ಸೋಮವಾರ, ಮಾರ್ಚ್ 19, 2018

ರಜನೀಕಾಂತ್ ಮತ್ತು ಕಮಲ ಹಾಸನ್ ರಾಜಕೀಯ ಪ್ರವೇಶ: ತಮಿಳುನಾಡು ಮತ್ತು ಅದರ ವೈರುಧ್ಯಗಳು


  ಅನುಶಿವಸುಂದರ್ 
Image result for rajinikanth

ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಶೂನ್ಯವನ್ನು ತುಂಬಲು ಇಬ್ಬರು ಚಿತ್ರನಟರು ಮುಂದೆ ಬಂದಿದ್ದರೂ ರಾಜ್ಯದ ರಾಜಕೀಯ ಅನಿಶ್ಚತೆ ಮಾತ್ರ ಹಾಗೆಯೇ ಮುಂದುವರೆದಿದೆ.

ಅಖಿಲ ಭಾರತ ದ್ರಾವಿಡ ಮುನ್ನೇಟ್ರ ಕಳಗಂನ ನಾಯಕಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನದಿಂದಾಗಿ ಮತ್ತು ದ್ರಾವಿಡ ಮುನ್ನೇಟ್ರ ಕಳಗಂನ ಹಿರಿಯ ನಾಯಕ ೯೦ ವರ್ಷದ ಎಂ. ಕರುಣಾನಿಧಿಯವರು ನಿಧಾನಕ್ಕೆ ಹಿನ್ನೆಲೆಗೆ ಸರಿಯುತ್ತಿರುವುದರ ಪರಿಣಾಮದಿಂದಾಗಿ ಕಳೆದೆರಡು ವರ್ಷಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡ ಕೋಲಾಹಲವೆದ್ದಿದೆ. ಇದು ತಮಿಳುನಾಡಿನ ರಾಜಕಿಯದಲ್ಲಿ ಒಂದು ನಿರ್ವಾತವನ್ನು ಉಂಟುಮಾಡಿದೆ. ಬಹಳಕಾಲದಿಂದಲೂ ಸಂಭವನೀಯ ರಾಜಕೀಯ ನಾಯಕರನ್ನು ಹುಟ್ಟುಹಾಕುವ ಒಂದು ಸಿನಿಮಾ ರಂಗವನ್ನು ಹೊಂದಿರುವ, ನೈಜ ಜೀವನ ಮತ್ತು ಸಿನಿಮಾ ಜೀವನದ ನಡುವಿನ ಅತ್ಯಂತ ತೆಳುವಾಗಿರುವ ರಾಜ್ಯದಲ್ಲಿ ಸಿನಿಮಾ ರಂಗದ ನಾಯಕರಾದ ರಜನೀಕಾಂತ್ ಮತ್ತು ಕಮಲ ಹಾಸನ್ ಅವರುಗಳು ಶೂನ್ಯವನ್ನು ತುಂಬುತ್ತೇವೆಂದು ಮುಂದೆಬಂದಿರುವ ವಿದ್ಯಮಾನ ಆಶರ್ಯಕರವಾಗಿಯೇನೂ ಕಾಣುತ್ತಿಲ್ಲ

ಹಿಂದಿನಿಂದಲೂ ತಮಿಳುನಾಡಿನಲ್ಲಿ ಪ್ರಧಾನವಾಗಿ ಎರಡು ದ್ರಾವಿಡ ಪಕ್ಷಗಳ ನಡುವೆಯೇ ರಾಜಕೀಯ ಸ್ಪರ್ಧೆಯು ನಡೆಯುತ್ತಾ ಬಂದಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ನಿರ್ದಿಷ್ಟ ಸಮುದಾಯಗಳ ಬೆಂಬಲ ಪಡೆದಿರುವ ಸ್ಥಳೀಯ ಪಕ್ಷಗಳು ಸಹ ಇವೆರೆಡರಲ್ಲಿ ಒಂದು ಪಕ್ಷದ ಬಾಲಂಗೋಚಿಯಾಗಿದ್ದುಕೊಂಡೇ ಚುನಾವಣೆಗಳನ್ನು ಎದುರಿಸಿವೆ. ದ್ರಾವಿಡ ಪಕ್ಷಗಳೂ ಅಪಾರ ಭ್ರಷ್ಟಾಚಾರದಿಂದ ಕೂಡಿದ ಹಲವು ಜನಪ್ರಿಯ ಯೋಜನೆಗಳ ಮೂಲಕ ಜನರ ಕೆಲವು ಅಗತ್ಯಗಳನ್ನು ಪೂರೈಸಿ ಜನತೆಯ ಪೋಷಕರೆಂಬ ಪಾತ್ರ ವಹಿಸುತ್ತಾ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತ ಬಂದಿವೆ. ಕೇಂದ್ರದಲ್ಲಿ ಇವೆರಡು ಪಕ್ಷಗಳು ಕಾಂಗ್ರೆಸ್ಸನ್ನೋ ಅಥವಾ ಬಿಜೆಪಿಯನ್ನೋ ಬೆಂಬಲಿಸುತ್ತಾ ಬಂದರೂ ರಾಜ್ಯದಲ್ಲಿ ಮಾತ್ರ ರಾಷ್ಟ್ರೀಯ ಪಕ್ಷಗಳು ತಮ್ಮ ಅಧೀನವಾಗಿಯೇ ಉಳಿದುಕೊಳ್ಳುವಂತೆ ನೋಡಿಕೊಂಡಿವೆ. ಆದರೆ ಸರ್ಕಾರದಲ್ಲಿ ಯಾವುದೇ ದ್ರಾವಿಡ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಮುಂದುವರೆಸಿಕೊಂಡುಬಂದ ಪೋಷಕ ಸರ್ಕಾರ-ಫಲಾನುಭವಿ ಪ್ರಜೆಯೆಂಬ ವ್ಯವಸ್ಥೆಯು ವಾಸ್ತವದಲ್ಲಿ ತನ್ನದೇ ಆದ ವೈರುಧ್ಯಗಳನ್ನೂ ಹೊಂದಿವೆ.

ಚಿತ್ರನಟರಾದ ವಿಜಯಕಾಂತ್ ಅವರು ೨೦೦೫ರಲ್ಲಿ ರಾಜಕೀಯವನ್ನು ಪ್ರವೇಶಿಸಿದರು. ಅವರ ದೇಸೀಯ ಮುರ್ಪೊಕ್ಕು ದ್ರವಿಡ ಕಳಗಂ ಪಕ್ಷವು ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಶಾಸನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಶೇ.೧೦ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಇದು ದೊಡ್ಡ ಸಂಖ್ಯೆಯ ಮತದಾರರು ಬೇರೆ ಪರ್ಯಾಯವೊಂದನ್ನು ಅಪೇಕ್ಷಿಸುತ್ತಿದ್ದಾರೆಂಬುದನ್ನಂತೂ ಸೂಚಿಸುತ್ತದೆ. ತಮ್ಮ ಸಹಚರ ಒಂದು ದಶಕದ ಹಿಂದೆ ಸಾಧಿಸಿದ್ದನ್ನೇ ಈಗ ರಜನೀಕಾಂತ್ ಮತ್ತು ಕಮಲ ಹಾಸನ್ ಬೇರೆ ಮಾರ್ಗದ ಮೂಲಕ ಸಾಧಿಸಲು ಯತ್ನಿಸುತ್ತಿದ್ದಾರೆ. ರಜನೀಕಾಂತ್ ಅವರು ತಮಿಳು ಸಿನಿರಂಗದ ಸೂಪರ್ಸ್ಟಾರ್ ಆಗಿದ್ದು, ರಾಜ್ಯಾದ್ಯಾಂತ ದೊಡ್ಡ ಸಂಖ್ಯೆಯ ಅಭಿಮಾನಿಗಳ ಪಡೆಯನ್ನು ಹೊಂದಿದ್ದಾರೆ. ಅವರು ತಮ್ಮ ರಾಜಕೀಯ ಪ್ರವೇಶದ ಸಾಧ್ಯತೆಯನ್ನು ಉದ್ದಕ್ಕೂ ತೆರೆದೆರಿಸಿಕೊಂಡೇ ಬಂದಿದ್ದಾರೆ. ೧೯೯೬ರಲ್ಲಿ ಎಐಡಿಎಂಕೆಯ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಮೊದಲ ಅವಧಿ ಪೂರೈಸಿದ ಸಮಯದಲ್ಲಿ ಅವರ ಸರ್ಕಾರದ ಭ್ರಷ್ಟಾಚಾರ ಮತ್ತು ಅತಿರೇಕಗಳ ವಿರುದ್ಧ ರಜನೀಕಾಂತ್ ಅವರು ಬಹಿರಂಗವಾಗಿ ನಿಲುವು ತೆಗೆದುಕೊಂಡಿದ್ದರು. ಆದರೆ ಅವರೆಂದೂ ಔಪಚಾರಿಕವಾಗಿ ರಾಜಕಿಯಕ್ಕೆ ಧುಮುಕಲಿಲ್ಲ. ಇತ್ತೀಚಿನ ದಿನಗಳಲ್ಲಿ ತಮ್ಮ ಆಧ್ಯಾತ್ಮಿಕತೆ ಮತ್ತು ವೈಯಕ್ತಿಕ ಜನಪ್ರಿಯತೆಯನ್ನು ಆಧರಿಸಿ ರಾಜಕೀಯ ರಂಗಕ್ಕೆ ಹೊಸ ಆಯಾಮವನ್ನು ಕೊಡುವುದರ ಬಗ್ಗೆ ತೀವ್ರವಾದ ಆಸಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ. ಅವರ ವೈಯಕ್ತಿಕ ನೆಲೆಯ ಧಾರ್ಮಿಕ ನಿಲುವು ಮತ್ತು ನಾಯಕತ್ವದ ಗುಣಗಳು ಅವರನ್ನು ಬಲಪಂಥೀಯ ಶಕ್ತಿಗಳಿಗೆ ಆಪ್ಯಾಯಮಾನಗೊಳಿಸಿದೆ. ಆದ್ದರಿಂದಲೇ ಬಿಜೆಪಿಯು ಆವರನ್ನು ತಮ್ಮವರನ್ನಾಗಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಹಿಂದೂತ್ವ ರಾಜಕಾರಣಕ್ಕೆ ಹೆಚ್ಚು ಬೆಂಬಲಿಗರಿಲ್ಲದ ತಮಿಳುನಾಡಿನಲ್ಲಿ ಪ್ರಯತ್ನ ಹೆಚ್ಚೇನೂ ಯಶಸ್ವಿಯಾಗಿಲ್ಲ.
Image result for kamal hassan

ಆದರೆ ರಜನೀಕಾಂತ್ ಅವರು ಬಿಜೆಪಿಯೊಡನೆ ಮೈತ್ರಿಯ ಬಗ್ಗೆಯಾಗಲಿ, ಅಥವಾ ರಾಜಕೀಯ ಸಾಮೀಪ್ಯದ ಬಗ್ಗೆಯಾಗಲೀ ಯಾವ ಸೂಚನೆಯನ್ನೂ ಕೊಡದೆ ತಮ್ಮ ಘೋಷಣೆಗಳನ್ನು ಕೇವಲ ಉತ್ತಮ ಆಡಳಿತ ವೆಂಬ ಒಣಪದಪುಂಜಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ. ಮತ್ತು ಬರಲಿರುವ ಚುನಾವಣೆಗಳಲ್ಲಿ ತಮ್ಮ ಪಕ್ಷವು ೨೩೪ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಶಕ್ಯವಾಗುವಂತೆ ತಮ್ಮೆಲ್ಲ ಬೆಂಬಲವನ್ನು ನೀಡಬೇಕೆಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಈವರೆಗೆ ಅವರು ಯಾವ ವಿಷಯಗಳ ಬಗ್ಗೆಯೂ ಬಹಿರಂಗವಾದ ನಿಲುವು ತೆಗೆದುಕೊಂಡಿಲ್ಲ. ಮಾತ್ರವಲ್ಲ ಯಾವುದೇ ಸಿದ್ಧಾಂತವನ್ನೂ ಪ್ರತಿಪಾದಿಸುತ್ತಿಲ್ಲ. ಆದರೆ ಹೇಗೆ ಯಾವ ಸೈದ್ಧಾಂತಿಕ ಹಿನ್ನೆಲೆಯನ್ನೂ ಹೊಂದಿರದ ಎಂಜಿ ರಾಮಚಂದ್ರನ್ ಅವರು ಡಿಎಂಕೆ ಯಿಂದ ಹೊರಬಂದು ಗಟ್ಟಿಯಾದ ಎಐಡಿಎಂಕೆ ಪಕ್ಷವನ್ನು ಯಶಸ್ವಿಯಾಗಿ ಕಟ್ಟಿದರೋ  ಮೇಲ್ಪಂಕ್ತಿಯನ್ನು ತಾವೂ ಸಹ ಅನುಸರಿಸುವ ಮಾತುಗಳನ್ನಾಡುತ್ತಿದ್ದಾರೆ. ಆದರೆ ರಜನೀಕಾಂತ್ ಅವರು ವ್ಯಕ್ತಿಪೂಜೆಯ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದ್ದು ಅದು ರಾಜಕೀಯವಾಗಿ ಬಿಜೆಪಿಗೆ ಅವಕಾಶ ಮಾಡಿಕೊಡಬಹುದೆಂಬ ಗುಮಾನಿ ದಟ್ಟವಾಗಿದೆ.

ಮತ್ತೊಂದೆಡೆ ಕಮಲ್ ಹಾಸನ್ ಅವರು ಅಪಾರ ಪ್ರತಿಭಾಶಾಲಿ ನಟನೆಂಬ ಗೌರವ ಸರ್ವವ್ಯಾಪಿಯಾಗಿದೆ. ಮತ್ತು ತೆರೆಯ ಮೇಲೆ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿರುವ ಜನಪ್ರಿಯತೆಯೂ ಅವರಿಗಿದೆ. ಅವರಿಗೆ ರಜನೀಕಾಂತ್ಗೆ ಇರುವಷ್ಟು ಸಾರ್ವಜನಿP ಮಾನ್ಯತೆಯಿಲ್ಲದಿದ್ದರೂ ಅತ್ಯುತ್ತಮ ನಟನೆಂಬ ಗೌರವವಿದೆ. ಆದರೆ ಇತ್ತೀಚಿನವರೆಗೆ ಅವರು ರಾಜಕೀಯವನ್ನು ಪ್ರವೇಶಿಸುವ ಬಯಕೆ ತೋರಿರಲಿಲ್ಲ. ಆದರೂ ಹಿಂದೆ ಅವರು ದ್ರಾವಿಡ ಚಳವಳಿಯ ಪ್ರಾರಂಭದ ದಿನಗಳ ವೈಚಾರಿಕತೆ ಮತ್ತು ಪ್ರಗತಿಪರ ರಾಜಕರಾಣದ ಬಗೆಗಿನ ಸೈದ್ಧಾಂತಿಕ ನಿಲುವುಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಅವರು ರಾಜಕೀಯವನ್ನು ಪ್ರವೇಶಿಸುವ ಬಗ್ಗೆ ಖಚಿತವಾಗಿ ಹೇಳುತ್ತಿದ್ದು ತಮ್ಮನ್ನು ತಾವು ಆಚರಣಯೋಗ್ಯ ರಾಜಕಾರಣದಲ್ಲಿ ನಂಬಿಕೆಯಿಟ್ಟಿರುವ, ರಾಜಕೀಯವಾಗಿ ಎಡವೂ ಅಲ್ಲದ , ಬಲವೂ ಅಲ್ಲದ ಮಧ್ಯಸ್ಥ ರಾಜಕಾರಣಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹಾಗು ತಮ್ಮ ಪಕ್ಷಕ್ಕೆ ಮಕ್ಕಳ್ ನೀತಿ ಮಯ್ಯಂ (ಜನತೆಯ ನ್ಯಾಯ ಕೇಂದ್ರ) ಎಂದು ಹೆಸರಿಟ್ಟಿದ್ದಾರೆ. ಆದರೆ ರಜನೀಕಾಂತ್ಗಿಂತ ಭಿನ್ನವಾಗಿ ಕಮಲ್ ಹಾಸನ್ ಅವರು ಕೋಮುವಾದದ ವಿರುದ್ಧ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದಾರಲ್ಲದೆ ಬಿಜೆಪಿಯನ್ನು ವಿರೋಧಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಕೃಷಿ ಬಿಕ್ಕಟ್ಟು, ನೀರು ಹಂಚಿಕೆ, ಹಾಗೂ ಪರಿಸರ ಸಂಬಂಧೀ ವಿಷಯಗಳ ಬಗ್ಗೆ ಕಮಲ್ ಹಾಸನ್ ಅವರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೂ ನಿರಂತರವಾಗಿ ಯಾವುದೇ ಒಂದು ಸೈದ್ಧಾಂತಿಕ ನಿಲುವನ್ನು ವ್ಯಕ್ತಪಡಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಇವೆಲ್ಲ ಏನೇ ಇದ್ದರೂ, ಜಯಲಲಿತಾ ಅವರ ಸಾವಿನ ನಂತರ ಎಐಡಿಎಂಕೆ ಪಕ್ಷದಲ್ಲಿ ಉಂಟಾಗಿರುವ ಗೊಂದಲ-ಅರಾಜಕತೆ ಮತ್ತು ಆಳುವ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಜನರ ಆಕ್ರೋಶಗಳೇ ಇಬ್ಬರು ಚಿತ್ರ ತಾರೆಯರ ರಾಜಕೀಯ ಪ್ರವೇಶಕ್ಕೆ ಕಾರಣವಾದ ಪ್ರಮುಖ ಅಂಶಗಳಾಗಿವೆ. ಕರುಣಾನಿಧಿಯವರ ವಿಸ್ತರಿತ ಕುಟುಂಬದಲ್ಲೇ ತನ್ನ ಮುಂದಿನ ನಾಯಕತ್ವವನ್ನು ಅರಸುತ್ತಿರುವುದರಿಂದ ಡಿಎಂಕೆಗೆ ಕಳೆಗುಂದುತ್ತಿರುವ ಎಐಡಿಎಂಕೆಗೆ ಏಕಮಾತ್ರ ಪರ್ಯಾಯವಾಗಬಲ್ಲ ಅವಕಾಶವ ಇಲ್ಲವಾಗಿದೆ. ರಜನೀಕಾಂತ್ ಮತ್ತು ಕಮಲ ಹಾಸನ್ ಅವರು ಖಾಸಗಿಯಾಗಿ ಸ್ನೇಹಿತರಾಗಿದ್ದರೂ ತಾರಾಪಟ್ಟವನ್ನು ಪಡೆಯಲು ವಿಭಿನ್ನ ದಾರಿಗಳನ್ನು ಕ್ರಮಿಸಿದ್ದಾರೆ. ರಜನೀಕಾಂತ್ ಅವರು ತಮ್ಮ ವ್ಯಕ್ತಿತ್ವ ಹಾಗೂ ನಟನಾ ವೈಚಿತ್ರಗಳಿಂದ ತಾರಾಗಿರಿಯನ್ನು ಸಂಪಾದಿಸಿದರೆ ಕಮಲಹಾಸನ್ ಅವರು ತಮ್ಮ ನಟನಾ ಕೌಶಲ್ಯದ ಮೂಲಕ ಗಂಭೀರ ಚಿತ್ರರಸಿಕರ ಮನಗೆದ್ದರು. ಬಹಳ ಬೇಗ ಒಂದು ಮಧ್ಯಮ ಆದಾಯದ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಾ ತನ್ನೆಲ್ಲಾ ಸಾಮರ್ಥ್ಯಗಳನ್ನು ದುಡಿಸಿಕೊಳ್ಳಲು ಅತ್ಯಗತ್ಯವಾಗಿ ಬೇಕಿರುವ ರಾಜಕೀಯ ದಿಕ್ಕನ್ನು ಪಡೆದುಕೊಳ್ಳಲು ಹಾತೊರೆಯುತ್ತಿರುವ ರಾಜ್ಯದಲ್ಲಿ ಯಾರು ಯಶಸ್ವಿಯಾಗಲಿದ್ದಾರೆ ಎಂಬುದನ್ನಂತೂ ಕಾದು ನೋಡಬೇಕಿದೆ.

  ಕೃಪೆ: Economic and Political WeeklyMar 17,  2018. Vol. 53. No.11
                                                                                                              
   (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )







ಭಾನುವಾರ, ಮಾರ್ಚ್ 18, 2018

ನಾಸಿಕ್‌ನಿಂದ ಮುಂಬೈವರೆಗಿನ ರೈತಾಪಿಯ ಲಾಂಗ್‌ಮಾರ್ಚ್


            ಅನುಶಿವಸುಂದರ್ 
Image result for farmers long march

ತೀವ್ರಗೊಳ್ಳುತ್ತಿರುವ ಗ್ರಾಮೀಣ ಬಿಕ್ಕಟ್ಟನ್ನು ಬಗೆಹರಿಸಲು ಬಿಜೆಪಿಯು ಕೃಷಿ ಸಾಲ ಮನ್ನಾದ ಜೊತೆಜೊತೆಗೆ ಕೈಗೊಳ್ಳಬೇಕಾದ ಇತರ ಪರಿಹಾರ ಕ್ರಮಗಳ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕು.

೨೦೦೮ರ ಮಾರ್ಚ ೧೧ರಂದು ಸುಮಾರು ೪೦,೦೦೦ ಕ್ಕೂ ಹೆಚ್ಚು ರೈತರು ಮುಂಬೈ ನಗರಕ್ಕೆ ಮುತ್ತಿಗೆ ಹಾಕಿದರು. ರೈತಸಾಗರದಲ್ಲಿ ಗಂಡಸರು-ಹೆಂಗಸರು, ಮಕ್ಕಳೂ-ವೃದ್ಧರು ಎಲ್ಲರೂ ಇದ್ದರು. ಅವರಲ್ಲಿ ಹಲವರು ಕೆಂಪು ಟೋಪಿ ಮತ್ತು ಬಾವುಟಗಳನ್ನು ಹಿಡಿದುಕೊಂಡಿದ್ದರು. ತಮಗೆ ಕೊಟ್ಟ ಭರವಸೆಗಳನ್ನು ಈಡೇರಿಸದ ಮಹಾರಾಷ್ಟ್ರ ಸರ್ಕಾರಕ್ಕೆ ಪಾಠ ಕಲಿಸಲು ಮುಂಬೈಗೆ ಹರಿದು ಬಂದ ಗ್ರಾಮಿಣ ರೈತಾಪಿ ಜನಸಾಗರ ಅಂದಿನ ಮಟ್ಟಿಗೆ ನಗರ ಮತ್ತು ಗ್ರಾಮಗಳೆಂಬ ವಿರುದ್ಧ ಲೋಕಗಳ ಭಿನ್ನತೆಯನ್ನೇ ಅಳಿಸಿಹಾಕಿತು. ಅವರುಗಳು ನಾಸಿಕ್ನಿಂದ ಮುಂಬೈವರೆಗಿನ ಸುಮಾರು ೧೮೦ ಕಿಮೀ ಗಳಷ್ಟು ದೂರವನ್ನು ನಡೆಯುತ್ತಲೇ ಕ್ರಮಿಸಿದ್ದರು. ಆದರೆ ರ್ಯಾಲಿಯು ಇತರ ಎಲ್ಲಾ ರ್ಯಾಲಿಗಳಿಗಿಂತ ಭಿನ್ನವಾಗಿದ್ದದ್ದು ತಾನು ಕಾಲು ನಡಿಗೆಯಲ್ಲಿ ಕ್ರಮಿಸಿದ ದೂರದಿಂದ ಮಾತ್ರವಲ್ಲಮೊದಲನೆಯದಾಗಿ ಮಹಾ ರ್ಯಾಲಿಯಲ್ಲಿ ಭಾಗವಹಿಸಿದ ಜನತೆಯ ಹಿನ್ನೆಲೆ. ಅದರಲ್ಲಿ ಪ್ರಧಾನವಾಗಿ ಇದ್ದವರು ಅತ್ಯಂತ ಬಡ ರೈತರು ಮತ್ತು ಆದಿವಾಸಿ ಕೃಷಿಕರು. ಎರಡನೆಯದಾಗಿ, ರ್ಯಾಲಿ ನಡೆಸುತ್ತಿದ್ದ ಹೋರಾಟಗಾರರು ಭಾರತದ ಹಣಕಾಸು ಬಂಡವಾಳದ ರಾಜಧಾನಿಯಾದ ಮುಂಬೈ ನಗರದ ಬಿರುಸಿಗೆ ಕಿಂಚಿತ್ತೂ ಧಕ್ಕೆ ಉಂಟುಮಾಡಲಿಲ್ಲ. ಮುಂಬೈ ನಗರವಾಸಿಗಳೂ ಸಹ ವ್ಯತ್ಯಾಸವನ್ನು ಗಮನಿಸಿದರು. ಮುಂಬೈ ನಗರಿಯ ಬಹಳಷ್ಟು ಜನ ತಮ್ಮ ಪಾರಂಪರಿಕ ಜಡತೆಯನ್ನು ತೊರೆದು ನಡೆದು ನಡೆದೂ ಬಸವಳಿದಿದ್ದ ರೈತಾಪಿಗೆ ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವನ್ನೂ ಸಹ ಒದಗಿಸಿದರು. ಜೊತೆಗೆ ಪ್ರಧಾನಧಾರೆ ಮಾಧ್ಯಮಗಳಲ್ಲಿ ಇದರ ಬಗ್ಗೆ ಬಂದ ವರದಿಗಳು ವಿರೋಧ ಪಕ್ಷಗಳನ್ನೂ ಸಹ ಜಾಗೃತಗೊಳಿಸಿತು. ಎಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರಕ್ಕೆ ತಪ್ಪಿಸಿಕೊಳ್ಳಲು ಯಾವುದೇ ದಾರಿ ಉಳಿಯಲಿಲ್ಲ.
Image result for farmers long march

ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟದ ಸರ್ಕಾರಕ್ಕೆ ಅದರ ಹಿಂದಿನ ಕಾಂಗ್ರೆಸ್ ಸರ್ಕಾರವು ತೀವ್ರಗೊಳ್ಳುತ್ತಿದ್ದ ಕೃಷಿ ಬಿಕ್ಕಟ್ಟನ್ನು ಬಳುವಳಿಯಾಗಿ ನೀಡಿತ್ತು. ಕೇಂದ್ರದ ನೋಟು ನಿಷೇಧ ಮತ್ತು ಜಿಎಸ್ಟಿ ಕ್ರಮಗಳಿಂದ ಕೃಷಿ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿ ೨೦೧೬-೧೭ರಲ್ಲಿ ತಾರಕಕ್ಕೇರಿತ್ತು. ೨೦೧೭ರ ಪ್ರಾರಂಭದಲ್ಲಿ ಕೃಷಿ ಉತ್ಪನ್ನಗಳ ಬೆಲೆಯು ಐತಿಹಾಸಿಕವಾಗಿ ಅತ್ಯಂತ ತಳಮಟ್ಟಕ್ಕೆ ಕುಸಿದಾಗ ಸಿಪಿಎಂ ಪಕ್ಷದ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ವು ಮಾಹರಾಷ್ಟ್ರ ರಾಜ್ಯಾದ್ಯಂತ ರೈತಾಪಿಯನ್ನು ಸಂಘಟಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ತಮ್ಮ ಹೋರಾಟಗಳಿಂದಾಗಿ ಫಡ್ನವೀಸ್ ಸರ್ಕಾರದಿಂದ ರೈತಾಪಿಯು ೩೦,೦೦೦ ಕೋಟಿ ರೂ. ಗಳಷ್ಟು ಭಾಗಶಃ ಕೃಷಿ ಸಾಲ ಮನ್ನ ಮತ್ತು ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಸೀಮಿತ ಹೆಚ್ಚಳವನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಒಂದು ವರ್ಷದ ನಂತರವೂ ಬಹುಪಾಲು ಕೃಷಿ ಉತ್ಪನ್ನದ ಬೆಲೆಗಳು ಕುಸಿಯುತ್ತಲೇ ಹೋದಾಗ ವ್ಯಗ್ರರಾದ ರೈತಾಪಿಯು ಬೇಷರತ್ ಸಾಲ ಮನ್ನಾ, ನೀರಾವರಿ ಸೌಲಭ್ಯ,ಮತ್ತು ಉಳುತ್ತಿರುವ ಭೂಮಿಯ ಮೇಲಿನ ಹಕ್ಕುಗಳ ಆಗ್ರಹಗಳನ್ನು ಮುಂದಿಟ್ಟುಕೊಂಡು ಮುಂಬೈ ಕಡೆಗೆ ಬೃಹತ್ ಲಾಂಗ್ ಮಾರ್ಚ್ ನಡೆಸಿದರು. ಜನರ ಹೋರಾಟಗಳಿಗೆ ಫಡ್ನವೀಸ್ ಸರ್ಕಾರ ಮಣಿಯಲೇ ಬೇಕಾಯಿತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ೧೦,೦೦೦ ಕೋಟಿ ಹೊರೆ ಬೀಳಲಿದೆ.

ಆದರೆ ಸಾಲ ಮನ್ನ ಎಂಬುದು ಕೇವಲ ಒಂದು ತಾತ್ಕಾಲಿಕ ತಡೆಕ್ರಮವಷ್ಟೆ. ಸಾಲ ಮನ್ನಾ ಎಂಬ ಕ್ರಮವು ಸಾಲದ ಪಾಲಾಗಿರುವ ರೈತನನ್ನು ಮುಕ್ತಗೊಳಿಸಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬೇಕಾದ ಹೊಸ ಸಾಲಗಳನ್ನು ಪಡೆದುಕೊಳ್ಳಲು ಅರ್ಹಗೊಳಿಸುತ್ತದೆ. ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯವೆಂಬ ಕುಖ್ಯಾತಿಯುಳ್ಳ ರಾಜ್ಯವೊಂದು ಸಾಲ ಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳುವಂತಾಗುವುದೂ ಸಹ ಸಣ್ಣ ವಿಷಯವಲ್ಲ. ಅದೇನೇ ಇದ್ದರೂ ಅದೊಂದು ತಾತ್ಕಾಲಿಕ ಕ್ರಮವಷ್ಟೇ ಆಗಿದೆ. ಏಕೆಂದರೆ ಸರ್ಕಾರಗಳು ಎದುರಿಸಬೇಕಾಗಿರುವ ಕಟುಸತ್ಯವೇನೆಂದರೆ ಕೃಷಿ ಕ್ಷೇತ್ರದ ಅಭಿವೃದ್ಧಿ ಗತಿ ಕುಸಿಯುತ್ತಲೇ ಇದ್ದು ರೈತಾಪಿಗಳು ಗಳಿಸುತ್ತಿರುವ ಆದಾಯವು ಕುಸಿಯುತ್ತಿದೆ . ಮತ್ತು ಅದು ರೈತಾಪಿಯು ಬದುಕುಳಿಯಲು ಕೂಡಾ ಸಾಲುವಷ್ಟಿಲ್ಲ. ಇದಕ್ಕೆ ಮುಖ್ಯ ಕಾರಣಗಳೆಂದರೆ ಏರುತ್ತಿರುವ ಒಳಸುರಿ-ಹೂಡಿಕಾ ವೆಚ್ಚ, ಕುಸಿಯುತ್ತಲೇ ಇರುವ ಕೃಷಿ ಉತ್ಪನ್ನಗಳ ಬೆಲೆ, ನೀರು ಮತ್ತು ತಂತ್ರಜ್ನಾನಗಳ ಲಭ್ಯತೆಯಲ್ಲಿ ಅಸಮಾನತೆ, ತೀವ್ರಗೊಳ್ಳುತ್ತಿರುವ ವಾಣಿಜ್ಯ ಬೆಳೆಗಳ ಉತ್ಪಾದನೆ ಮತ್ತು ಅದಕ್ಕೆ ಸರಿಸಮನಾಗಿ ಉತ್ಪಾದಕತೆಯಲ್ಲಿ ಆಗುತ್ತಿರುವ ಕುಸಿತ. ಇದರ ಜೊತೆಗೆ ರೈತಾಪಿಯ ನಿಯಂತ್ರಣದಾಚೆಗಿರುವ ಮಳೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ವೈಪರೀತ್ಯಗಳು ಮೇಲಿನ ಎಲ್ಲಾ ಕಾರಣಗಳನ್ನು ಮತ್ತಷ್ಟು ಹದಗೆಡಿಸುತ್ತಿವೆ.

ಕೃಷಿ ಸುಧಾರಣೆಯ ಹಲವಾರು ಕಾರ್ಯಸೂಚಿಗಳಲ್ಲಿ ರೈತ ಚಳವಳಿಗಳ ಗಮನ ಕೃಷಿ ಉತ್ಪನ್ನದ ಬೆಲೆಗಳ ಮೇಲೆ ಏಕಮಾತ್ರವಾಗಿ  ಕೇಂದ್ರೀಕರಣಗೊಂಡ ವಿದ್ಯಮಾನದ ಮೂಲವನ್ನು ೧೯೭೦ರಲ್ಲಿ ಪ್ರಾರಂಭವಾದ ಹೊಸ ರೈತ ಚಳವಳಿಯಲ್ಲಿ ಕಾಣಬಹುದು. ಒಂದೆಡೆ ಹೊಸ ಕಾರ್ಯಸೂಚಿಯು ಸಣ್ಣ ಮತ್ತು ದೊಡ್ಡ ರೈತಾಪಿಗಳ ವಿಶಾಲ ಐಕ್ಯತೆಗೆ ದಾರಿಮಾಡಿಕೊಟ್ಟರೂ ಭೂ ಹಿಡುವಳಿ, ನೀರಾವರಿ, ಕೃಷಿ ಸಾಲ, ಭೂ ಬಳಕೆ ಮತ್ತು ಬೆಳೆ ಪದ್ಧತಿಗಳಂಥ ಮೂಲಭೂತ ಕಾರ್ಯಸೂಚಿಗಳ ಮೇಲಿರಬೇಕಾದ ಗಮನವನ್ನು ಕಡಿತಗೊಳಿಸಿತು. ರಾಷ್ಟ್ರೀಯ ರೈತ ಅಯೋಗ (೨೦೦೪-೦೬) ವರದಿಯ ಭಾಗವಾಗಿ ಎಂ.ಎಸ್. ಸ್ವಾಮಿನಾಥನ್ ಅವರು ನೀಡಿದ ಶಿಫಾರಸ್ಸುಗಳು ಕೆಳದ ಒಂದು ದಶಕದಿಂದ ಎಲ್ಲಾ ರೈತ ಹೋರಾಟಗಳ ಪ್ರಮುಖ ಬೇಡಿಕೆಯಾಗಿವೆ. ಆದರೆ ಸ್ವಾಮಿನಾಥನ್ ವರದಿಯೂ ಸಹ ಕೃಷಿ ಬಿಕ್ಕಟ್ಟನ್ನು ತಡೆಗಟ್ಟುವಲ್ಲಿ ಸಾಲ ಮನ್ನಾ ಮಾತ್ರ ಏಕಮಾತ್ರ ಪರಿಹಾರವಾಗಲಾರದು ಎಂದು ಅಭಿಪ್ರಾಯಪಟ್ಟಿದೆ. ಬದಲಿಗೆ ಅವರು ಆರ್ಥಿಕವಾಗಿ ಮತ್ತು ಪರಿಸರಾತ್ಮವಾಗಿ ಸಂತುಲಿತ ಕೃಷಿಯಲ್ಲಿ ತೊಡಗುವಂತೆ ಮಾಡಲು ಸರ್ಕಾರವು ತಂತ್ರಜ್ನಾನ, ಮಾರಾಟ ಮತ್ತು ರೈತರ ತರಬೇತಿಗಳಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸಬೇಕೆಂದು ಶಿಫಾರಸ್ಸು ಮಾಡುತ್ತದೆ. ಅಂಥಾ ದೂರಗಾಮಿ ಸುಧಾರಣೆಗಳು ಇಲ್ಲದಿರುವ ಕಾರಣಗಳಿಂದಾಗಿಯೇ ಗ್ರಾಮೀಣ ಭಾರತವು ವಿವಿಧ ಹಂತದ ಕೃಷಿ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದಿದೆ. ಮತ್ತು ಅದರ ಪರಿಣಾಮವಾಗಿ ಸಣ್ಣ ಮತ್ತು ಅತಿಸಣ್ಣ ರೈತಾಪಿಯ ಪ್ರಮಾಣ ಮತ್ತು ಅವರು ಎದುರಿಸುತ್ತಿರುವ ಬಿಕ್ಕಟ್ಟಿನ ತೀವ್ರತೆಯೂ ಹೆಚ್ಚುತ್ತಲೇ ಸಾಗಿದೆ.

ಇತ್ತೀಚಿನ ರೈತಾಪಿ ರ್ಯಾಲಿಯಲ್ಲಿ ಆದಿವಾಸಿ ಕೃಷಿಕರು ಭಾಗವಹಿಸಿದ್ದರಿಂದಲೇ ಅದು ಹಿಂದಿನ ರೈತಾಪಿ ರ್ಯಾಲಿಗಳಿಂಗಿಂತ ಭಿನ್ನವಾಗಿತ್ತು. ಅವರು ಭಾರತ ಸರ್ಕಾರವು ಜಾರಿಗೆ ತಂದ ೨೦೦೬ರ ಆದಿವಾಸಿಗಳ ಮತ್ತು ಇತರ ಪಾರಂಪರಿಕ gಣ್ಯವಾಸಿಗಳ (ಅರಣ್ಯ ಹಕ್ಕನ್ನು ಖಾತರಿಗೊಳಿಸುವ) ಕಾಯಿದೆಯನ್ನು ಜಾರಿಗೊಳಿಸಿ ಅರಣ್ಯ ಭೂಮಿಯ ಮೇಲಿನ ತಮ್ಮ ಹಕ್ಕನ್ನು ಖಾತರಿಗೊಳಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ದೊಡ್ಡ ಸಂಖ್ಯ್ಯೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಸಮಸ್ಯೆ ಬಗೆಹರಿಯಬೇಕೆಂದರೆ ಅರಣ್ಯ ಭೂಮಿಯ ಒಡೆತನ ಮತ್ತು ಬಳಕೆಯ ಕುರಿತು ಮತ್ತು ಅದರ ಸಂಪನ್ಮೂಲಗಳನ್ನು ನಿರ್ವಹಣೆ ಮಾಡುವ ಹಕ್ಕಿನ ಕುರಿತು ಸುಮಾರು ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಆದಿವಾಸಿಗಳ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗುವ ಅಗತ್ಯವಿದೆ. ವಿಪರ್ಯಾಸವೆಂದರೆ ಕಾನೂನನ್ನು ಜಾರಿಗೊಳಿಸುವುದರಲ್ಲಿ ಮಹಾರಾಷ್ಟ್ರವು ಉಳಿದೆಲ್ಲಾ ರಾಜ್ಯಗಳಿಗಿಂತ ಮುಂದಿದ್ದರೂ ಪರಿಸ್ಥಿತಿ ಮಾತ್ರ ಇರುವುದು ಹೀಗೆ. ಕೃಷಿ ಆರ್ಥಿಕತೆಯೊಳಗೆ ಆದಿವಾಸಿ ರೈತಾಪಿ ಇನ್ನಷ್ಟು ಅತಂತ್ರತೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಆದಿವಾಸಿಗಳು ಐತಿಹಾಸಿಕವಾಗಿ ನೆಲೆಯೂರಿರುವ ಪ್ರದೇಶವನ್ನು ಕಾರ್ಪೊರೇಟ್ ಕುಳಗಳು ಭೂಕಬಳಿಕೆ ಮಾಡುವ ಮೂಲಕ ಅಥವಾ ಪ್ರಭುತ್ವವೇ ಅವರನ್ನು ಎತ್ತಂಗಡಿ ಮಾಡುವ ಮೂಲಕ ಆದಿವಾಸಿಗಳ ಬದುಕನ್ನು ಮತ್ತಷ್ಟು ಅತಂತ್ರವಾಗಿಸುತ್ತಿದ್ದಾರೆ. ಹೀಗಾಗಿ ಭೂಮಿ ಪ್ರಶ್ನೆಯು ಈಗಲೂ  ಜನರನ್ನು ಸಂಘಟಿಸಬಲ್ಲ ಒಂದು ಸಮರ್ಥ ರಾಜಕೀಯ ಅಜೆಂಡಾ ಆಗಿದೆ.

ಮಹಾರಾಷ್ಟ್ರದ ರಾಜಕಾರಣದಲ್ಲಿ ಈವರೆಗೂ ಮರಾಠರ ಅಧಿಪತ್ಯವೇ ಮುಂದುವರೆಯುತ್ತಾ ಬಂದಿರುವುದರಿಂದ ಮಹಾರಾಷ್ಟ್ರದ ಪ್ರಾದೇಶಿಕ ಕೃಷಿ ರಾಜಕಿಯ ಅರ್ಥಿಕತೆಯು ಕಬ್ಬು ಆರ್ಥಿಕತೆಯ ಪರವಾಗಿ ವಾಲಿಕೊಂಡಿದೆ. ಕಬ್ಬನ್ನು ರಾಜ್ಯದ ಒಟ್ಟಾರೆ ಕೃಷಿ ಪ್ರದೇಶದ ಶೇ.೪ರಷ್ಟಲ್ಲಿ ಮಾತ್ರ ಬೆಳೆದರೂ ಅದು ರಾಜ್ಯದ ನೀರಾವರಿ ಸೌಲಭ್ಯದ  ಶೇ.೬೫ರಷ್ಟನ್ನು ಕಬಳಿಸುತ್ತದೆ. ಸರ್ಕಾರದಿಂದ ಪ್ರಮಾಣದ ಬೆಂಬಲವನ್ನು ಪಡೆಯುತ್ತಿದ್ದರೂ ಮಹಾರಾಷ್ಟ್ರದ ಸಕ್ಕರೆ ಸಹಕಾರಿ ಸಂಘಗಳು ಸಹ ತೀವ್ರವಾದ ತಳಮಳವನ್ನು ಎದುರಿಸುತ್ತಿವೆ. ಹೀಗೆ ಹೆಚ್ಚಾಗುತ್ತಿರುವ ಗ್ರಾಮೀಣ ಬಿಕ್ಕಟ್ಟು ಅತ್ಯಗತ್ಯವಾದ ಕೃಷಿ ಸುಧಾರಣೆಯನ್ನು ಜಾರಿ ಮಾಡಲು ಬೇಕಾದ ಭೂಮಿಕೆಯನ್ನು ಬಿಜೆಪಿಗೆ ಒದಗಿಸಿದೆ. ಆದರೆ ಬಿಜೆಪಿಯ ಪರಮಾಪ್ತ್ತ (ಕ್ರೋನಿ) ಬಂಡವಾಳಿಗ ಧಣಿಗಳು ಮತ್ತು ಬಿಜೆಪಿ ಪಕ್ಷದ ಪ್ರಧಾನ ಬೆಂಬಲಿಗರಾದ ನಗರದ ಮಧ್ಯಮವರ್ಗ ಮತ್ತು ವರ್ತಕ ಗಣವು ಅಂಥ ಯಾವುದೇ ಸುಧಾರಣೆಗಳನ್ನು ಖಂಡತುಂಡವಾಗಿ ವಿರೋಧಿಸುತ್ತವೆ. ಆದರೆ ಒಂದು ಚುನಾವಣಾ ವರ್ಷದಲ್ಲಿ ಇತರ ರಾಜ್ಯಗಳು ಮಹಾರಾಷ್ಟ್ರವನ್ನು ಅನುಸರಿಸುವಂತೆ ಮಾಡಬೇಕೆಂದರೆ ಬಿಜೆಪಿಯು ಕತ್ತಿಯ ಮೇಲಿನ ನಡಿಗೆಯನ್ನೇ ಮಾಡಬೇಕಾಗುತ್ತದೆ.


ಕೃಪೆ: Economic and Political WeeklyMar 17,  2018. Vol. 53. No.11
                                                                                                    
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )