಿ 3 ರಂದು  ವಿದ್ವಾಂಸರ ಸಭೆ ಕರೆಯಲಾಗಿದೆ. ಇದಕ್ಕೆ ಶ್ರಮಿಸಿದ  ಎಲ್ಲಾ ಹಿರಿಯರನ್ನೂ ಜಾನಪದ ಬ್ಲಾಗ್ ಪರವಾಗಿ ಅಭಿನಂದನೆ ಹೇಳುತ್ತೇವೆ.

ಸೌಜನ್ಯ:ಕನ್ನಡ ಪ್ರಭ, 28.1.2015






ಶುಕ್ರವಾರ, ಜನವರಿ 23, 2015

ಬಯಲಾಟಕ್ಕೆ ಬೇಕಿದೆ ಕಾಯಕಲ್ಪ

ಕ್ಷೀಣಗೊಂಡಿರುವ ಜನಪದರಾಟ: ಕಾಯಕಲ್ಪಕ್ಕೆ ಕಾಯುತ್ತಿದೆ ಬಯಲಾಟ


   -ಶಶಿಕಾಂತ ಯಡಹಳ್ಳಿ    


'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ

ಕಳೆದ ಶತಮಾನದ ಮಧ್ಯಭಾಗದವರೆಗೂ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಶ್ರಮಸಂಸ್ಕೃತಿಕಪ್ರತೀಕವಾಗಿ ಹುಟ್ಟಿ ಬೆಳೆದು ವಿಜ್ರಂಭಿಸಿದ್ದು ಬಯಲಾಟಕಂಪನಿ ನಾಟಕಗಳು ಕರ್ನಾಟಕದರಂಗಭೂಮಿಯನ್ನು ಆಪೋಷನ ತೆಗೆದುಕೊಳ್ಳುವ ಮೊದಲು ಇಡೀ ಕರ್ನಾಟಕವನ್ನು ಗ್ರಾಮೀಣ ಜನರಮನರಂಜನೆಯ ಮಾಧ್ಯಮವಾಗಿ ಆಳಿದ್ದು ಬಯಲಾಟ ಕಲಾಪ್ರಕಾರಗಳುಸಿದ್ದರಂಗಮಂದಿರಗಳಿಲ್ಲದೇಬಯಲಿನಲ್ಲೇ ತಾತ್ಕಾಲಿಕ ವೇದಿಕೆಗಳನ್ನು ನಿರ್ಮಿಸಿ ಆಟಗಳನ್ನು ಪ್ರದರ್ಶಿಸುತ್ತಿದ್ದುದರಿಂದ  ಜಾನಪದಕಲೆಗಳಿಗೆ ಬಯಲಾಟ ಎಂದು ಹೆಸರು ಜನಜನಿತಹೀಗೆ ಬಯಲಲ್ಲಿ ಆಡುವ ಆಟಗಳು ಒಂದೆರಡಲ್ಲ.ಅನೇಕ ಪ್ರಕಾರಗಳಿವೆಅವುಗಳಲ್ಲಿ ಮುಖ್ಯವಾದವುಗಳು ಮೂಡಲಪಾಯ ಮತ್ತು ಪಡುವಲುಪಾಯಎರಡೂ ಪ್ರಮುಖ ಜಾನಪದ ಪ್ರದರ್ಶಕ ಕಲಾಪ್ರಕಾರಗಳು ಕರ್ನಾಟಕವನ್ನು ಪ್ರಾದೇಶಿಕವಾಗಿಹಂಚಿಕೊಂಡಿವೆಆಯಾ ಭಾಗದ ಕೃಷಿ ಮತ್ತು ಕ್ರಿಯಾಮೂಲದ ಅಗತ್ಯಕ್ಕೆ ತಕ್ಕಂತೆ ಭಿನ್ನವಾಗಿಬೆಳವಣಿಗೆ ಹೊಂದಿವೆಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಶಿವಮೊಗ್ಗಚಿಕ್ಕಮಂಗಳೂರು ಜಿಲ್ಲೆಗಳ ಕೆಲ ಭಾಗದಲ್ಲಿ ಪಡುವಲುಪಾಯ ಬಯಲಾಟ ಪ್ರಸಿದ್ಧಿಯನ್ನು ಪಡೆಯಿತು.ಇದಕ್ಕೆ ಯಕ್ಷಗಾನ ಬಯಲಾಟ ಎಂದು ಹೆಸರಾಯಿತುಅದೇ ರೀತಿ ಮಧ್ಯ ಕರ್ನಾಟಕಉತ್ತರಕರ್ನಾಟಕಹೈದರಾಬಾದ ಕರ್ನಾಟಕಬಾಂಬೆ ಕರ್ನಾಟಕ ಭಾಗಗಳಲ್ಲಿ ಮೂಡಲಪಾಯಬಯಲಾಟಗಳು ತುಂಬಾ ಜನಪ್ರೀಯವಾಗಿದ್ದವುಮೂಡಲಪಾಯ ಬಯಲಾಟದಲ್ಲಿ ದೊಡ್ಡಾಟಸಣ್ಣಾಟ,ಶ್ರೀಕೃಷ್ಣ ಪಾರಿಜಾತರಾಧಾನಾಟಅಟ್ಟದಾಟಘಟ್ಟದಕೋರೆ.. ಮುಂತಾದ ಪ್ರಕಾರಗಳುಚಾಲ್ತಿಯಲ್ಲಿದ್ದವುಈಗಲೂ ಅಲ್ಲಲ್ಲಿ ಪಳುವಳಿಕೆಗಳಂತೆ ಇವೆ.

ಮೂಡಲಪಾಯ ಬಯಲಾಟಕ್ಕೆ ಧಾರವಾಡಬೆಳಗಾಂಬಿಜಾಪುರ ಜಿಲ್ಲೆಗಳಲ್ಲಿ ದೊಡ್ಡಾಟವೆಂದೂ,ಬೀದರ ಗುಲಬರ್ಗಾ ಜಿಲ್ಲೆಗಳಲ್ಲಿ ಅಟ್ಟದಾಟವೆಂದೂರಾಯಚೂರು ಬಳ್ಳಾರಿ ಭಾಗದಲ್ಲಿಹಿರೇಆಟವೆಂದೂಮೈಸೂರು ಮಂಡ್ಯ ಶಿವಮೊಗ್ಗ ಪ್ರದೇಶಗಳಲ್ಲಿ ಮೂಡಲಪಾಯಯಕ್ಷಗಾನವೆಂದೂ ಕರೆಯಲಾಗುತ್ತದೆನಿರ್ದಿಷ್ಟವಾಗಿ ಹೇಳಬೇಕೆಂದರೆ ಕರಾವಳಿ ಕರ್ನಾಟಕದಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮೂಡಲಪಾಯ ಬಯಲಾಟದ ಪ್ರಕಾರಗಳು ಪ್ರಚಲಿತದಲ್ಲಿದ್ದವು.ಪ್ರದೇಶದಿಂದ ಪ್ರದೇಶಕ್ಕೆ ಕೆಲವು ಬದಲಾವಣೆಭಿನ್ನತೆ ಹಾಗೂ ಬೇರೆ ಹೆಸರುಗಳನ್ನು ಹೊಂದಿದ್ದರೂ ಮೂಲದಲ್ಲಿ ಇವೆಲ್ಲಾ ಮೂಡಲಪಾಯ ಬಯಲಾಟಗಳೇ ಆಗಿವೆ.


'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ


ಜನಪದ ಪರಂಪರೆಯ ಪ್ರದರ್ಶಕ ಕಲೆಯಾದ  ಬಯಲಾಟಗಳು ಕೇವಲ ಮನರಂಜನೆಯಸಾಧನಗಳಾಗಿರದೇ ಗ್ರಾಮೀಣ ಪ್ರದೇಶಗಳ ಶ್ರಮ ಸಂಸ್ಕೃತಿಯ ಪ್ರತೀಕವಾಗಿವೆಶ್ರಮದಾಯಕವಾದಕೃಷಿ ಬದುಕನ್ನೇ ಒಂದು ಕಲಾಪ್ರಕಾರವಾಗಿ ಗ್ರಾಮೀಣ ಜನಪದರು ರೂಪಿಸಿದ್ದಾರೆಬಹುತೇಕದುಡಿಯುವ ಜನರು ಕಟ್ಟಿ ಬೆಳೆಸಿದ  ಬಯಲಾಟ ಕಲಾಮಧ್ಯಮವು ಎಲ್ಲಾ ಜಾತಿ ಧರ್ಮ ವರ್ಗದಜನರ ಸಹಭಾಗಿತ್ವದಲ್ಲಿ ನಿರ್ಮಿತಿಯಾಗಿದ್ದು ನಿಜವಾದ ಅರ್ಥದಲ್ಲಿ ಗ್ರಾಮಗ್ರಾಮಗಳಲ್ಲಿ ಸಾಮರಸ್ಯಹಾಗೂ ಸೌಹಾರ್ಧತೆಯ ದ್ಯೋತಕವಾಗಿವೆಬದುಕಿಗಾಗಿ ಕೃಷಿ ಹಾಗೂ ಮನೋರಂಜನೆಗಾಗಿಬಯಲಾಟವನ್ನು ಶತಮಾನಗಳಿಂದ ರೂಢಿಸಿಕೊಂಡು ಬಂದ ಅನಕ್ಷರಸ್ತ ಜನಪದ ಕಲಾವಿದರುಬಯಲಾಟ ಕಲಾಪ್ರಕಾರದ ಮೂಲಕ  ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಬಹುದೊಡ್ಡಕೊಡುಗೆಯನ್ನು ಕೊಟ್ಟಿದ್ದಾರೆ.

ಪಡುವಲುಪಾಯ ಯಕ್ಷಗಾನವು ಮೇಲ್ವರ್ಗಗಳ ಕೈಗೆ ಸಿಕ್ಕುಮೇಲ್ಜಾತಿಯವರ ಕೃಪಾಪೋಷಣೆಹೊಂದಿಸರಕಾರಗಳ ಸಹಕಾರವನ್ನು ಪಡೆದು ಅದು ಹೇಗೋ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು.ಶಿವರಾಮ ಕಾರಂತರಂತಹ ಪ್ರತಿಭಾನ್ವಿತರು ಯಕ್ಷಗಾನಕ್ಕೆ ಕಾಯಕಲ್ಪವನ್ನು ಕೊಟ್ಟು ಬೆಳೆಸಿದರು.ಯಕ್ಷಗಾನ ಮಂಡಳಿಗಳು ಕರಾವಳಿ ಕರ್ನಾಟಕದುದ್ದಕ್ಕೂ ಈಗಲೂ ಜನಪ್ರೀಯವಾಗಿವೆದಕ್ಷಿನೋತ್ತರಜಿಲ್ಲೆಗಳ ಅಕ್ಷರಸ್ತರು ಯಕ್ಷಗಾನದಲ್ಲಿ ಆಸಕ್ತಿಹೊಂದಿ  ಹಲವಾರು ಮಾರ್ಪಾಡುಗಳೊಂದಿಗೆ  ಕಲೆಯನ್ನುಸದೃಢವಾಗಿ ಬೆಳೆಸಿದರುಅಪಾರವಾದ ಯಕ್ಷಗಾನ ಪ್ರೇಮಿಗಳ ಪ್ರೇಕ್ಷಕವೃಂದ ಹಳ್ಳಿ ಮತ್ತುಪಟ್ಟಣಗಳಲ್ಲಿ ಯಕ್ಷಗಾನ ಕಲಾ ಪ್ರಕಾರಕ್ಕೆ ಬೆಂಬಲವಾಗಿ ನಿಂತಿತುಧರ್ಮಸ್ಥಳದಂತಹ ಧಾರ್ಮಿಕಕ್ಷೇತ್ರಗಳೂ ಯಕ್ಷಗಾನಕ್ಕೆ ಬೆಂಗಾವಲುಗಳಾದವುಕೇವಲ ಎರಡು ಜಿಲ್ಲೆಗಳಲ್ಲಿ ಅಸ್ತಿತ್ವ ಇರುವಯಕ್ಷಗಾನದ ಅಭಿವೃದ್ದಿಗೆ ಸರಕಾರ ಯಕ್ಷಗಾನ ಅಕಾಡೆಮಿಯನ್ನೇ ಸ್ಥಾಪಿಸಿತುಹೀಗಾಗಿ ಮೇಲ್ಚಾತಿ,ಧರ್ಮಧರ್ಮಪೀಠವಿದ್ಯಾವಂತರುಬುದ್ದಿಜೀವಿಗಳು ಹಾಗೂ ಸರಕಾರದ ಬೆಂಬಲದಿಂದಾಗಿ ಪಡುವಲುಪಾಯ ಯಕ್ಷಗಾನ ಕಲಾ ಪ್ರಕಾರವು ತನ್ನ ಸಮೃದ್ದತೆಯನ್ನು ಕಾಯ್ದುಕೊಂಡಿದೆ.

ಆದರೆ  ಭಾಗ್ಯ ಮೂಡಲಪಾಯ ಬಯಲಾಟಕ್ಕಿರಲಿಲ್ಲಮೊದಲುಒಂದೊಂದು ಊರುಗಳಲ್ಲೂ ಎರಡು ಮೂರು ಹವ್ಯಾಸಿ ಬಯಲಾಟತಂಡಗಳು ಹುಟ್ಟಿ ಪೈಪೋಟಿಯ ಮೇಲೆ ನಾಟಕಗಳನ್ನು ಕಟ್ಟಲಾಗುತ್ತಿತ್ತು.ಊರ ಜಾತ್ರೆಹಬ್ಬ ಹರಿದಿನಗಳಂದು ಊರವರಿಂದಲೇ ಬಯಲಾಟಗಳುನಿರ್ಮಾಣಗೊಂಡು ಸಂಭ್ರಮದಿಂದ ಪ್ರದರ್ಶನಗೊಳ್ಳುತ್ತಿದ್ದವು.ಬಯಲಾಟಗಳು ಗ್ರಾಮಗಳ ಆಚರಣೆಗಳ ಭಾಗವಾಗಿಯೇ ಬೆಳೆದಿದ್ದವು.ಗ್ರಾಮೀಣ ಪ್ರದೇಶಗಳ ಅಶಿಕ್ಷಿತ ಶ್ರಮಿಕ ವರ್ಗಗಳ ಭಾಗವಾಗಿಯೇ ಉಳಿದ ಬಯಲಾಟಗಳು ಕಂಪನಿ ನಾಟಕಗಳ ಹಾವಳಿಯಿಂದ ಒಂದಿಷ್ಟುಹಿನ್ನಡೆಯನ್ನು ಅನುಭವಿಸಿತುತದನಂತರ ನೆರೆ ಬರಗಳಿಂದ ಕಂಗೆಟ್ಟಹಳ್ಳಿಗಳಲ್ಲಿ ಆರ್ಥಿಕ ಸಮಸ್ಯೆಗಳುಂಟಾಗಿ ಯುವಕರು ಕೆಲಸಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಿದ್ದರಿಂದ ಬಯಲಾಟಕ್ಕೆ ಯುವಪ್ರತಿಭೆಗಳ ಕೊರತೆಯುಂಟಾಯಿತುಬುದ್ದಿಜೀವಿಗಳು ಬಯಲಾಟಗಳನ್ನು ಡಾಕ್ಟರೇಟ್ ಮಾಡಲುಆಕರವಾಗಿ ಬಳಸಿಕೊಂಡರೇ ಹೊರತು ಬಯಲಾಟದ ಬದಲಾವಣೆಗೆಅಭಿವೃದ್ದಿಗೆ ಶಿವರಾಮಕಾರಂತರಂತೆ ಶ್ರಮವಹಿಸಲಿಲ್ಲನಗರೀಕರಣಜಾಗತೀಕರಣಗಳು ಹಾಗೂ ಸರಕಾರಗಳ ವಿವೇಚನಾರಹಿತ ಯೋಜನೆಗಳು ಹಳ್ಳಿಗಳನ್ನು ಅತಂತ್ರಗೊಳಿಸಿದವುಆಧುನಿಕ ದೃಶ್ಯ ಮಾಧ್ಯಮಗಳು ದೇಸಿಕಲೆಗಳನ್ನು ಆಪೋಷಣ ತೆಗೆದುಕೊಳ್ಳತೊಡಗಿತುಟಿವಿ ಮತ್ತು ಸಿನೆಮಾ ಮಾಧ್ಯಮಗಳೂ ಸಹಗ್ರಾಮೀಣ ಪ್ರೇಕ್ಷಕವರ್ಗವನ್ನು ಆಕ್ರಮಿಸಿಕೊಂಡಿತುಈಕಡೆ ಬಯಲಾಟ ಮಾಡುವವರೂ ಇಲ್ಲಾ,ಮಾಡಿದರೆ ನೋಡುವವರೂ ಇಲ್ಲ ಎನ್ನುವ ಹಂತಕ್ಕೆ ನಮ್ಮ ಜಾನಪದ ಕಲೆ ನಿತ್ರಾಣಗೊಂಡಿತುಎಲ್ಲಾ ಕಾರಣಗಳಿಂದಾಗಿ ಬಯಲಾಟ ಕಲಾ ಪರಂಪರೆ ನಿಧಾನವಾಗಿ ನೇಪತ್ಯಕ್ಕೆ ಸರಿಯತೊಡಗಿತು.ಈಗಲೂ ಅಲ್ಲಲ್ಲಿ ಅಳಿದುಳಿದ ಬಯಲುಸೀಮೆಯ ಕೆಲವು ಭಾಗಗಳಲ್ಲಿ ಅಪರೂಪಕ್ಕೆಂಬಂತೆ ಇರುವಬಯಲಾಟದ ಕಥೆಗಾರರುಹಾಡುಗಾರರು ಹಾಗೂ ಸಂಗೀತಗಾರರ ಕೊನೆಯ ತಲೆಮಾರುಮುಗಿದುಹೋದರೆ ಮುಂದಿನ ತಲೆಮಾರಿಗೆ ಬಯಲಾಟವನ್ನು ತೆಗೆದುಕೊಂಡು ಹೋಗುವ ಸಾಧ್ಯತೆಗಳುತುಂಬಾ ಕ್ಷೀಣವಾಗಿವೆ.

ಗ್ರಾಮೀಣ ಜನರ ಬದುಕೇ ಅತಂತ್ರವಾಗಿರುವಾಗಅವರ ಬದುಕಿನ ಮೂಲವಾದ ಕೃಷಿಯೇ ಇಂದುನಶಿಸುತ್ತಿರುವಾಗತಿನ್ನುವ ಅನ್ನ ಬೆಳೆಯುವ ಹೊಲಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವಾಗ,ಕೃಷಿ ಚಟುವಟಿಕೆಗಳನ್ನು ಯಂತ್ರಗಳೇ ನಿಭಾಯಿಸುತ್ತಿರುವಾಗ ಕೃಷಿಮೂಲ-ಶ್ರಮಮೂಲ ಜನಪದಕಲಾ ಪ್ರಕಾರವಾದ ಬಯಲಾಟಗಳು ಬದುಕಿ ಬಾಳುವ ಸಾಧ್ಯತೆಗಳಾದರೂ ಎಲ್ಲಿವೆಶ್ರಮಮೂಲದಜಾನಪದ ಕಲೆಯನ್ನು ನಿರ್ಲಕ್ಷಿಸಿ ವಿದೇಶಿ ಮೂಲದ ವಿಲಾಸಿ ಸಂಸ್ಕೃತಿಯನ್ನು ಜನರ ಮನಸ್ಸಿನಲ್ಲಿಬಿತ್ತುವ ಅನಾಹುತಕಾರಿ ಕೆಲಸಗಳು ಮಾಧ್ಯಮಗಳ ಮೂಲಕ ಸಮರೋಪಾದಿಯಲ್ಲಿ ನಡೆಯುತ್ತಿವೆ.ನೆಲಮೂಲದ ದೇಸಿ ಸಂಸ್ಕೃತಿಯನ್ನು ಕಡೆಗಣಿಸಿ ಶಿಷ್ಟ ಕಲೆಗಳನ್ನೇ  ನಾಡಿನ ನಿಜವಾದ ಕಲೆ ಎಂದುಬಿಂಬಿಸುವ ಹುನ್ನಾರವನ್ನು ಆಳುವ ವರ್ಗಗಳು ವ್ಯವಸ್ಥಿತವಾಗಿ ಮಾಡುತ್ತಿವೆ.  ಜಾಗತೀಕರಣದಜಾಗತಿಕ ವಿಕ್ಷಿಪ್ತ ಸಂಸ್ಕೃತಿಯನ್ನು ಆಧುನಿಕ ಸಾಮೂಹಿಕ ಸಂವಹನ ಮಾಧ್ಯಮಗಳ ಮೂಲಕನಿರಂತರವಾಗಿ ಬಿತ್ತರಿಸುವ ಬಂಡವಾಳಶಾಹಿಗಳು ನಡೆಸುವ ವಾಹಿನಿಗಳು ಹಾಗೂ ಕಾರ್ಪೋರೇಟ್ಕಂಪನಿಗಳ ಹಿಡಿತದಲ್ಲಿರುವ ಕೆಲವು ಪತ್ರಿಕೆಗಳು ದೇಸಿ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿನಿರ್ಲಕ್ಷಿಸುತ್ತಿವೆನಶಿಸುತ್ತಿರುವ ಜನಕಲೆಯನ್ನು ಪೋಷಿಸಿ ಬೆಳೆಸಬೇಕಾದ ಸರಕಾರಗಳು ಮಲತಾಯಿದೋರಣೆ ತಳೆದು ಮೂಡಲಪಾಯ ಬಯಲಾಟದ ಕಲಾ ಪ್ರಕಾರಗಳನ್ನು ಪರಿಗಣನೆಗೆತೆಗೆದುಕೊಳ್ಳುತ್ತಿಲ್ಲಕಾಯಕಲ್ಪಕ್ಕೆ ಯೋಜನೆಗಳನ್ನು ರೂಪಿಸುತ್ತಿಲ್ಲ.

'ವೀರ ರಾಣಿ ಕಿತ್ತೂರ ಚೆನ್ನಮ್ಮ ' ದೊಡ್ಡಾಟದ ಚಿತ್ರ
ಇದಕ್ಕೆ ಉದಾಹರಣೆ ಇಲ್ಲಿದೆಶಿಷ್ಟ ಕಲೆಯಾಗಿ ರೂಪಾಂತರಗೊಂಡ ಯಕ್ಷಗಾನ ಜಾನಪದ ಕಲೆಯಅಭಿವೃದ್ದಿಗಾಗಿ ಸರಕಾರವು ಪ್ರತ್ಯೇಕ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿತುತಪ್ಪೇನಿಲ್ಲಅದೂಕೂಡಾ ಮೂಲದಲ್ಲಿ ಜಾನಪದ ಬಯಲಾಟ ಕಲಾ ಪ್ರಕಾರವಾಗಿರುವುದರಿಂದ  ಕಲೆಯೂ ಉಳಿದುಬೆಳೆಯಬೇಕಿದೆಆದರೆ ಕೇವಲ ಎರಡು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಸ್ಥಾಪಿಸಿ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಕುಟುಕು ಜೀವ ಹಿಡಿದುಕೊಂಡು ಆಗಲೋ ಈಗಲೋಸಾಯುವ ಸ್ಥಿತಿಯಲ್ಲಿರುವ ಮೂಡಲಪಾಯ ಬಯಲಾಟ ಕಲಾ ಪ್ರಕಾರಗಳ ಬಗ್ಗೆ ಸರಕಾರ ದಿವ್ಯನಿರ್ಲಕ್ಷ ತೋರಿಸಿತುಹಲವು ಮೂಲಗಳಿಂದ ಬಂದ ಪ್ರತಿರೋಧ ಹಾಗೂ ಟೀಕೆಗಳಿಂದಾಗಿ ಎಚ್ಚೆತ್ತರಾಜ್ಯ ಸರಕಾರವು ಇತ್ತೀಚೆಗೆ ಯಕ್ಷಗಾನ ಅಕಾಡೆಮಿಗೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಎಂದು ಹೆಸರನ್ನು ಮಾತ್ರ ಬದಲಾಯಿಸಿತುಆದರೆ  ಬದಲಾವಣೆಯಿಂದ ಮೂಡಲಪಾಯಬಯಲಾಟದ ಅಭಿವೃದ್ದಿಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗಲೇ ಇಲ್ಲಾಈಗಲೂ ಅಕಾಡೆಮಿಗೆ ಸರಕಾರ ಕೊಡುವ ಅನುದಾನದ ಬಹುತೇಕ ಭಾಗವನ್ನು ಯಕ್ಷಗಾನಕ್ಕೆ ಬಳಸಲಾಗುತ್ತಿದೆ.ಕಲಾವಿದರಿಗೆ ಪ್ರಶಸ್ತಿಮಾಶಾಸನ ಕೊಡುವಾಗಲೂ ಸಹ ಮೂಡಲಪಾಯ ಬಯಲಾಟದಕಲಾವಿದರನ್ನು ನಿರ್ಲಕ್ಷಿಸಲಾಗುತ್ತಿದೆ ಅಕಾಡೆಮಿಗಳಿಂದ ಹೆಚ್ಚಿಗೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.ಆದರೆ ಯಾಕೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ಬಯಲಾಟದ ಕಲಾವಿದರುಕೇಳುತ್ತಿದ್ದಾರೆ.


 ಸಲ ಯಕ್ಷಗಾನ ಬಯಲಾಟ ಅಕಾಡೆಮಿಗೆಸರಕಾರ ಬೆಳಗಲ್ ವೀರಣ್ಣ ರವರನ್ನುಅಧ್ಯಕ್ಷರನ್ನಾಗಿ ನಿಯಮಿಸಿದೆಆದರೆಅಕಾಡೆಮಿಯ ಸದಸ್ಯರಲ್ಲಿ ಬಹುಪಾಲುಯಕ್ಷಗಾನ ಕಲೆಗೆ ಸಂಬಂಧಿಸಿದವರೇ ಆಗಿದ್ದುಅಲ್ಲೂ ಬಯಲಾಟದ ಕಲಾವಿದರ ಪ್ರಾತಿನಿದ್ಯತೆಕನಿಷ್ಟವೆನಿಸುವಷ್ಟಿದೆಕರ್ನಾಟಕದಕಲಾಪ್ರಕಾರಗಳಾದ ಯಕ್ಷಗಾನವೂಬೆಳೆಯಬೇಕು ಹಾಗೂ ಬಯಲಾಟವೂಪುನರುಜ್ಜೀವನಗೊಳ್ಳಬೇಕುನೆಲಮೂಲದದೇಸಿ ಕಲೆಗಳು ಯಾವುದೇ ಇದ್ದರೂ ಅವುಗಳಿಗೆಸರಕಾರ ಹಾಗೂ ಸರಕಾರದ ಅಕಾಡೆಮಿಗಳು ಬೆಂಬಲಿಸಲೇಬೇಕುಇಲ್ಲವಾದರೆ ಶತಮಾನಗಳಿಂದಬೆಳೆದು ಬಂದ ಶ್ರಮಿಕ ಪರಂಪರೆಯ ಮೂಡಲಪಾಯ ಬಯಲಾಟವು ಮುಂದಿನ ತಲೆಮಾರಿಗೆಇಲ್ಲವಾಗುತ್ತದೆಒಂದು ಕಲೆ ಅಥವಾ ಸಂಸ್ಕೃತಿ ನಾಶವಾದರೆ  ಪ್ರದೇಶದ ಜನಾಂಗವೇವಿಕಲಾಂಗವಾದಂತೆನಿಸುತ್ತದೆಕ್ರಿಯಾ ಮೂಲ ಕಲೆ-ಸಂಸ್ಕೃತಿ ಇಲ್ಲದ ಗ್ರಾಮೀಣ ಜನತೆಅನಿವಾರ್ಯವಾಗಿ ತಮ್ಮ ಕ್ರಿಯಾಶೀಲತೆ ಕಳೆದುಕೊಂಡು  ಹಿಂಸೆ ಮತ್ತು ಸೆಕ್ಸನ್ನು ವೈಭವಿಸುತ್ತಿರುವಆಧುನಿಕ ಜಾಗತಿಕ ವಿಕ್ಷಿಪ್ತ ಸಂಸ್ಕೃತಿಯತ್ತ ಒಲಿಯುತ್ತಾರೆಆಗ ಇಡೀ ಸಮಾಜ ಸ್ವಾಯತ್ತತೆ,ಸ್ವಾಭಿಮಾನ ಕಳೆದುಕೊಂಡು ಜಾಗತೀಕರಣದ ಷಡ್ಯಂತ್ರಕ್ಕೆ ಬಲಿಯಾಗಿ ಮತ್ತೆ ಮಾನಸಿಕವಾಗಿಗುಲಾಮಗಿರಿಗೆ ಒಳಗಾಗುವ ಸಂಭವನೀಯತೆ ಹೆಚ್ಚಾಗಿದೆ.

ಒಂದು ಕಾಲಕ್ಕೆ ಜನಪ್ರೀಯವಾಗಿದ್ದ ಬಯಲಾಟಗಳು ಇಂದು ಯಾಕೆ ನಶಿಸುತ್ತಿವೆಬಯಲಾಟದಕಲಾವಿದರ ನಿಜವಾದ ಸಮಸ್ಯೆಗಳೇನುಬಯಲಾಟ ಕಲೆಯಲ್ಲಿರುವ ನ್ಯೂನ್ಯತೆಗಳೇನುಬದಲಾದಕಾಲಕ್ಕೆ ತಕ್ಕಂತೆ ಬಯಲಾಟಗಳ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಾಪುರಾಣಪರಿಕಲ್ಪನೆಗಳ ಪ್ರಸಂಗಗಳನ್ನೇ ಆಧರಿಸಿದ ಬಯಲಾಟಗಳಿಗೆ ಚಾರಿತ್ರಿಕಸಾಮಾಜಿಕ ವಿಷಯಗಳನ್ನುಅಳವಡಿಸಲು ಸಾಧ್ಯವಾಹಾಡು ಸಂಗೀತ ನೃತ್ಯಗಳೇ ವಿಜ್ರಂಭಿಸುವ ದೊಡ್ಡಾಟದಂತಹ ಕಲೆಗಳಲ್ಲಿಆಧುನಿಕ ಅಭಿನಯ ತಂತ್ರಗಳನ್ನು     ಅಳವಡಿಸಿ ಹೊಸ ರೀತಿಯ ಕಾಯಕಲ್ಪ ಕೊಡಲು ಆಗುತ್ತದಾ?ಸರಳವಾದ ಅರ್ಥಗ್ರಹಿಕೆಗೆ ಅಡೆತಡೆ ಒಡ್ಡಬಹುದಾಗಿರುವ ಬಯಲಾಟದೊಳಗಿನ ಕ್ಲಿಷ್ಟತೆಯನ್ನುಕಡಿಮೆಗೊಳಿಸಿ ಇನ್ನಷ್ಟು ಸುಲಭಗೊಳಿಸಲು ಸಾಧ್ಯವಾ?  ಹೀಗೆ... ಕೆಲವಾರು ಪ್ರಶ್ನೆಗಳಿಗೆ ಉತ್ತರವನ್ನುಕಂಡುಹಿಡಿಯುವ ಕೆಲಸಗಳನ್ನು ಸರಕಾರಗಳುಅಕಾಡೆಮಿಗಳುಜಾನಪದ ವಿಶ್ವವಿದ್ಯಾಲಯಗಳು,ವಿದ್ಯಾವಂತ ಕಲಾವಿದರುಗಳುಡಾಕ್ಟರೇಟ್ ಮಾಡಿದ ಬುದ್ದಿಜೀವಿಗಳು ಆಲೋಚಿಸಬೇಕಿದೆಕಾಲಕ್ಕೆತಕ್ಕಂತೆ ರೂಪಾಂತರ ಹೊಂದದಿದ್ದರೆ ಯಾವ ಕಲೆಯೂ ಬದುಕಲಾರದುಹೀಗಾಗಿ ಬಯಲಾಟಗಳೂಸಹ  ಬದಲಾಗಬೇಕಿದೆ  ನಿಟ್ಟಿನಲ್ಲಿ ಕಾರ್ಯಯೋಜನೆಗಳು ಪ್ರಾಮಾಣಿಕವಾಗಿ ನಡೆಯಬೇಕಿದೆಆದರೆಇದನ್ನು ಮಾಡುವವರು ಯಾರು?

ಎಂ.ಎಸ್.ಮಾಳವಾಡ
 ನಿಟ್ಟಿನಲ್ಲಿ ಒಂದು ಸಣ್ಣ ಆಶಾಕಿರಣ ಮೂಡಿದೆಅದು ಗ್ರಾಮರಂಗತಂಡದ ಕಾರ್ಯಾಗಾರಗ್ರಾಮರಂಗ ಎನ್ನುವ ಗ್ರಾಮೀಣ ಹವ್ಯಾಸಿರಂಗತಂಡವು ದಿ2014 ಮೇ 26 ರಿಂದ ಜೂನ್ 6 ರವರೆಗೆ ಹಾವೇರಿಯಲ್ಲಿದೊಡ್ಡಾಟ ಕುರಿತ ಹತ್ತು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.ದೊಡ್ಡಾಟ ಎನ್ನುವ ಬಯಲಾಟದ ರಂಗಪರಂಪರೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೆಲವಾರು ಗ್ರಾಮೀಣ ಯುವಕ-ಯುವತಿಯರನ್ನುಒಟ್ಟು ಸೇರಿಸಿ ಅವರಿಗೆ ರಂಗಭೂಮಿ ಕುರಿತ ಅರಿವನ್ನು ಕೊಡುವ ಹಾಗೂದೊಡ್ಡಾಟದ ಕುರಿತು ಪ್ರಾತಕ್ಷಿತೆಯನ್ನು ತೋರಿಸುವ ಮತ್ತು ಪರಿಣಿತರಿಂದದೊಡ್ಡಾಟವನ್ನು ಕಲಿಸುವ ಸ್ತುತ್ಯಾರ್ಹ ಕೆಲಸವನ್ನು ಗ್ರಾಮರಂಗದ ಎಂ.ಎಸ್.ಮಾಳವಾಡರವರನೇತೃತ್ವದಲ್ಲಿ ಆಯೋಜಿಸುತ್ತುಒಂದು ಸರಕಾರಿ ಇಲಾಖೆ ಅಥವಾ ಅಕಾಡೆಮಿ ಮಾಡಬಹುದಾದಕೆಲಸವನ್ನು ಇಂಗಳಿಗಿಯಂತಹ ಗ್ರಾಮದ ರಂಗತಂಡವೊಂದು ಮಾಡಿತುಅದೂ ಯಾವುದೇ ಸರಕಾರಿಇಲಾಖೆ ಅಕಾಡೆಮಿಗಳ ಆರ್ಥಿಕ ನೆರವಿಲ್ಲದೆರಾಜಾಶ್ರಿತ ಸಿಗದೆ ಜನಾಶ್ರಿತವಾಗಿ ರೂಪಗೊಂಡ ರೈತಮಕ್ಕಳ ಕಲೆ ಮೂಡಲಪಾಯ ದೊಡ್ಡಾಟಕ್ಕೆ ಕಾಯಕಲ್ಪ ಎನ್ನುವ ಕಾರ್ಯಾಗಾರ ಯಶಸ್ವಿಯಾಯಿತು.

 ದೊಡ್ಡಾಟದ ಕಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಇನ್ನಷ್ಟು ಸರಳಗೊಳಿಸಿ,ಅಭಿನಯಕ್ಕೆ ಹಾಗೂ ಸಂಭಾಷನೆಗೆ ಪ್ರಾಧಾನ್ಯತೆಯನ್ನು ಕೊಟ್ಟು ವೀರ ರಾಣಿ ಕಿತ್ತೂರು ಚೆನ್ನಮ್ಮಎನ್ನುವ ದೊಡ್ಡಾಟವನ್ನು  ಕಾರ್ಯಾಗಾರದಲ್ಲಿ ಸಿದ್ದಗೊಳಿಸಲಾಗಿದೆ ದೊಡ್ಡಾಟದ ವಿಶೇಷತೆಏನೆಂದರೆ ಪೌರಾಣಿಕ ವಸ್ತುವನ್ನೇ ಆಧರಿಸಿದ ದೊಡ್ಡಾಟ ಬಯಲಾಟ ಪರಂಪರೆಯನ್ನು ಮುರಿದುಮೊದಲ ಬಾರಿಗೆ ಚಾರಿತ್ರಿಕ ವಿಷಯವೊಂದನ್ನು ಆಧರಿಸಿ ದೊಡ್ಡಾಟವನ್ನು ಆಡಿಸುತ್ತಿರುವುದುಹಾಗೂದೊಡ್ಡಾಟದಲ್ಲಿ ಎಂದೂ ಹೆಣ್ಣುಮಕ್ಕಳು ಭಾಗವಹಿಸುವುದಿಲ್ಲಸ್ತ್ರೀ ಪಾತ್ರಗಳನ್ನೂ ಸಹ ಪುರುಷರೇಮಾಡುತ್ತಾ ಬಂದಿದ್ದಾರೆಆದರೆ ಮೊದಲ ಬಾರಿಗೆ ಸ್ತ್ರೀ ಪಾತ್ರಗಳಿಗೆ ಮಹಿಳೆಯರೇಅಭಿನಯಿಸುತ್ತಿದ್ದಾರೆಜೊತೆಗೆ ದೊಡ್ಡಾಟದೊಳಗಿನ ಕ್ಲಿಷ್ಟತೆಗಳನ್ನು ಸರಳಗೊಳಿಸಿ ನೋಡಿದವರಿಗೆಸುಲಭವಾಗಿ ಕಥಾನಕತೆ ಅರ್ಥವಾಗುವಂತೆ ... ಕಿತ್ತೂರು ಚೆನ್ನಮ್ಮ ದೊಡ್ಡಾಟವನ್ನು ವಿಭಿನ್ನವಾಗಿಕಟ್ಟಲಾಗಿದೆ ಐತಿಹಾಸಿಕ ವಿಷಯವಾಧರಿಸಿದ ದೊಡ್ಡಾಟವನ್ನು ಗ್ರಾಮರಂಗ  ಅಧ್ಯಕ್ಷರಾದಹಿರಿಯ ಗ್ರಾಮೀಣ ರಂಗಕರ್ಮಿ ಎಂ.ಎಸ್.ಮಾಳವಾಡರವರು ರಚಿಸಿ ನಿರ್ದೇಶಿಸಿದ್ದಾರೆಕಾರ್ಯಾಗಾರದ ನಿರ್ದೇಶಕರಾಗಿ ವಿರೇಶ ಬಡಿಗೇರ್ಸುನಂದಾ ನಿಂಬನಗೌಡರ್ಬಸವರಾಜಸಿಗ್ಗಾಂವಿಮತ್ತು ರಾಜಶೇಖರ ಮಳವಾಡರವರು ಅಹೋರಾತ್ರಿ ಶ್ರಮಿಸಿದ್ದಾರೆದೊಡ್ಡಾಟಕಾರ್ಯಾಗಾರದ ಕೊನೆಯ ದಿನವಾದ ಮೇ 6 ರಂದು ಶಿಬಿರಾರ್ಥಿಗಳಿಂದ .. ಕಿತ್ತೂರು ಚೆನ್ನಮ್ಮಬಯಲಾಟವು ಯಶಸ್ವಿಯಾಗಿ ಪ್ರದರ್ಶನಗೊಂಡಿತು ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳುವಅಗತ್ಯತೆ ಇದೆ
ಬಯಲಾಟದ ಕಾಯಕಲ್ಪ ಕುರಿತ ಒಂದು ಪುಟ್ಟ ಪ್ರಯತ್ನ ಗ್ರಾಮರಂಗ ದಿಂದ ಆರಂಭಗೊಂಡಿದೆ.ಇದು ಒಬ್ಬ ವ್ಯಕ್ತಿ ಅಥವಾ ಒಂದು ತಂಡದಿಂದ ಮಾಡುವ ಕೆಲಸವಲ್ಲಹಲವಾರು ಕ್ರಿಯಾಶೀಲಮನಸುಗಳು ಕೈಜೋಡಿಸಬೇಕುಹಲವಾರು ಆಯಾಮಗಳಲ್ಲಿ   ಪ್ರಾಮಾಣಿಕ ಕೆಲಸಗಳಾಗಬೇಕು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ನಾಟಕ ಅಕಾಡೆಮಿ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿಗಳುಇಂತಹ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವ್ಯಾಪಕವಾಗಿ ರೂಪಿಸಬೇಕುಅದೂ ಆಗದಿದ್ದರೆ ಕೆಲಸ ಮಾಡುವಂತಹ ಉತ್ಸಾಹಿ ರಂಗತಂಡಗಳಿಗೆ ಆರ್ಥಿಕ ನೈತಿಕ ಸಹಕಾರವನ್ನಾದರೂಕೊಡಬೇಕು.  ಜಾನಪದ ಕಲಾ ಪ್ರಕಾರಗಳಲ್ಲಿ ಡಾಕ್ಟರೇಟ್ ಮಾಡಿದಂತಹ ಸ್ಕಾಲರ್ಗಳು ತಮ್ಮಪ್ರತಿಭೆಯನ್ನು ಬಯಲಾಟದ ಕಾಯಕಲ್ಪಕ್ಕೆ ಧಾರೆಯೆರೆಯಬೇಕುಒಟ್ಟಾರೆಯಾಗಿ ನೆಲಮೂಲ ದೇಸಿಸಂಸ್ಕೃತಿಯಾದ ಬಯಲಾಟ ಪರಂಪರೆ ಸಕಾರಾತ್ಮಕವಾಗಿ ಬದಲಾಗಬೇಕುಕಾಲಕ್ಕೆ ತಕ್ಕಂತೆರೂಪಾಂತರಗೊಳ್ಳಬೇಕು ಹಾಗೂ ಮುಂದುವರೆಯಬೇಕು.