ಮಂಗಳವಾರ, ಸೆಪ್ಟೆಂಬರ್ 26, 2017

ಗ್ರಾಮೀಣ ಭಾರತದ ನಿರ್ಲಕ್ಷ್ಯ:ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ


    ಅನುಶಿವಸುಂದರ್
Image result for rural india

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗ್ರಾಮೀಣ ಭಾರತವನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಅದಕಾಗಿ ಅದು ವಿತ್ತೀಯ ಮತ್ತು ರಾಜಕೀಯ ಬೆಲೆಯನ್ನು ತೆರಬೇಕಾಗುತ್ತದೆ.

ರಾಜಸ್ಥಾನದ ರೈತರು ಸತತ ಹೋರಾಟ ನಡೆಸಿ ಅಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರದಿಂದ ೨೦,೦೦೦ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಳೆದ ನಾಲಕ್ಕು ತಿಂಗಳಲ್ಲಿ ರೀತಿ ನಾಲಕ್ಕು ರಾಜ್ಯಗಳು ಸಾಲಮನ್ನಾವನ್ನು ಘೋಷಿಸಿವೆ. ಅಷ್ಟೇ ಅಲ್ಲ. ಇದೇ ಬಗೆಯ ರೈತ ಹೋರಾಟಗಳು ದೇಶದ ಇನ್ನೂ ಹಲವು ಕಡೆ ಹರಡಿಕೊಳ್ಳುವ ಸಾಧ್ಯತೆಗಳಿವೆ. ಇವೆಲ್ಲವೂ ರಾಜ್ಯಗಳಲ್ಲಿ ವಿತ್ತೀಯ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ಸೃಷ್ಟಿಸಲಿವೆ. ಹಾಗಿದ್ದರೆ ಇದು ಬಿಜೆಪಿ ಅತ್ಯಂತ ಹೆಗ್ಗಳಿಕೆಯಿಂದ ಮುಂದುವರೆಸಿದ್ದ ಆರ್ಥಿಕ ಸುಧಾರಣೆ ಕ್ರಮಗಳಿಂದ  ಹಿಂದೆಸರಿಯುವಂತೆ ಮಾಡಬಹುದೇ?

ರಾಜಸ್ಥಾನದ ಶೆಕಾವತ್ ಪ್ರಾಂತ್ಯದ ಸಿಕಾರ್, ಜುನ್ಜುನು ಮತ್ತು ಚುರು ಜಿಲ್ಲೆಯ ರೈತರು ೨೦೧೭ರ ಸೆಪ್ಟೆಂಬರ್ ರಂದು ಸಿಕಾರ್ ನಲ್ಲಿ ಸಭೆ ಸೇರಿ ಅನಿರ್ದಿಷ್ಟ ಧರಣಿಯನ್ನು ಪ್ರಾರಂಭಿಸಿದರು. ನೋಟು ನಿಷೇಧದ ನಂತರದಲ್ಲಿ ಕುಸಿದ ಬೆಲೆಯ ಸಮಸ್ಯೆಗಳನ್ನೂ ಒಳಗೊಂಡಂತೆ ಪ್ರದೇಶದಲ್ಲಿ ಕೃಷಿಯು ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳಿಂದ ರೈತರು ತತ್ತರಿಸಿದ್ದರು, ಹೀಗಾಗಿ ೨೦೧೭ರ ಜೂನ್ನಿಂದಲೇ ಇದರ ಬಗ್ಗೆ ದೊಡ್ಡ ಹೋರಾಟಗಳನ್ನು ನಡೆಸುವ ಹಲವಾರು ಪ್ರಯತ್ನಗಳೂ ಕೂಡ ನಡೆದು ವಿಫಲವಾಗಿದ್ದವು. ಎಂದಿನಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವು ರೈತಾಪಿಯ ಸಮಸ್ಯೆಗಳನ್ನು ಅರಿಯುವ ಗೋಜಿಗೇ ಹೋUಲಿಲ್ಲ. ಬದಲಿಗೆ, ರೈತರ ಪ್ರತಿಭಟನೆಯನ್ನು ಮತ್ತು ಐಕ್ಯತೆಯನ್ನು ಮುರಿಯುವ ಸಂಚುಗಳಲ್ಲಿ ತೊಡಗಿತು. ಆದರೆ ಪ್ರಯತ್ನಗಳನ್ನು ಸಿಪಿಎಂ ಪಕ್ಷದ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್)ನೇತೃತ್ವದಲ್ಲಿ ಗಟ್ಟಿಯಾಗಿ ಮುಂದುವರೆಯುತ್ತಲೇ ಹೋದ ಪ್ರತಿರೋಧವು ವಿಫಲಗೊಳಿಸಿತು. ಬೃಹತ್ ಪ್ರತಿರೋಧದಲ್ಲಿ ಸಾಮಾನ್ಯ ಜನರೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳತೊಡಗಿದರು. ಜನ ಸಾಮಾನ್ಯರುಉದ್ಯಮಿಗಳು, ಜಿಲ್ಲಾ ಕೇಂದ್ರಗಳ ವರ್ತಕರು, ಸಣ್ಣಪುಟ್ಟ ಪಟ್ಟಣಗಳಲ್ಲಿನ ಸೇವಾ ವಲಯದ ಹಲವಾರು ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಬೀದಿಗಿಳಿದರು. ಹಳ್ಳಿ ಮತ್ತು ಪಟ್ಟಣಗಳಲ್ಲಿ ಜನರು ವಿಧಿಸಿದ್ದ ಕರ್ಫ್ಯೂ ಮತ್ತು ಸಂಪೂರ್ಣ ಬಂದ್ಗಳು ಯಶಸ್ವಿಯಾಗಿ ಜಾರಿಯಾಗುವಂತೆ ನೋಡಿಕೊಂಡರು. ವರ್ಷ ದೇಶದ ಇತರೆಡಗಳಲ್ಲಿ ಭುಗಿಲೆದ್ದ ರೈತ ಪ್ರತಿಭಟನೆಗಳಿಗಿಂತ ಭಿನ್ನವಾಗಿ ರಾಜಸ್ಥಾನದ ರೈತ ಹೋರಾಟವನ್ನು ಗ್ರಾಮೀಣ ಸಮಾಜದ ಎಲ್ಲಾ ವರ್ಗಗಳು ಪಾಲ್ಗೊಳ್ಳುವಂತೆ ಸಂಘಟಿಸಲಾಗಿತ್ತು. ಇದು ದೇಶದಲ್ಲಿ ಮುಂದುವರೆಯುತ್ತಲೇ ಇರುವ ಗ್ರಾಮೀಣ ಸಂಕ್ಷೋಭೆಯ ಸರಣಿಯಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಕೂಡಾ ಸೂಚಿಸುತ್ತದೆ.

ಬಿಜೆಪಿಯ ಆರ್ಥಿಕಾ ಸುಧಾರಣ ಕಾರ್ಯಸೂಚಿಯಲ್ಲಿ ಗ್ರಾಮೀಣ ಭಾರತವು  ಚರ್ಚೆಯ ಪ್ರಧಾನ ವಿಷಯವಾಗಿದ್ದು ಬಹಳ ಅಪರೂಪ. ಪಕ್ಷದ ರಾಜಕೀಯ ಚಟುವಟಿಕೆಗಳು ಮೊದಲಿಂದಲೂ ನಗರ ಮತ್ತು ಪಟ್ಟಣಗಳಿಗೆ ಮಾತ್ರ ಸೀಮಿತವಾಗಿತ್ತು. ಮತ್ತು ಈಗಲೂ ದೇಶವ್ಯಾಪಿ ನಗರ ಮತ್ತು ಪಟ್ಟಣಗಳ ಸಣ್ಣ ಮತ್ತು ದೊಡ್ಡ ಬಜಾರುಗಳು ಮತ್ತು ಮಂಡಿಗಳ ಮೇಲೆ ಪ್ರಭಾವ ಬೀರುವಷ್ಟು ಶಕ್ತರಾಗಿರುವ ಬ್ರಾಹ್ಮಣರು ಮತ್ತು ಬನಿಯಾಗಳೇ ಅದರ ಮುಖ್ಯ ಕಾರ್ಯಕರ್ತಗಣದಲ್ಲಿ ಪ್ರಧಾನವಾಗಿದ್ದಾರೆ೨೦೧೪ರ ತನಕ ಗ್ರಾಮೀಣ ಪ್ರದೇಶದಲ್ಲಿ ಅದಕ್ಕೆ ಬಲವಾದ ಬೇರುಗಳಿರಲಿಲ್ಲ. ಆದರೆ ಮೋದಿ ಅಲೆಯಿಂದಾಗಿ ೨೦೧೪ರಲ್ಲಿ ರಾಜಸ್ಥಾನದ ಗ್ರಾಮೀಣ ರೈತಾಪಿಯು ನಿರ್ಣಾಯಕವಾಗಿ ಬಿಜೆಪಿಯ ಪರ ವಾಲಿದರು ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಬೆಂಬಲ ಬಿಜೆಪಿಯ ಕೈ ತಪ್ಪುತ್ತಿರುವಂತಿದೆ. ಪ್ರಾಯಶಃ ಬಿಜೆಪಿಯ ಆರ್ಥಿಕ ಸುಧಾರಣ ಯೋಜನೆಗಳಲ್ಲಿ ಗ್ರಾಮೀಣ ವೆಂಬುದು ಎಂದಿಗೂ ಒಂದು ಅಂತರ್ಗತ ಭಾಗವಾಗದಿರುವುದು ಇದಕ್ಕೆ ಕಾರಣವಾಗಿರಬಹುದು.
ಉದಾರೀಕರಣದ ೨೭ ವರ್ಷಗಳ ನಂತರವೂ ಗ್ರಾಮೀಣ ಅರ್ಥಿಕತೆಯ ಪ್ರಧಾನ ಭಾಗ ಕೃಷಿಯೇ ಆಗಿದೆ. ಆರ್ಥಿಕತೆಯ ಮೂಲಭೂತ ಬದಲಾವಣೆಗಳು ದೇಶದ ಶ್ರಮಶಕ್ತಿಯ ಸ್ವರೂಪದಲ್ಲಿ ಯಾವ ಬದಲಾವಣೆಗಳನ್ನು ತಂದಿಲ್ಲ. ದೇಶದ ಶ್ರಮಶಕ್ತಿಯ ಶೇ.೬೦ ಭಾಗ ಕೃಷಿಯಲ್ಲಿ ತೊಡಗಿದ್ದರೂ, ಒಟ್ಟಾರೆ ಅಂತರಿಕ ಉತ್ಪನ್ನದಲ್ಲಿ ಕೃಷಿಯ ಭಾಗ ಕೇವಲ ಶೇ.೧೫ ಮಾತ್ರ. ಕೃಷಿಯೇತರ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗದಿರುವುದು, ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಾಗದಿರುವುದು ಮತ್ತು ಬಡವರ ಕಲ್ಯಾಣ ಯೋಜನೆಗಳ ಮೇಲಿನ ವೆಚ್ಚ ದಿನೇದಿನೇ ಕಡಿಮೆಯಾಗುತ್ತಿರುವುದರಿಂದ ಕೊಟ್ಯಾಂತರ ಶ್ರಮಜೀವಿಗಳು ಕೃಷಿ ಮತ್ತು ಕೃಷಿಯಾಧಾರಿತ ಸೇವೆಗಳಲ್ಲೇ ಬಂಧಿತರಾಗಿದ್ದಾರೆ. ಹೀಗಾಗಿ ಕೃಷಿಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಇಡೀ ಗ್ರಾಮೀಣ ಆರ್ಥಿಕತೆಯನ್ನೇ ನಿರ್ಲಕ್ಷ್ಯ ಮಾಡಿದಂತಾಗಿದೆ.

ಬಿಜೆಪಿಯ ಇತ್ತೀಚಿನ ಮೂರು ನೀತಿಗಳಾದ ಗೋಹತ್ಯಾ ನಿಷೇಧ, ನೋಟು ನಿಷೇಧ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ)ಗಳು ರೈತಾಪಿಯನ್ನು ಮತ್ತು ಗ್ರಾಮೀಣ ಆರ್ಥಿಕತೆಯನ್ನು ನೇರವಾಗಿ ಘಾಸಿಗೊಳಿಸಿದೆ. ನೋಟು ನಿಷೇಧವು ಗ್ರಾಮೀಣ ಮಾರುಕಟ್ಟೆ ಮತ್ತು ರೈತಾಪಿಯ ಚಲನೆಗೆ ಅತ್ಯಗತ್ಯವಾಗಿ ಬೇಕಾಗಿದ್ದ ಚಾಲ್ತಿ ನಗದನ್ನೇ ನಾಶಮಾಡಿತು. ಹೀಗಾಗಿ ಬಂಪರ್ ಬೆಳೆ ಬಂದ ವರ್ಷದಲ್ಲೂ ಬೆಲೆ ಕುಸಿತ ಉಂಟಾಗಿದ್ದರಿಂದ ರೈತಾಪಿಯ ಆದಾಯ ಕುಸಿಯಿತು. ಅದು ಮುಂದಿನ ಬೆಳೆಗೆ ಬಿತ್ತನೆಯನ್ನೂ ಮಾಡದ ಪರಿಸ್ಥಿತಿಗೆ ರೈತಾಪಿಯನ್ನು ದೂಡಿತು. ವಿದ್ಯಮಾನವೇ ದೇಶಾದ್ಯಂತ ರೈತಾಪಿಯು ಸಾಲಮನ್ನ ಮಾಡಬೇಕೆಂದು ಮಾಡುತ್ತಿರುವ ಒಕ್ಕೊರಲ ಬೇಡಿಕೆಗೆ ಕಾರಣವನ್ನು ವಿವರಿಸುತ್ತದೆ. ಹಾಗೆ ನೋಡಿದರೆ, ಸಾಲಮನ್ನವು ಮುಂದಿನ ಬೆಳೆಗೆ ಸಾಲ ತೆಗೆದುಕೊಳ್ಳಲು ರೈತಾಪಿಯನ್ನು ಅರ್ಹಗೊಳಿಸುತ್ತದಷ್ಟೆ. ಎರಡನೆಯದಾಗಿ, ಬಿಕ್ಕಟ್ಟಿನ ಕಾಲದಲ್ಲಿ ತಮ್ಮಲ್ಲಿರುವ ಜಾನುವಾರುಗಳನ್ನು ಮಾರುವ ಮೂಲಕ ರೈತಾಪಿ ತಮ್ಮ ತುರ್ತು ಬಿಕ್ಕಟ್ಟುಗಳಿಂದ ಪಾರಾಗುತ್ತಾರೆ. ಆದರೆ, ಜಾನುವಾರು ಹತ್ಯಾ ಮತ್ತು ಗೋ ಮಾಂಸ ಮಾರಾಟ ನಿಷೇಧಗಳು ಹಾಗೂ ಗೋ ರಕ್ಷಣೆಯ ಹೆಸರಿನಲ್ಲಿ ಪುಂಡಾಟಿಕೆ ಮತ್ತು ಹಿಂಸಾಚಾರಗಳನ್ನು ನಡೆಸುವವರ ಹಾವಳಿಯಿಂದಾಗಿ ಮಾರುಕಟ್ಟೆಯೇ ಸಂಪೂರ್ಣವಾಗಿ ಕುಸಿದು ಬೀಳುವಂತಾಯಿತು. ಜಾನುವಾರುಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಬೀಡಾಡಿ ಹಸು- ದನಗಳ ಸಂಖ್ಯೆ  ಹೆಚ್ಚುತ್ತಿದ್ದು ಅವು ರೈತರ ಬೆಳೆಯನ್ನೂ ನಾಶಮಾಡುತ್ತಿವೆ. ಇದನ್ನು ನಿಯಂತ್ರಿಸಬೇಕೆಂಬುದು ಸಹ ರಾಜಸ್ಥಾನದ ರೈತರ ಬೇಡಿಕೆಗಳಲ್ಲಿ ಒಂದಾಗಿತ್ತು. ಮೂರನೆಯದಾಗಿ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್ಟಿ) ಸಣ್ಣ ಉತ್ಪಾದಕರು ಮತ್ತು ಸೇವಾ ಪೂರೈಕೆದಾರರ ಭವಿಷ್ಯಕ್ಕೆ ದೊಡ್ಡ ಪೆಟ್ಟುಕೊಟ್ಟಿದ್ದು ರೈತಾಪಿಯ ಹೊರಾಟಕ್ಕೆ ಮತ್ತಷ್ಟು ಬೆಂಬಲ ಹರಿದು ಬರುವಂತಾಯಿತು. ಅಷ್ಟು ಮಾತ್ರವಲ್ಲದೆ ಜಿಎಸ್ಟಿಯಿಂದ ರೈತಾಪಿಯ ಹೂಡಿಕಾ ವೆಚ್ಚವೂ ಹೆಚ್ಚಾಗಲಿದೆ. ಸದ್ಯಕ್ಕೆ ಮೂರೂ ತಥಾಕಥಿತ ಸುಧಾರಣೆಗಳ ಬಗ್ಗೆ ಸಾರ್ವಜನಿಕ ಚರ್ಚೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಂತೆ ಕಾಣುತ್ತಿದ್ದರೂ ವಾಸ್ತವದಲ್ಲಿ ಅದರಿಂದ ಉಂಟಾಗುತ್ತಿರುವ ಪರಿಣಾಮಗಳು ಗ್ರಹಿಕೆಗಳನ್ನು ಬಹಳ ಬೇಗ ಬದಲಿಸಲಿವೆ.

ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಘೋಷಿಸಲಾಗಿರುವ ಸಾಲಮನ್ನಾಗಳು ಆಯಾ ವಿಧಾನಸಭಾ ಚುನಾವಣೆಗಳಲ್ಲಿ ನೀಡಲಾದ ಭರವಸೆಗಳ ಭಾಗವಾಗಿ ಜಾರಿಗೆ ಬಂದ ಯೋಜನೆಗಳಾಗಿವೆ. ಅವುಗಳನ್ನು ಹೊರತುಪಡಿಸಿ ನೋಡಿದಲ್ಲಿ, ಗ್ರಾಮೀಣ-ಕೃಷಿ ಪ್ರತಿರೋಧದ ಅಲೆಯನ್ನು ಸಂಘಟಿಸಿ ಪ್ರತಿನಿಧಿಸಿದ ಏಕೈಕ ವಿರೋಧ ಪಕ್ಷವೆಂದರೆ ಸಿಪಿಎಂ ಪಕ್ಷವಾಗಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ನಡೆದ ಸಾಮೂಹಿಕ ಧರಣಿಗಳು, ರೂಪಿಸಲಾದ ಹಕ್ಕೊತ್ತಾಯಗಳು, ಸರ್ಕಾರದೊಂದೊಗೆ ನಡೆಸಿದ ಮಾತುಕತೆಗಳಲ್ಲಿ ಆಲ್ ಇಂಡಿಯಾ ಕಿಸಾನ್ ಸಭ (ಎಐಕೆಎಸ್) ಮುಂಚೂಣಿಯಲ್ಲಿದ್ದು, ಇದೀಗ ಹರ್ಯಾಣದಲ್ಲೂ ಹೋರಾಟವನ್ನು ಮುನ್ನೆಡೆಸಲು ಅಣಿಯಾಗುತ್ತಿದೆ. ಅಸಂಘಟಿತ ಮತ್ತು ಅನೌಪಚಾರಿಕ ಉದ್ಯೋಗಗಳ ಯುಗದಲ್ಲಿ ಸಾಂಪ್ರದಾಯಿಕ ಟ್ರೇಡ್ ಯೂನಿಯನ್ ಹೋರಾಟಗಳು ಗರಿಗೆದರುತ್ತಾ ಕಾರ್ಮಿಕ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಬಗ್ಗಿಸಿರುವ ಪರಿ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಹೋರಾಟಗಳನ್ನು ರಾಜಕೀಯ ಗಳಿಕೆಯಾಗಿ ಪರಿವರ್ತಿಸಿಕೊಂಡು ಕುಸಿಯುತ್ತಲೇ ಇರುವ ತನ್ನ ಚುನಾವಣಾ ಸಾಧನೆಗಳನ್ನು ಉತ್ತಮಪಡಿಸಿಕೊಳ್ಳುವುದು ಹೇಗೆ ಎಂಬುದೇ ಇಂದು ಎಡಪಕ್ಷಗಳ ಮುಂದಿರುವ ಸವಾಲಾಗಿದೆ. ಮತ್ತೊಂದುಕಡೆ  ತನ್ನ ನವ ಭಾರತ ಪರಿಪ್ರೇಕ್ಷ್ಯದಲ್ಲಿ ಗ್ರಾಮೀಣವನ್ನು ಹೇಗೆ ಒಳಗೊಳ್ಳುವುದು ಎಂಬುದೇ ಬಿಜೆಪಿಯ ಮುಂದಿರುವ ಸವಾಲಾಗಿದೆ

ಕೃಪೆ:        Economic and Political Weekly, Sep 23, 2017. Vol. 52. No. 38
                                                                                                            

                               







ಚಿಕ್ಕಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವುದು ಹೇಗೆ?


            ಅನುಶಿವಸುಂದರ್
Image result for Children deserve safety

ಶಾಲೆಗಳಲ್ಲಿ ಚಿಕ್ಕಮಕ್ಕಳು ಎದುರಿಸುತ್ತಿರುವ ಲೈಂಗಿಕ ಕಿರುಕುಳಗಳು ಮಕ್ಕಳ ರಕ್ಷಣಾ ಕಾನೂನುಗಳಲ್ಲಿರುವ ಲೋಪದೋಷಗಳನ್ನು ಬಯಲುಮಾಡಿದೆ.

ಹರ್ಯಾಣದ ಗುರುಗ್ರಾಮದ ಮೇಲ್ವರ್ಗದ ರಯಾನ್ ಅಂತರರಾಷ್ಟ್ರೀಯ ಶಾಲೆಯ ಶೌಚಾಲಯದಲ್ಲಿ ೨೦೧೭ರ ಸೆಪ್ಟೆಂಬರ್ ರಂದು ಏಳು ವರ್ಷದ ಬಾಲಕನೊಬ್ಬಳ ಹೆಣ ಪತ್ತೆಯಾಯಿತು. ನಂತರ ಪೊಲೀಸರು ಶಾಲೆಯ ಬಸ್ ಕಂಡಕ್ಟರ್ನನ್ನು ಬಂಧಿಸಿದರು. ತನ್ನೊಡನೆ ಸಲಿಂಗ ಕಾಮಕೇಳಿ ಮಾಡಲು ವಿರೋಧ ವ್ಯಕ್ತಪಡಿಸಿದ್ದರಿಂದ ಕಂಡಕ್ಟರೇ ಬಾಲಕನನ್ನು ಕೊಂದನೆಂಬ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಪ್ರಕರಣದ ಬಗ್ಗೆ ಮುಂದುವರೆದಿರುವ ತನಿಖೆಯು ಶಾಲಾ ಆವರಣದಲ್ಲಿ ಸಂಭವಿಸಿರುವ ಗಂಭೀರ ಭದ್ರತಾ ವೈಫಲ್ಯಗಳನ್ನು, ವಿಷಯದಲ್ಲಿ ಶಾಲೆ ಮತ್ತು ಶಿಕ್ಷಕರಿಗೆ ಉತ್ತರದಾಯಿತ್ವವೇ ಇಲ್ಲದಿರುವುದನ್ನೂ, ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಬಗ್ಗೆ ಇರುವ ಸಾಂವಿಧಾನಿಕ ಕ್ರಮಗಳನ್ನು ಎತ್ತಿಹಿಡಿಯುವುದರಲ್ಲಿ ಸರ್ಕಾರದ ವೈಫಲ್ಯತೆಯನ್ನು ಬಯಲುಮಾಡಿದೆ

ನಗರದ ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸಾಚಾರದ ಪ್ರಕರಣಗಳು ಸತತವಾಗಿ ಬೆಳಕಿಗೆ ಬರುತ್ತಿದ್ದು ಅದರಲ್ಲಿ ಗುರುಗ್ರಾಮದ ಪ್ರಕರಣವು ಇತ್ತೀಚಿನ ಸೇರ್ಪಡೆಯಷ್ಟೆ. ಇಂಥಾ ಪ್ರಕರಣಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಹಿಂಸಾಚಾರಕ್ಕೆ ಬಲಿಯಾಗುತ್ತಿರುವುದು ಗಮನಿಸಬೇಕಾದ ವಿಷಯವಾಗಿದೆ. ಹೀಗಾಗಿ ಇದಕ್ಕೆ ಪರಿಹಾರವಿರುವುದು ಮಕ್ಕಳ ರಕ್ಷಣೆಯ ವ್ಯವಸ್ಥೆಯಲ್ಲಿ ಮೂಲಭೂತ ಮಾರ್ಪಾಡುಗಳನ್ನು ತರುವುದರಲ್ಲೇ ವಿನಃ ಲಿಂಗಾಧಾರಿತವಾಗಿ ನಿಗಾ- ಉಸ್ತುವಾರಿಯನ್ನು ಹೆಚ್ಚು ಮಾಡುವುದರಿಂದಲ್ಲ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ನೀಡಿರುವ ಅಂಕಿಅಂಶಗಳ ಪ್ರಕಾರ  ಲೈಂಗಿಕ ಕಿರುಕುಳದಿಂದ ಮಕಳ್ಳನು ರಕ್ಷಿಸುವ ಕಾಯಿದೆ (ಪೋಕ್ಸ)ದಡಿಯಲ್ಲಿ ದಾಖಲಾಗಿರುವ ಅಪರಾಧಗಳ ಸಂಖ್ಯೆ ೨೦೧೪ ಮತ್ತು ೨೦೧೫ರ ನಡುವೆ ೮೯೦೪ರಿಂದ ೧೪೯೧೩ಕ್ಕೇರಿದೆ. ಮಕ್ಕಳ ಮೇಲಿನ ಹಿಂಸಾಚಾರಗಳ ಬಗ್ಗೆ ೨೦೦೭ರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಮೂವರಲ್ಲಿ ಇಬ್ಬರು ಮಕ್ಕಳು ದೈಹಿಕ ಹಿಂಸಾಚಾರಕ್ಕೆ ತುತ್ತಾಗುತ್ತಾರೆ; ಶೇ.೫೩.೨೨ ಮಕ್ಕಳು ಒಂದಲ್ಲ ಒಂದು ಬಗೆಯ ಅಥವಾ ಒಂದಕ್ಕಿಂತ ಹೆಚ್ಚಿನ ರೂಪದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದರು; ಅಧ್ಯಯನದ ಭಾಗವಾಗಿ ಸಂದರ್ಶಿಸಲಾದ ೧೨,೦೦೦ ಮಕ್ಕಳಲ್ಲಿ ಶೇ. ೫೦ ರಷ್ಟು ಮಕ್ಕಳು ಶಾಲಾ ಆವರಣದಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದರು; ಅಧ್ಯಯನ ನಡೆಸಲಾದ ೧೩ ರಾಜ್ಯಗಳಲ್ಲಿ ದೈಹಿಕ ಕಿರುಕುಳಕ್ಕೆ ತುತ್ತಾಗಿದ್ದ ಶೇ. ೬೯ರಷ್ಟು ಮಕ್ಕಳಲ್ಲಿ ಶೇ.೫೪.೬೮ರಷ್ಟು ಜನ ಹುಡುಗರಾಗಿದ್ದರು; ಮತ್ತು ಬಹಳಷ್ಟು ಮಕ್ಕಳು ವಿಷಯವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ೨೦೧೫ರ ಜುಲೈನಲ್ಲಿ ಪ್ರಕಟವಾದ ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯೂನಿಸೆಫ್) ವರದಿಯೂ ಸಹ ಮಕ್ಕಳು ಎದಿರಿಸುತ್ತಿರುವ ಬಿಕ್ಕಟ್ಟನ್ನು ಎತ್ತಿ ತೋರಿಸಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಮಕ್ಕಳ ರಕ್ಷಣ ಯೋಜನೆಯು (ಐಸಿಪಿಎಸ್) ಮಕ್ಕಳ ಜೀವ, ವ್ಯಕ್ತಿತ್ವ ಮತ್ತು ಬಾಲ್ಯಗಳ ಬಗ್ಗೆ ಇರುವ  ಯಾವುದೇ ನೈಜ ಅಥವಾ ಸಂಭಾವ್ಯ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತಾಗಿ ಹೇಳಿಕೊಳ್ಳುತ್ತದೆ. ಸಮುದಾಯ, ಸರ್ಕಾರ ಮತ್ತು ನಾಗರಿಕ ಸಮಾಜಗಳ ಬೆಂಬಲದೊಂದಿಗೆ ಕುಟುಂಬವು ತನ್ನ  ಮಕ್ಕಳ ರಕ್ಷಣೆಯನ್ನು ಮಾಡಬೇಕಿರುತ್ತದೆ. ಶಾಲೆಗಳು ಸಹಕಾರ ಜಾಲದ ಮುಖ್ಯ ಕೊಂಡಿಯಾಗಿವೆ. ಮಕ್ಕಳು ತಮ್ಮ ದಿನದ ಮತ್ತು ಬಾಲ್ಯದ ಅರ್ಧ ಭಾಗವನ್ನು ಶಾಲೆಯ ಪರಿಸರದಲ್ಲೇ ಕಳೆಯುತ್ತಾರೆ. ಆದರೂ ಒಂದು ಸಂಸ್ಥೆಯಾಗಿ ಶಾಲೆಗಳನ್ನು ಈವರೆಗೆ ಮಕ್ಕಳ ರಕ್ಷಣೆಗೆ ಉತ್ತರದಾಯಿಗಳನ್ನಾಗಿ ಮಾಡಲಾಗಿಲ್ಲ.

ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾನುನುಗಳಲ್ಲಿ ಶಾಲೆಗಳ ಪಾತ್ರದ ಬಗ್ಗೆ ಇರುವ ಗೊಂದಲವು ಒಂದು ಪ್ರಧಾನ ಸಮಸ್ಯೆಯೇ ಆಗಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಪಠ್ಯ ಮತ್ತು ಸೌಕರ್ಯಗಳನ್ನು ಒದಗಿಸುವಲ್ಲಿ ಶಾಲೆಗಳ ಪಾತ್ರದ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ತಡೆಯೊಡ್ಡುತ್ತಿರುವ ಬಗ್ಗೆಯಾಗಲೀ, ಅದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯಾಗಲೀ ಯಾವುದೇ ಪ್ರಸ್ತಾಪಗಳನ್ನು ಮಾಡಿಲ್ಲ. ಮತ್ತೊಂದು ಕಡೆ ಪೋಕ್ಸಾ ಕಾಯಿದೆಯು ನೇರವಾಗಿ ಶಾಲೆಗಳ ಬಗ್ಗೆಯಾಗಲಿ ಅವುಗಳ ಆಡಳಿತ ಮಂಡಳಿಗಳ ಬಗ್ಗೆಯಾಗಲೀ ನೇರ ಪ್ರಸ್ತಾಪವನ್ನು ಮಾಡುವುದಿಲ್ಲ. ಬದಲಿಗೆ ಮಕ್ಕಳ ಆರೋಗ್ಯಕರ ದೈಹಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಗಳನ್ನು ಖಾತರಿಗೊಳಿಸಬೇಕಾದ ಅಗತ್ಯಗಳ ಬಗ್ಗೆ ಮತ್ತು ಅದಕ್ಕೆ ಅಡ್ಡಿ ಮಾಡುವ ಅಪರಾಧಿಗಳ ವಿರುದ್ಧ ಶಿಕ್ಷಾ ಕ್ರಮಗಳನ್ನು ಜರುಗಿಸುವ ಬಗ್ಗೆ ಅಮೂರ್ತವಾಗಿ ಮಾತನಾಡುತ್ತದೆ. ಮಕ್ಕಳ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯಿದೆಯುಅನಾಥ, ಕಳೆದುಹೋದ ಮತ್ತು ಪರಿತ್ಯಕ್ತ ಮತ್ತು ದುರ್ಬಳಕೆ ಮತ್ತು ನಿರ್ಲಕ್ಷ್ಯಕ್ಕೀಡಾದ ಮಕ್ಕಳನ್ನು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳೆಂಬ ಶೀರ್ಷಿಕೆಂiಡಿಯಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಆದರೆ ಕಾಯಿದೆಯೂ ಸಹ ನಿಗದಿಯಾದ ಬಾಲ ಕೇಂದ್ರಗಳಿಗೆ ಅಥವಾ ಆರೈಕೆ ಕೇಂದ್ರಗಳಿಗೆ ಮಕ್ಕಳನ್ನು ಪುನರ್ವಸತಿಗಾಗಿ ಕಳಿಸಬೇಕಾಗುವಷ್ಟು ಹಿಂಸೆ ಮತ್ತು ವಂಚನೆಗಳ ಅತಿರೇಕಕ್ಕೆ ಗುರಿಯಾದ ಪ್ರಕರಣಗಳನ್ನು ಮಾತ್ರ ಪರಿಗಣಿಸುತ್ತದೆ. ಕಾಯಿದೆಯೂ ಸಹ ಶಾಲೆಗಳೂ ಸಹ ಮಕ್ಕಳಾ ಆರೈಕೆಯ ಬಗ್ಗೆ ಜವಾಬ್ದಾರಿ ಹೊಂದಿರಬೇಕಾದ ಒಂದು ಕೇಂದ್ರವೆಂದು ಪರಿಗಣಿಸುವುದಿಲ್ಲ.

ರಯಾನ್ ಶಾಲೆಯಂಥ ಪ್ರತಿಷ್ಟಿತ ಶಾಲೆಯಲ್ಲಿ ಇಂಥಾ ಪ್ರಕರಣವು ನಡೆದಿರುವುದರಿಂದ ತುಂಬಾ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಕ್ಕಳ ಹಕ್ಕುಗಳ ಬಗೆಗಿನ ಚರ್ಚೆಗಳು ಒಂದಷ್ಟು ತ್ವರಿತಗತಿಯನ್ನು ಪಡೆದುಕೊಂಡಿರುವುದು ನಿಜವಾದರೂ ಇನ್ನೂ ಬಹಳಷ್ಟು ಆಗಬೇಕಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್ಸಿಇಆರ್ಟಿ) ನಿರ್ದೇಶಕರ ಹೇಳಿಕೆಯ ಪ್ರಕಾರ ವಿಭಿನ್ನ ಬಗೆಯ ಮಕ್ಕಳ ಮೇಲಿನ ಕಿರುಕುಳಗಳ ಕುರಿತು ಮತ್ತು ಅದನ್ನು ಶಾಲಾ ಪರಿಸರದಲ್ಲಿ ಹೇಗೆ ತಡೆಯಬಹುದೆಂಬುದರ ಕುರಿತು ಶೈಕ್ಷಣಿಕ ಅಂಶಗಳನ್ನು ಸೇರಿಸುವ ಪ್ರಸ್ತಾಪವಿದೆ. ನೊಬೆಲ್ ಪ್ರಶಸ್ತಿ ವಿಜೇತರಾದ ಕೈಲಾಶ್ ಸತ್ಯಾರ್ಥಿಯವರು ಮಕ್ಕಳ ಮೇಲಿನ ಕಿರುಕುಳದ ಬಗ್ಗೆ ಅರಿವನ್ನು ಮೂಡಿಸಲು ಭಾರತ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಹರ್ಯಾಣದಲ್ಲಿ ಇನ್ನು ಮುಂದೆ ಶಾಲೆಗೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಮುನ್ನ ಪೊಲೀಸ್ ಪರಿಶೀಲನೆಗೆ ಒಳಗಾಗುವುದು ಕಡ್ಡಾಂi. ಹಾಗೂ ಅಲ್ಲಿ ಪ್ರತಿಶಾಲೆಗಳಲ್ಲೂ ಮಕ್ಕಳ ಸುರಕ್ಷಾ ಸಮಿತಿಗಳನ್ನು ನೇಮಿಸಲಾಗುತ್ತಿದೆ ಮತ್ತು ಇಡೀ ಶಾಲಾ ಪರಿಸರದ ಮೇಲೆ ನಿಗಾ ಇಡುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಮಕ್ಕಳಿಗೆ ಸುರಕ್ಷಿತ ಪ್ರಯಾಣ ಸೌಲಭ್ಯವನ್ನು ಖಾತರಿಗೊಳಿಸಲಾಗುತ್ತಿದೆ. ಇವೆಲ್ಲಾ ಮಾಡಲೇ ಬೇಕಾದ ಪ್ರಾಥಮಿಕ ಕ್ರಮಗಳಾದರೂ ಅಷ್ಟೆ ಸಾಲುವುದಿಲ್ಲ.ಉತ್ತಮ ತಂತ್ರಜ್ನಾನದ ಬಳಕೆ ಮತ್ತು ಉಸ್ತುವಾರಿಗಳ ಜೊತೆಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆ ಶಾಲೆಗಳನ್ನು ಉತ್ತರದಾಯಿಗಳನ್ನಾಗಿ ಮಾಡಬಲ್ಲ ಕಾನೂನಿನ ಅವಶ್ಯಕತೆಯಿದೆ.

ಅಂತಿಮವಾಗಿ ಹೇಳುವುದಾದರೆ, ಮಕ್ಕಳನ್ನು ಕೇವಲ ಮೂಲಭೂತ ಸೌಕರ್ಯಗಳಿಂದ ಮತ್ತು ಶಿಕ್ಷಣದಿಂದಲೇ ರಕ್ಷಿಸಲು ಸಾಧ್ಯವಿಲ್ಲ. ಪ್ರಭುತ್ವವು ಎಲ್ಲಾ ಮಕ್ಕಳ ಪೋಷಕರ ಪಾತ್ರವನ್ನು ವಹಿಸಲೇಬೇಕು. ಹೆಚ್ಚೆಚ್ಚು ಮಕ್ಕಳು ಶಾಲೆಗಳಿಗೆ ಅದರಲ್ಲೂ ಖಾಸಗಿ ಶಾಲೆಗಳಿಗೆ ನೊಂದಾಯಿಸಿಕೊಳ್ಳುತ್ತಿರುವಾಗ ಮತ್ತು ಖಾಸಗಿ ಶಾಲೆಗಳೆಂಬುದು ಉತ್ತಮ ಉದ್ಯಮವೂ ಆಗುತ್ತಿರುವ ಹೊತ್ತಿನಲ್ಲಿ ಮಕ್ಕಳ ಸುರಕ್ಷೆಯ ಬಗ್ಗೆ ಶಾಲೆಗಳ, ಉಪಾಧ್ಯಾಯರ ಮತ್ತು ಪೋಷಕರ ಪಾತ್ರಗಳನ್ನು ಮಕ್ಕಳ ಹಕ್ಕುಗಳ ಕಾಯಿದೆಯಲ್ಲಿ ಸ್ಪಷ್ಟವಾಗಿ ನಿಗದಿಪಡಿಸುವ ಅಗತ್ಯವಿದೆ. ಯಾವುದೇ ವರ್ಗಕ್ಕೇ ಸೇರಿದ ಮಕ್ಕಳಗಾಲಿ, ಯಾವುದೇ ನಗರ, ಪಟ್ಟಣ ಅಥವಾ ಹಳ್ಳಿಗಳಿಗೆ ಸೇರಿದ ಮಕ್ಕಳಾಗಲೀ, ಪ್ರತಿಯೊಂದು ಮಗುವಿಗೂ ಶಾಲೆಯಲ್ಲಿ, ಮನೆಯಲ್ಲಿ ಮತ್ತು ಪ್ರಯಾಣದ ಸಂದರ್ಭದಲ್ಲಿ ಸುರಕ್ಷಿತವಾದ, ಹಿಂಸಾಮುಕ್ತವಾದ ಮತ್ತು ಕಲಿಕೆಗೆ ಪೂರಕವಾದ ವಾತಾವರಣವನ್ನು ಒದಗಿಸುವ ಅಗತ್ಯವಿದ್ದೇ ಇದೆ.

  ಕೃಪೆ: Economic and Political Weekly, Sep 23, 2017. Vol. 52. No. 38