ಬುಧವಾರ, ಅಕ್ಟೋಬರ್ 18, 2017

ಬಿಟಿ ಹತ್ತಿ ಪರಿಣಾಮ: ವಿಷತುಂಬಿಕೊಂಡಿರುವ ಹೊಲಗದ್ದೆಗಳು


 ಅನುಶಿವಸುಂದರ್
ವಿಷಪೂರಿತವಾದ ಮತ್ತು ಅನಿಯಂತ್ರಿತ ಕ್ರಿಮಿನಾಶಕಗಳ ಬಳಕೆಯು ರೈತರನ್ನೂ ಮತ್ತು ಕಾರ್ಮಿಕರನ್ನೂ ಕೊಲ್ಲುತ್ತಿದೆ.

Image result for Vidarbha suicides of farmers

ಕಳೆದ ೧೬ ವರ್ಷಗಳಲ್ಲಿ ಮಹಾರಾಷ್ಟ್ರದ ವಿದರ್ಭ ಪ್ರದೇಶವು ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವುದು ಮಾತ್ರವಲ್ಲದೆ ಅತ್ಯಂತ ಗಂಭೀರವಾದ ಕೃಷಿ ಬಿಕ್ಕಟ್ಟನ್ನೂ ಎದುರಿಸುತ್ತಿದೆ. ಹೀಗಾಗಿ ಪ್ರಾಂತ್ಯದ ಆರು ಜಿಲ್ಲೆಗಳಲ್ಲಿ ೧೪,೦೦೦ ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಷದ ಜುಲೈ ತಿಂಗಳಿಂದ ಯಾವತ್ಮಲ್ ಮತ್ತಿತರ ಪ್ರದೇಶಗಳಲ್ಲಿ ಒಂದು ಹೊಸ ಬಗೆಯ ಸಮಸ್ಯೆಯು ತಲೆದೋರಿದೆ. ಪ್ರದೇಶದ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರು ವಿಷಕಾರಿ ಕ್ರಿಮಿನಾಶಕಗಳ ಸೇವನೆಯ ಗುಣಲಕ್ಷಣದಿಂದಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಆದರೆ ಕಳೆದ ಆಗಸ್ಟ್ನಲ್ಲಿ ಇದೇ ಕಾರಣದಿಂದಾಗಿ ೧೯ ಜನರು ಸತ್ತದ್ದು ವರದಿಯಾಗುವ ತನಕ ವಿದ್ಯಮಾನ ಸರ್ಕಾರದ ಅಥವಾ ಮಾಧ್ಯಮಗಳ ಗಮನವನ್ನು ಸೆಳೆದಿರಲಿಲ್ಲ. ರೈತರ ಆತ್ಮಹತ್ಯೆಗಳ ಬಗ್ಗೆ ಜನರಲ್ಲಿ ಹುಟ್ಟಿದ್ದ ಆಕ್ರೋಶ ಮತ್ತು ಪ್ರದೇಶದ ಕೃಷಿಯ ಪರಿಸ್ಥಿತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರದೇಶದ ಬಗ್ಗೆ ಇನ್ನೂ ಹೆಚ್ಚು ಜಾಗರೂಕರಾಗಿರುವಂತೆಯೂ ಮತ್ತು ಇಂಥಾ ಘಟನೆಗಳು ನಡೆಯದಂತೆ ಎಚ್ಚರದಿಂದಿರುವಂತೆಯೂ ಮಾಡಬೇಕಿತ್ತು. ಕಳೆದ ಕೆಲವು ವರ್ಷಗಳ ಹಿಂದೆಯೇ ವಿಷಯುಕ್ತ ಕ್ರಿಮಿನಾಶಕಗಳ ಬಗ್ಗೆ ಸೂಚನೆಗಳು ದೊರೆತಿತ್ತು. ಆಗಲೇ ಸರ್ಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಯಾವತ್ಮಲ್ಲಿನ ೧೯ ರೈತರನ್ನು ಒಳಗೊಂಡಂತೆ ಒಟ್ಟಾರೆಯಾಗಿ ೩೦ ರೈತರು ಈಗಾಗಲೇ ಇದರಿಂದ ಸಾವಿಗೀಡಾಗಿದ್ದಾರೆ. ಇದು ಕ್ರಿಮಿನಾಶಕಗಳ ನಿಯಂತ್ರಣದ ಬಗ್ಗೆ ಮತ್ತು ಅದರ ಬಳಕೆಯ ಬಗ್ಗೆ ನಿಕಟ ಉಸ್ತುವಾರಿ ಮಾಡುವ ಅಗತ್ಯವನ್ನು ಎತ್ತಿತೋರಿಸಿದೆ.
Image result for Vidarbha suicides of farmers

೨೦೦೨ರಿಂದ ಭಾರತದಲ್ಲಿ ಬಿಟಿ ಹತ್ತಿಯನ್ನು ಬೆಳೆಯಲು ಅನುಮತಿ ನೀಡಲಾಯಿತು. ಆದರೆ ಯಾವುದೇ ಮೇಲ್ಮೈ ನೀರಾವರಿ ವ್ಯವಸ್ಥೆ ಇಲ್ಲದ ಮತ್ತು ಸವಕಲಾದ ಮಣ್ಣಿರುವ ವಿದರ್ಭದಲ್ಲೂ ಬಿಟಿ ಹತ್ತಿಯನ್ನು ಬೆಳೆಯಲು ರೈತರು ಪ್ರಾರಂಭಿಸಿದರು. ಕಳೆದ ವರ್ಷ ಒಳ್ಳೆಯ ಬೆಲೆ ದೊರೆತದ್ದನ್ನು ನೋಡಿ ವರ್ಷ ವಿದರ್ಭದ ರೈತರು ೧೬ ರಿಂದ ೧೭ ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿಟಿ ಹತ್ತಿಯನ್ನು ಬಿತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದರ್ಭವನ್ನೂ ಒಳಗೊಂಡಂತೆ ಭಾರತದ ಹಲವಾರು ಭಾಗಗಳಲ್ಲಿ ಕೀಟ ಮತ್ತು ಕ್ರಿಮಿಗಳ ಬಾಧೆ ಹೆಚ್ಚಿದೆ, ಹಾಗೂ ಹಸಿರು ಮತ್ತು ಗುಲಾಬಿ ಬೋಲ್ವರ್ಮ್ ಕೀಟಗಳು ಕೀಟನಾಶಕಗಳ ವಿರುದ್ಧ ಪ್ರತಿರೋಧ  ಶಕ್ತಿಯನ್ನು ಬೆಳೆಸಿಕೊಂಡಿವೆ. ಇದಲ್ಲದೆ ದ್ವಿತೀಯ ಹಂತದ ಕೀಟಗಳ ಧಾಳಿಯೂ ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಟಿ ಹತ್ತಿಯ ಸಾಮರ್ಥ್ಯವು ಕುಗ್ಗಿದ್ದು ಕೀಟಗಳು ಮತ್ತು ಗುಲಾಬಿ ಬೋಲ್ವರ್ಮ್ಗಳು ಬೋಲ್ಗಾರ್ಡ್-೨ನ್ನು ನಾಶಮಾಡಿವೆ. ಗುಲಾಬಿ ಬೋಲ್ವರ್ಮ್ಗಳು ೨೦೦೯ರಲ್ಲೇ ಬೋಲ್ಗಾರ್ಡ್ ಕ್ಕೆ ಪ್ರತಿರೋಧವನ್ನು ಬೆಳೆಸಿಕೊಂಡಿದ್ದವು
Image result for bt cotton

೨೦೧೫ರಲ್ಲಿ ಗುಜರಾತಿನಲ್ಲಿ ಮತ್ತು ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಬೋಲ್ಗಾರ್ದ್೧ ಬದಲಿಗೆ ಬೋಲ್ಗಾರ್ದ್ ೨ನ್ನು ಬಳಸಿದರೂ ಹಾನಿಯನ್ನು ತಡೆಗಟ್ಟಲಾಗಲಿಲ್ಲ. ೨೦೧೫-೧೬ರಲ್ಲಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಬಿಳಿಕೀಟಗಳ ದಾಳಿಯಿಂದಾಗಿ ಅಪಾರ ಬೆಳೆನಾಶ ಉಂಟಾಯಿತು. ಒಂದೆಡೆ ಬಿಟಿ ಹತ್ತಿಯ ಜೈವಿಕ ಸಾಮರ್ಥ್ಯ ಕುಗ್ಗಿದೆಯೆಂದು ಅನಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದರೂ ಸರ್ಕಾರವು ವಿಧದ ಬೀಜದ ಪೂರೈಕೆಯನ್ನು ತಡೆಗಟ್ಟಿ ಅದರ ಬದಲಾಗಿ ಬೇರೆ ಬೀಜವನ್ನು ಪೂರೈಸುವಂಥ ಯಾವುದೇ ಮಹತ್ವದ ಹೆಜ್ಜೆಯನ್ನಿಟ್ಟಿಲ್ಲ. ಅದರ ಬದಲಿಗೆ ಕೀಟಗಳನ್ನು ತಡೆಗಟ್ಟುವಂಥ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ರೈತರ ಮೇಲೆಯೇ ಗೂಬೆ ಕೂರಿಸಲಾಗುತ್ತಿದೆ. ಕಳೆದ ಜುಲೈ ತಿಂಗಳಲ್ಲಿ ಹತ್ತಿ ಬೆಳೆಗಳಿಗೆ ಏಕೆ ಅತಿ ಹೆಚ್ಚು ಕೀಟನಾಶಕವನ್ನು  ಸಿಂಪಡಿಸಲಾಯಿತೆಂಬುದರ ಹಿಂದಿನ ಕಾರಣಗಳನ್ನು ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆಯ (ಸಿಸಿಆರ್) ಅಧ್ಯಯನವೊಂದು ಬಯಲಿಗೆ ತಂದಿದೆ. ಹತ್ತಿ ಬೆಳೆಯನ್ನು ಡಿಸೆಂಬರ್ನಲ್ಲೇ ಕಟಾವು ಮಾಡಬೇಕಿದ್ದರೂ ಕಳೆದ ಹಲವಾರು ವರ್ಷಗಳಿಂದ ಹತ್ತಿ ಬೆಳೆಯನ್ನು ಮಾರ್ಚ್ವರೆಗೆ ಜಮೀನಿನಲ್ಲೇ ಉಳಿಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಹತ್ತಿಯ ಬೀಜ ಮತ್ತು ತುಪ್ಪಟವನ್ನು ನಾಶಗೊಳಿಸುವ ಗುಲಾಬಿ ಬೋಲ್ವರ್ಮ್ ಜೈವಿಕ ಚಕ್ರಕ್ಕೆ ಭಂಗ ಬರುತ್ತಿರಲಿಲ್ಲ. ಹೀಗಾಗಿ ಸಾಮಾನ್ಯವಾಗಿ ನವಂಬರ್ ಮಧ್ಯಭಾಗದಲ್ಲಿ ಕಂಡುಬರುವ ಕೀವು, ಮುಂದಿನ ಬಿತ್ತನೆ ಋತುವಿನಲ್ಲಿಅದರಲ್ಲೂ ವಿಶೇಷವಾಗಿ ನೀರಾವರಿ ಪ್ರದೇಶಗಳಲ್ಲಿ ಇನ್ನೂ ಬೇಗನೆಯೇ ಕಾಣಿಸಿಕೊಂಡವು. ಇದರ ಜೊತೆಗೆ ಪೂರಕವಾದ ಹವಾಮಾನ ಮತ್ತು ಬೆಳವಣಿಗೆ ಪೂರಕ ಹಾರ್ಮೋನ್ಗಳ ಬಳಕೆಯಿಂದಾಗಿ ಹತ್ತಿ ಗಿಡಗಳಲ್ಲಿ ಸೊಂಪಾದ ಎಲೆಗುಚ್ಚಗಳು ಬೆಳೆದುಕೊಂಡವು. ಕಳೆದ ವರ್ಷದಿಂದ ಮೋನ್ಸಾಂಟೋ ಕಂಪನಿಯು ರೌಂಡಪ್ ರೆಡಿ ಫ್ಲೆಕ್ಸ್ (ಆರ್ಆರ್ಆರ್) ಎಂಬ ಸಸ್ಯನಾಶಕವನ್ನು ತಾಳಿಕೊಳ್ಳುವ ಹತ್ತಿ ವಿಧವೊಂದನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವುದು ಮತ್ತೊಂದು ಸಮಸ್ಯೆಯನ್ನು ಹುಟ್ಟಿಹಾಕಿದೆ

 ಈ ನಕಲಿ ಬೀಜಗಳ ಪಾಕೆಟ್ಟಿನ ಮೇಲೆ ಉತ್ಪನ್ನದ ಹೆಸರಾಗಲೀ, ತಾಂತ್ರಿಕ ವಿವರಗಳಾಗಲೀ, ಅದು ಹೈಬ್ರೀಡ್ ಬೀಜವೋ ಅಥವಾ ಬಿಟಿ ಜೀನ್ಗಳನ್ನು ಹೊಂದಿದೆಯೋ ಎಂಬ ಮಾಹಿತಿಯಾಗಲೀ ಇರುವುದಿಲ್ಲ. ೨೦೦೧ರಲ್ಲಿ ಗುಜರಾತಿನಲ್ಲಿ ಸಹ ಹೀಗೆ ಆಗಿತ್ತು. ನವಭಾರತ್ ಬೀಜ ಕಂಪನಿ ಸರ್ಕಾರದಿಂದ ಪರವಾನಗಿ ಸಿಗುವ ಮುನ್ನವೇ ಬಿಟಿ ಹತ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟವನ್ನು ಮಾಡಿತ್ತು. ಆಂಧ್ರಪ್ರದೇಶದಲ್ಲಿ ಬಿತ್ತಿದ ಹತ್ತಿ ಬೆಳೆಯಲ್ಲಿ ಶೇ. ೧೫ರಷ್ಟು ಆರ್ಆರ್ಎಫ್ ನಕಲೀ ಬೀಜಗಳಾಗಿದ್ದು ಅದರ ಅಧ್ಯಯನಕಾಗಿ ಆಂಧ್ರ ಸರ್ಕಾರ ಒಂದು ತನಿಖಾ ತಂಡವನ್ನು ರಚಿಸಿದೆ. ಆರ್ಆರ್ಎಫ್ ಅನ್ನು ಅಭಿವೃದ್ಧಿ ಪಡಿಸಿದ್ದ ಮಾನ್ಸಾಂಟೋ ಕಂಪನಿ ಜೆನಿಟಿಕ್ ಇಂಜನಿಯರಿಂಗ್ ಅಪ್ರೈಸಲ್ ಕಮಿಟಿಯಿಂದ ಪರವಾನಗಿ ಪಡೆದುಕೊಳ್ಳಲು ೨೦೦೭ರಲ್ಲಿ ಹಾಕಿಕೊಂಡಿದ್ದ ಅರ್ಜಿಯನ್ನು ಕಳೆದ ವರ್ಷ ಹಿಂಪಡೆದಿದೆ.

ಸಿಐಸಿಆರ್ ಸಂಸ್ಥೆಯ ವಿಜ್ನಾನಿಗಳು ಮಾಡಿರುವ ಒಂದು ಅಂದಾಜಿನ ಪ್ರಕಾರ ೨೦೦೬ರಲ್ಲಿ ದ್ವೀತೀಯ ಹಂತದ ಕೀಟನಾಶಕಗಳ ದಾಳಿ ಹೆಚ್ಚಾದ ಮೇಲೆ ಹತ್ತಿ ಬೆಳೆಗಾಗಿ ಕ್ರಿಮಿನಾಶಕಗಳ ಬಳಕೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಈಗ ಮಾರುಕಟ್ಟೆಯಲ್ಲಿ ಸರಿಸುಮಾರು ೨೦೦೦ದಷ್ಟು ಬಿಟಿ ಹತ್ತಿ ವಿಧಗಳಿವೆ. ೨೦೧೩ರಲ್ಲಿ ಬಿತ್ತನೆ ಮಾಡಿದ ಹತ್ತಿ ಬೀಜಗಳಲ್ಲಿ  ಶೇ.೯೫ರಷ್ಟು ಬೀಜಗಳು ಹೈಬ್ರಿಡ್ ಹತ್ತಿಬೀಜಗಳೇ ಆಗಿದ್ದವು. ಮತ್ತು ಅದರಿಂದಾಗಿ ಕೀಟಗಳ ದಾಳಿಯೂ ಮತ್ತು ಅದರ ಪರಿಣಾಮವಾಗಿ ಕೀಟನಾಶಕಗಳ ಬಳಕೆಯೂ ಹೆಚ್ಚಾದವು. ಬಾರಿ ವಿದರ್ಭದಲ್ಲಿ ಹಲವಾರು ಬಗೆಯ ಕ್ರಿಮಿ ಮತ್ತು ಕೀಟಗಳು ಒಟ್ಟಾಗಿ ದಾಳಿ ಮಾಡಿದ್ದಾವೆ. ಅವುಗಳಲ್ಲಿ ಮುಖ್ಯವಾದವು ಹಸಿರು ಮತ್ತು ಗುಲಾಬಿ ಬೋಲ್ವರ್ಮ್ಗಳು ಹಾಗೂ ತಂಬಾಕು ಕಂಬಳಿಹುಳುಗಳು. ಕೀಟಗಳ ಸತತ ದಾಳಿಯನ್ನು ತಡೆಗಟ್ಟಲು ರೈತರು ವಿವಿಧ ಬಗೆಯ ಅಪಾಯಕಾರಿ ರಾಸಾಯನಿಕಗಳ ಮಿಶ್ರಣವನ್ನು ಹತ್ತಿ ಗಿಡಗಳಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹತ್ತಿಸಸಿಗಳನ್ನು ಒತ್ತೊತ್ತಾಗಿ ಬೆಳಯಲಾಗುತ್ತಿದೆ ಮತ್ತು ಅವುಗಳ ಎತ್ತರ ಅಪರೂಪಕ್ಕೊಮ್ಮೆ ಮಾತ್ರ ಐದು ಅಡಿಯನ್ನು ಮೀರುತ್ತವೆ. ಹೀಗಾಗಿ ರೈತರು ರಾಸಾಯನಿಕಗಳನ್ನು ಗಿಡಗಳಿಗೆ ಹೊಡೆಯುವಾಗ ತಾವು ಸೇವಿಸಿಬಿಡುವ ಅಪಾಯವನ್ನು ಎದುರಿಸಲಾರಂಭಿಸಿದ್ದಾರೆ. ಸಾವಿನಾಟದಲ್ಲಿ ಕ್ರಿಮಿನಾಶಕಗಳ ವರ್ತಕರು ಪ್ರಮುಖ ಪಾತ್ರ ವಹಿಸುತ್ತಿದ್ದು ಯಾವುದೇ ಲಜ್ಜೆಯಿಲ್ಲದೆ ಅನಕ್ಷರಸ್ಥ ರೈತಾಪಿಗೆ ಅತ್ಯಂತ ಅಪಾಯಕಾರಿ ಕ್ರಿಮಿನಾಶಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಹಳ ವರ್ಷಗಳಿಂದ ಪ್ರೊಫೆನ್ಪೋಸ್ ಮತ್ತು ಸೈಪರ್ಮೆತ್ರಿನ್ ಎಂಬ ಕೀಟನಾಶಕಗಳನ್ನು ರೈತರು ಬಳಸುತ್ತಿದ್ದಾರೆ. ಇವುಗಳ ಸೇವನೆಯಿಂದಲೇ ಸಾವು ಸಂಭವಿಸುತ್ತಿದೆಯೇ ಎಂಬ ಬಗ್ಗೆ ಸೂಕ್ತವಾದ ವೈಜ್ನಾನಿಕ ಅಧ್ಯಯನ ನಡೆಯಬೇಕಿದೆ. ವಿಧವಿಧ ಬಗೆಯ ಕ್ರಿಮಿ-ಕೀಟಗಳು ಒಟ್ಟಿಗೆ ದಾಳಿ ಮಾಡುತ್ತಿರುವುದರಿಂದ ರೈತರು ಮಾನೋಕ್ರೋಟೋಪೋಸ್, ಸೈಪರ್ಮೆತ್ರಿನ್ ಮತ್ತು ಸಿಂಥೆಟಿಕ್ ಪೈರೆಥ್ರಾಯ್ಡ್ ಎಂಬ ರಾಸಾಯನಿಕಗಳನ್ನು ಬೆರೆಕೆ ಮಾಡಿ ಬಳಸುತ್ತಿದ್ದಾರೆ. ಇದು ಅಪಾಯದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ. ಹಣವನ್ನು ಉಳಿಸುವ ಸಲುವಾಗಿ ಬಹಳಷ್ಟು ರೈತರು ರಾಸಾಯನಿಕವನ್ನು ಸಿಂಪಡಿಸಲು ದಿನಗೂಲಿಯ ಆಧಾರದ ಮೇಲೆ ರೈತಕೂಲಿಗಳನ್ನು ನೇಮಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಯಾವುದೇ ರಕ್ಷಣಾ ಅಥವಾ ಮುನ್ನೆಚ್ಚರಿಕಾ ದಿರಿಸುಗಳನ್ನು ನೀಡುವ ಪರಿಸ್ಥಿತಿಯಲ್ಲಿ ರೈತರೂ ಇರುವುದಿಲ್ಲ.

ಹೀಗಾಗಿ ಇತ್ತೀಚೆಗೆ ಯಾವತ್ಮಲ್ ಮತ್ತು ಇತರೆಡೆ ಸಂಭವಿಸಿರುವ ಸಾವುಗಳು ಕೇವಲ ಅಂಕಿಅಂಶಗಳಾಗಿ ಮಾತ್ರ ಉಳಿದು ನಿಧಾನವಾಗಿ ಜನಮಾನಸದಿಂದ ಮರೆತುಹೋದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿರುವುದಿಲ್ಲ. ಹೀಗಾಗಿ ಸರ್ಕಾರವು ಒಂದೆಡೆ ಕೂಲಿಗಳ ಸುರಕ್ಷತೆ, ಕ್ರಿಮಿನಾಶಕಗಳ ನಿಯಂತ್ರಣ, ಮತ್ತು ಸಮರ್ಪಕ ಆರೋಗ್ಯ ರಕ್ಷಣೆ ವ್ಯವಸ್ಥೆ ಹಾಗೂ ಉತ್ತಮ ಗುಣಮಟ್ಟದ ಬೀಜಗಳ ಪೂರೈಕೆಯ ಬಗ್ಗೆ ಗಮನವಹಿಸಬೇಕು. ಮತ್ತೊಂದೆಡೆ ಹೇಗೆ ವಿವಿಧ ಶಕ್ತಿಗಳು ಮತ್ತು ಅಂಶಗಳು ಒಂದರೊಡನೆ ಬೆರೆತುಕೊಂಡು ಇಡೀ ಕೃಷಿ ವ್ಯವಸ್ಥೆಯನ್ನು ಹದಗೆಡಿಸಿದೆ ಎಂಬುದನ್ನು ಅರ್ಥಮಾಡಿಕೊಂಡು ಅದನ್ನು ಬಗೆಹರಿಸುವಂಥ ರಾಜಕೀಯ ಇಚ್ಚಾಶಕ್ತಿಯನ್ನು ತೋರಬೇಕು

   ಕೃಪೆ: Economic and Political Weekly, Oct 14, 2017. Vol. 52. No. 41

                                                                                               










ಮಹಿಳೆಯ ಧಾರ್ಮಿಕ ಅಸ್ಮಿತೆ: ಧರ್ಮದ ನಿರಾಕರಣೆ


   ಅನುಶಿವಸುಂದರ್
Image result for Goolrukh Gupta,
Goolrukh Gupta
ಧಾರ್ಮಿಕ ಸ್ವಾತಂತ್ರ್ಯವೆಂಬ ಮೂಲಭೂತ ಹಕ್ಕಿನ ಪರಿಧಿಯಲ್ಲಿ ಮಹಿಳೆಯ ಸ್ಥಾನಮಾನವೇನು?

ಪ್ರಚಲಿತದಲ್ಲಿರುವ ಧರ್ಮಗಳಲ್ಲಿನ ಹಲವಾರು ಆಚರಣೆಗಳು ಧರ್ಮವನ್ನು ಆಚರಿಸುವ ಮಹಿಳೆಯರನ್ನು ಅಸಮಾನವಾಗಿಯೂ ಮತ್ತು ತಾರತಮ್ಯದಿಂದಲೂ ಕಾಣುತ್ತವೆ. ಆದರೆ ಮತ್ತೊಂದು ಧರ್ಮೀಯನನ್ನು ಮದುವೆಯಾದ ಕಾರಣಕ್ಕೆ ಮಹಿಳೆಯು ಹಿಂದಿನಿಂದ ಆಚರಿಸುತ್ತಿದ್ದ ಧರ್ಮವನ್ನು ಅನುಸರಿಸುವ ಹಕ್ಕನ್ನು ಕಿತ್ತುಕೊಳ್ಳುವಂಥ ಮಹಿಳಾದ್ವೇಷೀ ಕ್ರಮವು ಮಹಿಳೆಗೆ ಸಮಾನತೆಯ ಹಕ್ಕನ್ನು ಮತ್ತು ಸ್ವಾಯತ್ತತೆಯನ್ನು ನೀಡುವ ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ನಡೆಯೇ ಆಗಿರುತ್ತದೆ.

ಇಂಥ ಒಂದು ಪ್ರಕರಣವು ಗೂರ್ಲುಕ್ ಗುಪ್ತಾ ಎಂಬ ಪಾರ್ಸಿ ಮಹಿಳೆಯು ಒಬ್ಬ ಪಾರ್ಸಿಯಲ್ಲದ ಪುರುಷನನ್ನು ಮದುವೆಯಾದಾಗ ಸಂಭವಿಸಿದೆ. ಮದುವೆಯ ನಂತರವು ಪಾರ್ಸಿ ಶ್ರದ್ಧೆಯನ್ನು ಅನುಸರಿಸಲು ವಲ್ಸಾಡ್ನಲ್ಲಿರುವ ಧಾರ್ಮಿಕ ಸಂಸ್ಥೆಯು ಅಡ್ಡಿಪಡಿಸುತ್ತಿದೆಯೆಂದು ಆಕೆ ಗುಜರಾತಿನ ಹೈಕೋರ್ಟಿನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಅದನ್ನು ಗುಜರಾತಿನ ಹೈಕೋರ್ಟು ೨೦೧೨ರಲ್ಲಿ ವಜಾ ಮಾಡಿತು. ಆಕೆ  ೧೯೫೪ರ ವಿಶೇಷ ವಿವಾಹ ಕಾಯಿದೆಯಡಿ ಒಬ್ಬ ಪಾರ್ಸಿಯೇತರ ಪುರುಷನನ್ನು ಮದುವೆಯಾಗಿರುವುದರಿಂದ ಆಕೆಯು ತನ್ನ ಗಂಡನ ಧರ್ಮದವಳೇ ಆಗಿರುತ್ತಾಳೆಂದು ಭಾವಿಸಲಾಗುತ್ತದೆ ಮತ್ತು ಹಾಗೆಯೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನ್ಯಾಯಾಲಯವು ಆದೇಶದ ಮೂಲಕ ಭಾರತದ ಸಂವಿಧಾನವು ಖಾತರಿಗೊಳಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನು ಆಕೆಗೆ ನಿರಾಕರಿಸಿತು.

ಅಷ್ಟು ಮಾತ್ರವಲ್ಲದೆ ಎಲ್ಲಿಯತನಕ ಈಗಿರುವ ಕಾಯಿದೆಗೆ ವ್ಯತಿರಿಕ್ತವಾದ ಕಾಯಿದೆಯು ಜಾರಿಯಾಗುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯ ಧಾರ್ಮಿಕ ಅಸ್ಮಿತೆಯು ಆಕೆಯ ಗಂಡನ ಧಾರ್ಮಿಕ ಅಸ್ಮಿತೆಯಲ್ಲಿ ಲೀನವಾಗುತ್ತದೆ ಎಂದು ಪ್ರತಿಪಾದಿಸಿತ್ತು. ಹಾಗೂ ಸೂಕ್ತ ನ್ಯಾಯಾಲಯವೊಂದು ಆಕೆ ಮದುವೆಯಾದ ನಂತರವೂ ಪಾರ್ಸಿ ಧರ್ಮವನ್ನೇ ಅನುಸರಿಸುತ್ತಿದ್ದಳೆಂದು ನೀಡುವ ಧೃಢೀಕರಣದ ಮೂಲಕ ಮಾತ್ರ ಆಕೆಯು ಪಾರ್ಸಿ ಸ್ಥಾನಮಾನವನ್ನು ಅಗ್ರಹಿಸಬಹುದೆಂದು  ಘೋಷಿಸಿತು. ೧೯೫೪ರ ವಿಶೇಷ ವಿವಾಹ ಕಾಯಿದೆ ಬಗ್ಗೆ ಹೈಕೋರ್ಟಿನ ಅಸಂಬದ್ಧ ವ್ಯಾಖ್ಯಾನವು ಈಗಾಗಲೇ ಹಳತಾಗಿರುವ ವಿಲೀನ ಸಿದ್ಧಾಂತದಿಂದ ಹುಟ್ಟಿಕೊಂಡಿದೆ. ಅದರ ಪ್ರಕಾರ ಮಹಿಳೆಯೊಬ್ಬಳು ಮದುವೆಯಾದ ನಂತರ ಆಕೆಯ ಕಾನೂನಾತ್ಮಕ ಅಸ್ಮಿತೆಯು ಆಕೆಯ ಗಂಡನ ಅಸ್ಮಿತೆಯಲ್ಲಿ ವಿಲೀನಗೊಳ್ಳುತ್ತದೆ. ಹೀಗಾಗಿ ಮದುವೆಯ ನಂತರ ಗಂಡ ಮತ್ತು ಹೆಂಡತಿಯನ್ನು ಒಂದೇ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ. (ಆದರೆ ಎಲ್ಲಾ ಉದ್ದೇಶಗಳಿಗೆ ಮತ್ತು ವ್ಯವಹಾರಗಳಿಗೆ ಪುರುಷನನ್ನೇ ವ್ಯಕ್ತಿಯಾಗಿ ಪರಿಗಣಿಸಲಾಗುತ್ತದೆ.)

ವಾಸ್ತವವಾಗಿ ೧೯೫೪ರ ವಿಶೇಷ ವಿವಾಹ ಕಾಯಿದೆ ಜಾರಿಗೆ ಬಂದದ್ದೇ ವಿವಿಧ ಧರ್ಮಗಳನ್ನು ಅನುಸರಿಸುವ ಗಂಡು ಮತ್ತು ಹೆಣ್ಣು ಮದುವೆಯಾದ ನಂತರವೂ ತಮ್ಮ ತಮ್ಮ ಧರ್ಮವನ್ನು ಬಿಟ್ಟು ಕೊಡದೆ ಅಥವಾ ಮತಾಂತರಗೊಳ್ಳದೆ ಕಾನೂನಾತ್ಮಕವಾಗಿ ಮದುವೆ ಮಾಡಿಕೊಳ್ಳಲು ಅನುವು ಮಾಡಿಕೊಡಲೆಂದು. ಇದು ೧೮೭೨ರ ಕಾಯಿದೆಗೆ ಬದಲಾಗಿ ಜಾರಿಯಾಗಿತ್ತು. ಏಕೆಂದರೆ ಹಳೆಯ ಕಾಯಿದೆಯು ವಿಭಿನ್ನ ಧರ್ಮೀಯರು ಮದುವೆಯಾಗಬೇಕೆಂದರೆ ಇಬ್ಬರೂ ತಮ್ಮ ತಮ್ಮ ಧರ್ಮಗಳನ್ನು ತೊರೆಯುವುದನ್ನು ಕಡ್ಡಾಯಗೊಳಿಸಿತ್ತು. ೧೯೫೪ರ ಕಾಯಿದೆಯು ವ್ಯಕ್ತಿಗೆ-ಮಹಿಳೆಗೆ-ತನ್ನ ಧಾರ್ಮಿಕ ಅನನ್ಯತೆಯನ್ನು ಉಳಿಸಿಕೊಳ್ಳುವ ಹಕ್ಕನ್ನು ನೀಡುತ್ತದೆ. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ವ್ಯಾಖ್ಯಾನಿಸಲ್ಪಟ್ಟಿರುವ ಕಾನೂನುಗಳು ಸ್ಪಷ್ಟಪಡಿಸುವಂತೆ ಹೇಗೆ ಮತ್ತೊಂದು ಜಾತಿಗೆ ಸೇರಿದವರನ್ನು ಮದುವೆಯಾದ ಕೂಡಲೇ  ಮಹಿಳೆಯ ಜಾತಿಯು ಬದಲಾಗುವುದಿಲ್ಲವೋ ಅದೇ ರೀತಿ ಮಹಿಳೆಯು ಸ್ವ ಇಚ್ಚೆಯಿಂದ ತನ್ನ ಧರ್ಮವನ್ನು ತೊರೆಯದ ಹೊರತು ಮದುವೆಯಾದ ಮಾತ್ರಕ್ಕೆ ಆಕೆಯ ಧಾರ್ಮಿಕ ಅನನ್ಯತೆ ಬದಲಾಗುವುದಿಲ್ಲ. ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಧರ್ಮನಿರಪೇಕ್ಷತೆಯ ದ್ರವ್ಯವನ್ನು ಒಡಲಲ್ಲಿಟ್ಟುಕೊಂಡಿರುವ ಹಲವು ಕಾಯಿದೆಗಳಂತೆ ಕಾಯಿದೆಯೂ ಸಹ ವ್ಯಕ್ತಿಯ ಹಕ್ಕುಗಳನ್ನು ಎತ್ತಿಹಿಡಿಯಲು ಧರ್ಮ ಮತ್ತು ಮದುವೆಯೆಂಬ ಸಂಸ್ಥೆಗಳನ್ನು ಪ್ರತ್ಯೇಕಿಸಿ ಪರಿಗಣಿಸಲು ಅವಕಾಶಮಾಡಿಕೊಡುತ್ತದೆ. ಸನಾತನ ಕಾಲದ ವೈಯಕ್ತಿಕ ಕಾನೂನುಗಳ ಹಿನ್ನೆಲೆಯಲ್ಲಿ ಕಾಯಿದೆಗೆ ಮತ್ತಷ್ಟು ಮಹತ್ವವಿದೆ.
ಗುಪ್ತಾ ಅವರು ಈಗ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದು ಬರಲಿರುವ ವಾರಗಳಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಆಕೆಯ ವಾದವನ್ನು ಪರಾಮರ್ಶೆ ಮಾಡಲಿದೆ. ಒಂದು ಧಾರ್ಮಿಕ ಸಂಸ್ಥೆಯು ಒಬ್ಬ ವಿವಾಹಿತ ಮಹಿಳೆಯಾದ ಗೋರ್ಲುಕ್ ಗುಪ್ತಾ ಮೇಲೆ ದಂಡ ಮತ್ತು ನಿಷೇಧವನ್ನು ವಿಧಿಸಿರುವ ಪ್ರಕರಣವು, ಧರ್ಮ ಮತ್ತು ಮದುವೆಯೆಂಬ ಸಂಸ್ಥೆಗಳಲ್ಲಿ ಮಹಿಳೆಯು ಎದುರಿಸುವ ಅಸಮಾನತೆ, ಸ್ವಾತಂತ್ರ್ಯಹೀನತೆ ಮತ್ತು ಪೂರ್ವಗ್ರಹಗಳೆಷ್ಟೆಂಬುದರ ಸಣ್ಣ ಸೂಚನೆಯನ್ನಷ್ಟೇ ನೀಡಿದೆ.

ತ್ರಿವಳಿ ತಲಾಖ್ನಂಥ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ಮಹತ್ವದ ಮತ್ತು ಪ್ರಗತಿಪರವಾದ ನಿಲುವನ್ನು ತೆಗೆದುಕೊಳ್ಳುತ್ತ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರುವೆಡೆ ಒತ್ತುನೀಡುತ್ತಿದ್ದರೂ (ಇಪಿಡಬ್ಲ್ಯೂ, ೨೬  ಆಗಸ್ಟ್ ೨೦೧೭), ಧರ್ಮ ಮತ್ತು ವಿವಾಹಿತ ಮಹಿಳೆಯರನ್ನು ಒಳಗೊಂಡ ಪ್ರಕರಣಗಳಲ್ಲಿ ಕೋರ್ಟುಗಳು ಮತ್ತೊಂದು ತುದಿಗೆ ವಾಲಿರುವುದೂ ಉಂಟು. ಕೇರಳದಲ್ಲಿ ಹಾದಿಯಾ ಎಂಬ ವಯಸ್ಕ ಮಹಿಳೆ ತನ್ನಿಚ್ಚೆಯಂತೆ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನಿಚ್ಚೆಯಂತೆ ಮದುವೆಯೂ ಆಗಿದ್ದಳು. ಆದರೂ ಕೇರಳ ಹೈಕೋರ್ಟು ಮದುವೆಯನ್ನು ರದ್ದುಗೊಳಿಸಿತಲ್ಲದೆ ವಯಸ್ಕಳಾಗಿದ್ದರೂ ಮಹಿಳೆಯನ್ನು ಬಲವಂತವಾಗಿ ಆಕೆಯ ಪೋಷಕರ ವಶಕ್ಕೆ ಒಪ್ಪಿಸಿದ್ದು (ಇಪಿಡಬ್ಲ್ಯೂ, ೨೬  ಆಗಸ್ಟ್ ೨೦೧೭) ನ್ಯಾಯಾಂಗದಲ್ಲಿರುವ ಪುರುಷಪ್ರಧಾನ ಮನೋಧರ್ಮಕ್ಕೆ ಕನ್ನಡಿ ಹಿಡಿದಿದೆ. ಗೋರ್ಲಕ್ ಗುಪ್ತ ಮತ್ತು ಹಾದಿಯ ಪ್ರಕರಣಗಳಲ್ಲಿ ನೀಡಲಾಗಿರುವ ಆದೇಶಗಳು ಮಹಿಳೆಯ ಸ್ವಾಯತ್ತತೆಯನ್ನು ಬುಡಮೇಲು ಮಾಡಿದೆ.

ಬಹಳ ಹಿಂದಿನಿಂದಲೂ ಮದುವೆ ಮತ್ತು ಧರ್ಮವೆಂಬ ಎರಡು ಸಂಸ್ಥೆಗಳೂ ಮಹಿಳೆಯರ ವಿಷಯದಲ್ಲಿ ವಿಶೇಷವಾಗಿ ದಮನಕಾರಿಯಾಗಿಯೇ ನಡೆದುಕೊಂಡುಬಂದಿದೆ. ಹೀಗಾಗಿ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಲು ಮಹಿಳೆಯರು ನ್ಯಾಯಾಲಯದ ಮೊರೆಹೊಕ್ಕಾಗ ಲಿಂಗ ಸಮಾನತೆಯನ್ನು ರಕ್ಷಿಸುವುದು ನ್ಯಾಯಂಗದ ಕರ್ತವ್ಯವಾಗಬೇಕು.

ಮಹಿಳೆಯರ ಮತ್ತು ಅವರ ಸ್ವಾಯತ್ತತೆಯ ಪ್ರಶ್ನೆ ಎದುರಾದಾಗ ಯಾರೂ ವೈಯಕ್ತಿಕ ಕಾನೂನುಗಳನ್ನು ಮತ್ತು ಧಾರ್ಮಿಕ ಆದೇಶಗಳನ್ನು ಪ್ರಶ್ನಿಸುವುದಿಲ್ಲವೇಕೆ? ಹೀಗಾಗಿಯೇ ಗುಜರಾತ್ ಹೈಕೋರ್ಟು  ಸಮಾಜದ ಒಟ್ಟಾರೆ ಹಿತಾಸಕ್ತಿಗಳ ದೃಷ್ಟಿಯಲ್ಲಿ ಮತ್ತು ಹಿಂದಿನಿಂದ ಬಂದ ಆಚರಣೆ ಮತ್ತು ಸಂಪ್ರದಾಯಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋಗುವ ದೃಷ್ಟಿಯಿಂದಲೂ ಬಗೆಯ ಆದೇಶದ ಅಗತ್ಯವಿದೆಯೆಂದು ಹೇಳುತ್ತದೆ. ಧರ್ಮವು ಒಂದು ಸಾಮಾಜಿಕ ಸಂಸ್ಥೆಯೇ ಆಗಿದ್ದರೂ ಅದು ವ್ಯಕ್ತಿಗಳ ಆಳವಾದ ನಂಬಿಕೆ ಮತ್ತು ಶ್ರದ್ಧೆಗಳಿಗೆ ಸಂಬಂಧಪಟ್ಟ ವಿಷಯವೂ ಆಗಿದೆ. ಹೀಗಾಗಿ ಎಲ್ಲಿಯತನಕ ಮಹಿಳೆಯರ ಸ್ವಾಯತ್ತತೆಯು  ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಗಳಿಗೆ ಒಂದು ಆತಂಕ ಉಂಟು ಮಾಡುವುದಿಲ್ಲವೋ ಅಲ್ಲಿಯತನಕ ನಮ್ಮ ಸಂವಿಧಾನದ ೨೫ನೇ ಕಲಮು ಖಾತರಿಪಡಿಸುವಂತೆ  ಎಲ್ಲಾ ವ್ಯಕ್ತಿಗಳೂ ಅಭಿವ್ಯಕ್ತಿಯ ಸ್ವಾತ್ಯಂತ್ರ್ಯವನ್ನೂ ಮತ್ತು ತಮ್ಮ ತಮ್ಮ ಧರ್ಮಗಳನ್ನು ಮುಕ್ತವಾಗಿ ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಸಮಾನವಾಗಿ ಹೊಂದಿರುತ್ತಾರೆ. ಮತ್ತು ಸ್ವಾತಂತ್ರ್ಯವೂ ಮಹಿಳೆಯರಿಗೂ ಅನ್ವಯವಾಗುತ್ತದೆ.

ಕೃಪೆ: Economic and Political Weekly,Oct 14, 2017. Vol. 52. No. 41